Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಪ್ಪುತಕ್ಕಡಿ ಜೊತೆ ಕ್ಯಾಮೆರಾಮೆನ್ ಐತಲಕಡಿ
ಕನ್ನಡದ ಕಿರುತೆರೆಯ ವಾರ್ತಾಪ್ರಸಾರದ ಬಗ್ಗೆ ಎರಡು ಮಾತು. ಸರ್ಕಾರಿ ಕಾರ್ಯಕ್ರಮದಂತಿರುವ 'ಚಂದನ' ವಾರ್ತೆಯನ್ನು ಅನ್ಯ ಆಯ್ಕೆಯಿಲ್ಲದವರು ಮಾತ್ರ ನೋಡುತ್ತಾರೆ. ಖಾಸಗಿ ಚಾನೆಲ್ಗಳ ಕನ್ನಡ ವಾರ್ತಾ ಪ್ರಸಾರದಲ್ಲಿ ವೈವಿಧ್ಯ ಇರುತ್ತದಾದರೂ ಅದರೊಡನೆ ಅಪರಿಮಿತ ಹಿಂಸೆಯೂ ತಳಕುಹಾಕಿಕೊಂಡಿರುತ್ತದೆ!
ತಲೆಚಿಟ್ಟುಹಿಡಿಯುವಷ್ಟು ಜಾಹೀರಾತುಗಳ ಮಧ್ಯೆ ವಾರ್ತೆಗಾಗಿ ವೀಕ್ಷಕರು ತಾಳ್ಮೆಯಿಂದ ಕಾಯಬೇಕಾಗುತ್ತದೆ. ವಾರ್ತೆಯ ಮಧ್ಯೆ ಪದೇಪದೇ ವಿವಿಧ ಉಪಶೀರ್ಷಿಕೆಗಳ ಯಮಕಗಳು (ಜಿಂಗಲ್ಗಳು) ಯಮಸದೃಶವಾಗಿ ಅಬ್ಬರಿಸುತ್ತವಲ್ಲದೆ ವೃಥಾ ಒಂದಷ್ಟು ಕಾಲಹರಣ ಮಾಡುತ್ತವೆ.
ಸುದ್ದಿ/ವರದಿ ತೋರಿಸುವಾಗ ಅದರ ನಿರೂಪಕರು ಹೇಳಲಿರುವುದನ್ನೇ ಅದಕ್ಕಿಂತ ಮುಂಚೆ ವಾರ್ತಾ ವಾಚಕರೊಮ್ಮೆ ಅನಗತ್ಯವಾಗಿ ಇಷ್ಟುದ್ದ ಹೇಳುತ್ತಾರೆ. ('ಈ ಟಿವಿ'ಯಂತೂ ಪ್ರಧಾನ ವಾರ್ತೆಯನ್ನು ಐದು ಸಲ ಒದರುವ ಮೂಲಕ ವೀಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ!).
ಇಷ್ಟೆಲ್ಲ ಹಿಂಸೆಗಳು ಸಾಲದೆಂಬಂತೆ, ವಿಷಯಜ್ಞಾನ ಮತ್ತು ಭಾಷಾಜ್ಞಾನ ಎರಡರ ಕೊರತೆಯನ್ನೂ ಹೊಂದಿರುವ ವಾರ್ತಾ ವಾಚಕರು ಬೆಪ್ಪುಬೆಪ್ಪಾಗಿ ಕ್ಯಾಮೆರಾ ನೋಡುತ್ತ ತಪ್ಪುತಪ್ಪಾಗಿ ವಾರ್ತೆ ಊದುವುದನ್ನು ವೀಕ್ಷಕರು ಸಹಿಸಿಕೊಳ್ಳಬೇಕು. ಜೊತೆಗೆ, ಪ್ರತಿ ವಾರ್ತಾ ಸಂಚಿಕೆಯಲ್ಲೂ ಅಪಘಾತ/ಕೊಲೆ/ಎನ್ಕೌಂಟರ್ ಶವಗಳ ಕ್ಲೋಸಪ್ ಶಾಟ್ಗಳ ಭಯಾನಕ ಚಿತ್ರಗಳು ನೋಡುಗರನ್ನು ಬೆಚ್ಚಿಬೀಳಿಸದಿದ್ದರೆ ಕೇಳಿ. ಖಾಸಗಿ ಟಿವಿ ಚಾನೆಲ್ಗಳು ಪ್ರಸಾರಮಾಡುವ ಕನ್ನಡ ವಾರ್ತೆಯು 'ಭಯಾನಕ ಚಿತ್ರ'ಹಿಂಸೆಯಲ್ಲದೆ ಮತ್ತೇನು?