Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದ್ಯೋಗಾಕಾಂಕ್ಷಿಗಳಿಗೊಂದು ರಿಯಾಲಿಟಿ ಶೋ
ರಿಯಾಲಿಟಿ ಶೋಗಳಿಂದ ರಾಖಿ ಸಾವಂತ್ ಅವರಷ್ಟೇ ಖ್ಯಾತರಾದವರು ರಾಹುಲ್ ಮಹಾಜನ್.ಈಗವರು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು ಟಿವಿ ಕಾರ್ಯಕ್ರಮವೊಂದನ್ನು ನಿರ್ಮಿಸಲಿದ್ದಾರೆ. ನಿರುದ್ಯೋಗಿ ಯುವಕರಿಗಾಗಿಯೇಈ ರಿಯಾಲಿಟಿ ಶೋ ರೂಪಿಸಿರುವುದು ವಿಶೇಷ. ಈ ಮೂಲಕ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸಲು ರಾಹುಲ್ ಕಂಕಣ ತೊಟ್ಟಿದ್ದಾರೆ.
"ನನ್ನ ಸಹ ನಿರ್ಮಾಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದೇನೆ. ಈ ರಿಯಾಲಿಟಿ ಶೋ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಸೇವೆ ನೀಡಲಿದ್ದೇನೆ. ಸಂದರ್ಶನ ಎದುರಿಸುವುದು ಹೇಗೆ? ಸೂಕ್ತ ಕೆಲಸವನ್ನು ಆಯ್ಕೆ ಮಾಡುವುದು ಹೇಗೆ ಎಂಬಿತ್ಯಾದಿ ಸೂಚನೆ, ಸಲಹೆಗಳನ್ನು ನೀಡಲಾಗುತ್ತದೆ" ಎಂದು ಅವರು ವಿವರ ನೀಡಿದ್ದಾರೆ .
"ಜಾಬ್ ಟೈಮ್ ಟಿವಿ ಎಂದು ಹೆಸರಿಟ್ಟಿರುವ ಕಾರ್ಯಕ್ರಮ ಬೆಳಗ್ಗೆ 8.30 ಎನ್ಡಿಟಿವಿ ಇಮ್ಯಾಜಿನ್ನಲ್ಲಿ ಪ್ರಸಾರವಾಗಲಿದೆ. ಉದ್ಯೋಗಾಕಾಂಕ್ಷಿಗಳು ಹಾಸಿಗೆ ಬಿಟ್ಟು ಬೇಗ ಏಳಲಿ ಎಂಬ ಉದ್ದೇಶದಿಂದ ಬೆಳಗ್ಗೆಯೇ ಕಾರ್ಯಕ್ರಮವನ್ನು ಪ್ಲಾನ್ ಮಾಡಿದ್ದೇವೆ ಎನ್ನುತ್ತಾರೆ ರಾಹುಲ್. ಕಾರ್ಯಕ್ರಮ ಪ್ರಸಾರವಾಗಲಿರುವ ದಿನಾಂಕ ಶೀಘ್ರ ತಿಳಿಸುವುದಾಗಿ ಹೇಳಿದ್ದಾರೆ.
"1992ರಲ್ಲಿ ಟೇಸ್ಟ್ ಆಫ್ ಇಂಡಿಯಾ (ದೂರದರ್ಶನ) ನಿರ್ಮಾಣ ತಂಡದಲ್ಲಿ ಒಬ್ಬನಾಗಿದ್ದು ಹೊರತುಪಡಿಸಿದರೆ, ನಾನು ಇದುವರೆಗೂ ಯಾವುದೇ ಕೆಲಸ ಮಾಡಿಲ್ಲ. ಈಗ ಪ್ರಾರಂಭಿಸುತ್ತಿರುವ ಕಾರ್ಯಕ್ರಮ ಖಂಡಿತ ನಿರುದ್ಯೋಗಿಗಳಿಗೆ ವರದಾನವಾಗಲಿದೆ" ಎನ್ನುತ್ತಾರೆ ರಾಹುಲ್ ಮಹಾಜನ್.