Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ಸುಶೀಲ್ಗೆ ರು.5 ಕೋಟಿ ಬಹುಮಾನ ಸಿಕ್ತು
ಸೋನಿ ವಾಹಿನಿಯ ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ ಕರೋಡ್ಪತಿ'ಯಲ್ಲಿ ಸುಶೀಲ್ ಕುಮಾರ್ ರು.5 ಕೋಟಿ ಬಹುಮಾನ ಗೆದ್ದಿದರು. ಆದರೆ ಈ ಬಹುಮಾನದ ಮೊತ್ತ ಅವರ ಕೈಸೇರಿರಲಿಲ್ಲ. ಈ ಬಗ್ಗೆ ಸುಶೀಲ್ ತೀವ್ರ ಆತಂಕಕ್ಕೆ ಈಡಾಗಿದ್ದರು. ಕಡೆಗೂ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ರು.5 ಕೋಟಿಯನ್ನು ಸುಶೀಲ್ಗೆ ಹಸ್ತಾಂತರಿ ಅವರ ಆತಂಕವನ್ನು ದೂರ ಮಾಡಿದ್ದಾರೆ.
ಈ ಬಗ್ಗೆ ಬಿಗ್ ಬಿ ಪ್ರತಿಕ್ರಿಯಿಸುತ್ತಾ, ಕೆಬಿಸಿಯ ಅತ್ಯುತ್ತಮ ಟೀಂನಿಂದ ಮಾತ್ರ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ. ಈ ಬಾರಿಯ ಸೀಸನ್ ಹಲವು ವಿಶೇಷತೆಗಳಿಂದ ಕೂಡಿತ್ತು. ಕೆಬಿಸಿಯ ಅಡಿಬರಹವನ್ನು ಸುಶೀಲ್ ಸಾಬೀತುಪಡಿಸಿದ್ದಾರೆ. ಅವರಿಗೆ ರು.5 ಕೋಟಿ ಚೆಕ್ ಹಸ್ತಾಂತರಿಸಲಾಯಿತು ಎಂದಿದ್ದಾರೆ.
ಚೆಕ್ ಸ್ವೀಕರಿಸಿದ ಬಳಿಕ ಸುಶೀಲ್ ಮಾತನಾಡುತ್ತಾ, ಕಾರ್ಯಕ್ರಮದ ಸ್ಪರ್ಧಾಳುಗಳು ನೈಜ ಭಾರತ ದರ್ಶನವನ್ನು ಮಾಡಿಸಿದರು. ಕೆಲವರು ತುಂಬ ಸಂಕಷ್ಟದಲ್ಲಿದ್ದರು. ಅವರ ಕಷ್ಟವನ್ನು ಕಣ್ಣಾರೆ ಕಂಡಾಗ ಪಾಪಪ್ರಜ್ಞೆ ಕಾಡುತ್ತಿತ್ತು ಎಂದಿದ್ದಾರೆ. ಏನೇ ಆಗಲಿ ಬಹುಮಾನದ ಮೊತ್ತ ಸುಶೀಲ್ ಕೈಸೇರಿದೆ. (ಏಜೆನ್ಸೀಸ್)