ಬನ್ನೇರುಘಟ್ಟದಲ್ಲಿ ಕಾಣಿಸಿಕೊಂಡ ಕಾಡುಗಳ್ಳ ವೀರಪ್ಪನ್

Veerappan
ಕಾಡುಗಳ್ಳ ವೀರಪ್ಪನ್ನನ್ನು ಹೋಲುವ ವ್ಯಕ್ತಿಯೊಬ್ಬ ಬನ್ನೇರುಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ. ಈತನ ಜೊತೆಗೆ ಇಬ್ಬರು ಯುವಕರು ಮತ್ತು ಮಹಿಳೆಯೂ ಇದ್ದಾರೆ. ತಮಿಳು-ಕನ್ನಡ-ಹಿಂದಿ-ತೆಲುಗು ಮಿಶ್ರಿತ ಭಾಷೆ ಮಾತನಾಡುತ್ತಿದ್ದು ವೀರಪ್ಪನ್ ಥರ ಬಟ್ಟೆ ಧರಿಸಿದ್ದಾರೆ. ದುರ್ಗಾಪುರ ದೇವಾಲಯದ ಅಮ್ಮನವರ ಚಿನ್ನದ ಕಿರೀಟ ಕದ್ದವರು ಇವರೇ ಇರಬಹುದೆಂಬ ಗುಮಾನಿ ಇದೆ. ಮೊಕ್ತೇಸರ ಕೇಶವನಾಥ, ಗೃಹಸಚಿವರನ್ನು ಈ ಸಂಬಂಧ ಭೇಟಿಯಾಗಿ ಮಾತುಕಥೆ ನಡೆಸಿದ್ದಾರೆ.

ಇದು ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ, 'ಶನಿವಾರ' ಹಾಗೂ 'ಭಾನುವಾರ' ರಾತ್ರಿ '9.00 ಗಂಟೆ'ಗೆ ಪ್ರಸಾರವಾಗುತ್ತಿರುವ 'ದೇವಿ' ಧಾರಾವಾಹಿಯ ಸಧ್ಯದ ವಿದ್ಯಮಾನ. ಅಮ್ನೋರ ಕಿರೀಟದ ಕಾರಣದಿಂದ ತನ್ನೆಲ್ಲ ಆಸ್ತಿಯನ್ನೂ ಕಳೆದುಕೊಂಡ ದೇವಿಯ ಅಪ್ಪ ಸದಾಶಿವ, ಕಾಡು ಪಾಲಾಗಿದ್ದಾನೆ. ಹುಚ್ಚನಂತೆ ಅಲೆಯುತ್ತಿದ್ದ ಸದಾಶಿವ ಆ ಕಳ್ಳರ ಕೈಗೆ ಸಿಕ್ಕಿದ್ದಾನೆ. ಅವರ ಬಳಿಯೇ ಇದೆ ಕದ್ದು ತಂದ ಅಮ್ನೋರ ಕಿರೀಟ!

ಲೋಕಕಲ್ಯಾಣಕ್ಕಾಗಿ ಅಮ್ನೋರು ಮಹಾಶಂಖದಲ್ಲಿ ತುಂಬಿದ್ದ ವರವನ್ನು ಪರೀಕ್ಷೆ ಮಾಡಿದ್ದ ನಾಸ್ತಿಕ ಸದಾಶಿವ. ಈಗ ಅದರ ಫಲ ಅನುಭವಿಸುತ್ತಿದ್ದಾನೆ. ಇನ್ನೂ ಬಾಕಿ ಇವೆ ಎಂಟು ಕ್ಷೇತ್ರಗಳ ಯಾತ್ರೆ ! ಇದು ಹರಕೆ. ಮುಂದಿನ ಶೃಂಗೇರಿ ಯಾತ್ರೆಗೆ ಅಮ್ನೋರ ಕಿರೀಟವೇ ಕಾರಣವಾಗುತ್ತಾ? ಜಗನ್ಮಾತೆಯ ಲೀಲಾಮೃತದ ಈ ಧಾರಾವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿದೆ. ಜಗನ್ಮಾತೆಯ ಪಾತ್ರದಲ್ಲಿ ಕಲಾವಿದೆ ಶಮಾ ಪ್ರವೇಶ ಮೆಚ್ಚುಗೆಗೆ ಪಾತ್ರವಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Zee Kannada Serial 'Devi' is running successfully. New Character Veerappan enters the serial. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X