Don't Miss!
- News ರಾಯಚೂರಿನಲ್ಲಿ ಭಿನ್ನಮತ ಸ್ಫೋಟ: ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ..!
- Automobiles ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: ಸ್ವಾತಂತ್ರ್ಯ ದಿನದಂದು 5-ಡೋರ್ ಅವತಾರದಲ್ಲಿ ಲಗ್ಗೆ
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Finance ಲೋಕಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಪುಟಾಣಿ ಹಕ್ಕಿಗಳ ಕುಹು ಕುಹು ನಾದ
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಕೆಲ ದಿವಸಗಳ ಹಿಂದಷ್ಟೇ ಚಾಲೆಂಜ್ ಸಂಗೀತ ಸಮರ ಸರಣಿ ಸುತ್ತು ಮುಗಿಸಿದ್ದು ಇದೀಗ ಪುನಃ ಮಕ್ಕಳಿಗಾಗಿ ಲಿಟಲ್ ಚಾಂಪ್ಸ್ ಸರಣಿ ಆರಂಭಿಸಿದೆ.
ಪುಟಾಣಿ ಹಕ್ಕಿಗಳ ಹಾಡಿನ ಹೂಮಳೆ ಇದೇ ಸೆಪ್ಟಂಬರ್ 15 ರಿಂದ ಜೀ ಕನ್ನಡದಲ್ಲಿ ಪ್ರಾರಂಭವಾಗಲಿದ್ದು ಪ್ರತಿ ಬುಧವಾರ ಹಾಗೂ ಗುರುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಅದ್ದೂರಿಯಾಗಿ ನಿರ್ಮಿಸಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್ ಹಾಗೂ ರಘುದೀಕ್ಷಿತ್ ಮತ್ತು ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ತೀರ್ಪುಗಾರರಾಗಿದ್ದಾರೆ.
ಈ ಸರಣಿಗಾಗಿ ಜೀ ಕನ್ನಡ ಕಳೆದ ಎರಡು ತಿಂಗಳುಗಳಿಂದ ಸಿದ್ಧತೆ ನಡೆಸಿ ರಾಜ್ಯದಾದ್ಯಂತ ಬಾಲ ಪ್ರತಿಭೆಗಳಿಗಾಗಿ ಆಡಿಷನ್ ನಡೆಸಿತ್ತು. ಇದೀಗ ರಾಜ್ಯದಾದ್ಯಂತ 20 ಅಭೂತಪೂರ್ವ ಗಾಯನ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದ್ದು ಇವರ ನಡುವೆ ಹಣಾಹಣಿ ಏರ್ಪಡಲಿದೆ.
ಈ ಪೈಕಿ 12 ಜನ ಬಾಲಕಿಯರು ಆಯ್ಕೆಯಾಗಿದ್ದು 08 ಜನ ಬಾಲಕರು ಸ್ಪರ್ಧೆಯಲ್ಲಿದ್ದಾರೆ. ಈ ಸರಣಿಯಲ್ಲಿಯೂ ವಿವಿಧ ಹಂತಗಳ ಎಲಿಮಿನೇಷನ್ ಇದ್ದು ಅಂತಿಮ ವಿಜೇತರು ಭಾರಿ ಬಹುಮಾನವನ್ನು ತನ್ನದಾಗಿಸಿಕೊಳ್ಳಲಾಗಿದ್ದಾರೆ ಎಂದು ಜೀ ಕನ್ನಡದ ವ್ಯವಹಾರಗಳ ಮುಖ್ಯಸ್ಥರಾದ ಜೆ. ಶೇಖರ್ ಹೇಳಿದ್ದಾರೆ.
ಇದು ಮಕ್ಕಳ ಸರಣಿಯಾಗಿರುವ ಹಿನ್ನೆಲೆಯಲ್ಲಿ ಶಾಲೆಯ ಅಂಶಗಳಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮವೂ ಸಹ ಶಾಲೆಯ ಮಾಧರಿಯಲ್ಲಿಯೇ ಇದ್ದು ಸ್ಪರ್ಧಿಗಳನ್ನು ವಿದ್ಯಾರ್ಥಿಗಳಂತೆ, ತೀರ್ಪುಗಾರುರು ಗುರುವೃಂದದಂತೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪಠ್ಯಕ್ಕೆ ಪೂರಕವಾಗಿರುವ ಗೀತೆಗಳನ್ನೇ ಇಲ್ಲಿ ಆಯ್ಕೆ ಮಾಡಿಕೊಳ್ಳಲಿದ್ದು ಇತಿಹಾಸ, ವಿಜ್ಞಾನ, ಕನ್ನಡ ನಾಡು ನುಡಿಯಂತಹ ಇವೇ ಮುಂತಾದ ವಿಷಯಗಳಿಗೆ ಪೂರಕವಾದ ಹಾಡುಗಳು ತೆರೆಯಲ್ಲಿ ರಂಜಿಸಲಿವೆ. ವಿವಿಧ ಹಂತಗಳನ್ನು ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ಹಾಗೂ ಅಂತಿಮ ಪರೀಕ್ಷೆಗಳೆಂದು ಕರೆಯಲಾಗಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.