ಸಚಿವರ ಕೊಲೆಯತ್ನದಲ್ಲಿ ಪಕ್ಕದಲ್ಲಿದ್ದ ಪತ್ನಿಗೆ ಏಟು

ತನಗಿಂತ 30 ವರ್ಷ ಕಿರಿಯ ಸಾವಿತ್ರಿಯನ್ನು ವರಿಸಿದ್ದೂ ಆಗಿದೆ. ಸಾವಿತ್ರಿಯ ಕುಂಕುಮವೇ ನರಸಿಂಹರಾವ್ ಅವರನ್ನು ಕಾಪಾಡುತ್ತದೆ ಎಂದು ಭವಾನಿ ಅಮ್ಮ ಭವಿಷ್ಯ ನುಡಿದಿದ್ದು ಅನುರಣಿಸುತ್ತಿದೆ. ಹೀಗಿದ್ದರೂ ಅವರಿಗೆ ಸಾವಿತ್ರಿ ಮೇಲೆ ಮುನಿಸು. ಅದರೆ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ನರಸಿಂಹರಾವ್ ಊರ ಜಾತ್ರೆಗೆ ಪತ್ನಿ ಸಾವಿತ್ರಿ ಸಮೇತ ತೆರಳುತ್ತಾರೆ.
ಈ ವಿಷಯ ಅರಿತ ವಿರೋಧಿಗಳಾದ ಜಗ್ಗು, ಇಂದ್ರಜಿತ್ ಮತ್ತು ಮಹತ್ವಾಕಾಂಕ್ಷಿ ನಾದಿನಿ ಅಹಲ್ಯಾ ಸೇರಿಕೊಂಡು ಜಾತ್ರೆಯಲ್ಲಿ ಕೊಲೆಯ ಷಡ್ಯಂತ್ರ ಹೂಡುತ್ತಾರೆ. ಕೆಂಡಹಾಯುತ್ತಿದ್ದ ಸಾವಿತ್ರಿ ಗಮನಕ್ಕೆ ಬಂದು ಅಕೆ ಪತಿಯನ್ನು ರಕ್ಷಿಸುತ್ತಾಳೆ. ಸಾವಿತ್ರಿಗೆ ಮಾರಣಾಂತಿಕ ಏಟಾಗುತ್ತದೆ.
ಸಾವಿತ್ರಿ ನಿಧನಳಾದರೆ ನರಸಿಂಹರಾವ್ಗೆ ಉಳಿಗಾಲವಿಲ್ಲ! ಹಾಗಾದರೆ ಮುಂದೇನು? ವೈಭವದ ಜಾತ್ರೆ ಸನ್ನಿವೇಶಗಳು, ಮೈ ನವಿರೇಳಿಸುವ ಆಕ್ರಮಣದ ಯತ್ನಗಳು ಇವುಗಳಿಂದ ಕೂಡಿದ ಜನಪ್ರಿಯ ಕೌಟುಂಬಿಕ ಧಾರಾವಾಹಿ 'ಚಿ|ಸೌ| ಸಾವಿತ್ರಿ'ಯನ್ನು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











