Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾವಣಗೆರೆ ಮಹಿಳೆಯರಿಗೆ ಸುವರ್ಣಾವಕಾಶ!
ನಾಡಿನ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಜೀ ಕನ್ನಡ ನಿರ್ಮಿಸಿ ಪ್ರಸಾರ ಮಾಡುತ್ತಿರುವ ಹೋಮ್ ಮಿನಿಸ್ಟರ್ ಕಾರ್ಯಕ್ರಮ ಈಗ ಮತ್ತಷ್ಟು ಹೊಸತನದೊಂದಿಗೆ ವೀಕ್ಷಕರನ್ನು ತಲುಪುತ್ತಿದೆ. ವಿವಿಧ ಕ್ಷೇತ್ರಗಳ ಮಹಿಳೆಯರನ್ನು ವೇದಿಕೆಗೆ ಕರೆತಂದು ಅವರಲ್ಲಿರುವ ವೈವಿಧ್ಯಮಯ ಪ್ರತಿಭೆಯನ್ನು ಅನಾವರಣಗೊಳಿಸಲು ಅನುವು ಮಾಡಿಕೊಟ್ಟ ಜೀ ಕನ್ನಡದ 'ಹೋಮ್ ಮಿನಿಸ್ಟರ್' ಕಾರ್ಯಕ್ರಮ ಈಗ ರಾಜ್ಯದ ವಿವಿದ ಜಿಲ್ಲೆಗಳ ಮಹಿಳೆಯರನ್ನು ತಲುಪಲು ಸಿದ್ದತೆ ನಡೆಸಿದೆ.
ಈ ನಿಟ್ಟಿನಲ್ಲಿ ಈ ವಾರ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಇದೇ ಅಕ್ಟೋಬರ್ 18 ರಿಂದ 20 ನೇ ತಾರೀಖಿನವರೆಗೂ (ಸೋಮವಾರದಿಂದ ಬುಧವಾರದವರೆಗೂ) 'ಹೋಂ ಮಿನಿಸ್ಟರ್' ಕಾರ್ಯಕ್ರಮವನ್ನು ಜೀ ಕನ್ನಡ ವಾಹಿನಿ ತಂಡ ದಾವಣಗೆರೆಯಲ್ಲಿ ನಡೆಸಲಿದೆ.
ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿರುವ ತಂಡ ನಿಗದಿತ ಪ್ರದೇಶಗಳಲ್ಲಿನ ಗೃಹಿಣಿಯರನ್ನು ಒಂದೆಡೆ ಸೇರಿಸಿ ಅವರ ನಡುವೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಿದೆ. ಗೆದ್ದವರಿಗೆ ಬಹುಮಾನ ಸಹ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸುತ್ತು ಸಹ ಇದ್ದು ಪ್ರೇಕ್ಷಕರೂ ಸಹ ಸ್ಪರ್ಧೆ ಹಾಗೂ ಪ್ರಶ್ನಾ ವಿಭಾಗದಲ್ಲಿ ಭಾಗವಿಸಿ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಈ ಮೂಲಕ ಮಹಿಳೆಯರ ವೈವಿಧ್ಯಮಯ ಪ್ರತಿಭೆಯನ್ನು ಒರೆಹಚ್ಚಲು ಜೀ ಕನ್ನಡ ದಾವಣಗೆರೆಯ ಮಹಿಳೆಯರಿಗಾಗಿ ಸುವರ್ಣಾವಕಾಶ ಕಲ್ಪಿಸುತ್ತಿದ್ದು, ದಾವಣಗೆರೆಯ ಮಹಾ ಜನತೆ ಇದರ ಸದುಪಯೋಗ ಪಡೆಯಬಹುದಾಗಿದೆ. ಈ ಕಾರ್ಯಕ್ರಮವನ್ನು ಕುರಿ ಖ್ಯಾತಿಯ ಪ್ರತಾಪ್ ನಿರೂಪಿಸಲಿದ್ದಾರೆ.
ಸುಮಾರು ಮೂರು ದಿವಸಗಳ ಕಾಲ ಆಯೋಜಿಸಿರುವ ಕಾರ್ಯಕ್ರಮ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 08 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ 99800 17753 ಸಂಪರ್ಕಿಸಬಹುದು.
*ಸೋಮವಾರ(ಅ.18):
ವಿಶ್ವವಿದ್ಯಾನಿಲಯ
ಲಲಿತಕಲಾ
ಮಹಾವಿದ್ಯಾಲಯ,
ವಿದ್ಯಾನಗರ,
ದಾವಣಗೆರೆ.
*ಮಂಗಳವಾರ
(ಅ.19):
ಸೋಮೇಶ್ವರ
ವಿದ್ಯಾಲಯ,
ಅದಾಡಿ
ರಸ್ತೆ,
ದಾವಣಗೆರೆ.
*ಬುಧವಾರ
(ಅ.20)
:
ಶಿವಯೋಗಿ
ಆಶ್ರಮ,
ಜಯದೇವ
ಸರ್ಕಲ್,
ದಾವಣಗೆರೆ.