Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರಹ್ಮಾಂಡದ ಖ್ಯಾತಿಯ ನರೇಂದ್ರಬಾಬು ಶರ್ಮ ಜತೆ ಮಾತುಕತೆ
ತಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪ್ರವಚನಗಳ ಮೂಲಕ ನರೇಂದ್ರಬಾಬು ಶರ್ಮ ಅವರು ರಾಜ್ಯದ ಜನತೆಯ ಜೀವನಕ್ಕೆ ಉಪಯುಕ್ತವಾದ ವಿಚಾರಗಳನ್ನು ಜೀ ಕನ್ನಡದ ಮೂಲಕ ನಿತ್ಯವೂ ಹಂಚಿಕೊಳ್ಳುತ್ತಿದ್ದು ಅಪಾರ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಇವರ ವಿಚಾರಧಾರೆಗೆ ಮನಸೋತಿರುವ ಭಕ್ತಕೋಟಿ ಇವರನ್ನು ಸಂಪರ್ಕಿಸಲು ನಿತ್ಯವೂ ಪ್ರಯತ್ನಿಸುತ್ತಿರುವುದು ವಾಹಿನಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವೀಕ್ಷಕರು ಅವರನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ವಿವಿಧ ಪ್ರವಚನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜೀ ಸೌಥ್ಹೆಡ್ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರವಚನ ಆರಂಭವಾಗುತ್ತಿದ್ದು ಇನ್ನು ಮುಂದೆ ರಾಜ್ಯದ ವಿವಿಧ ನಗರಗಳಿಗೂ ಭೇಟಿ ನೀಡಿ ಪ್ರವಚನ ನೀಡಲಿದ್ದಾರೆ. ತಮ್ಮ ಪ್ರವಚನದಲ್ಲಿ ಅವರು ಆಧ್ಯಾತ್ಮಿಕ, ಲೌಕಿಕ ಹಾಗೂ ಕ್ಷೇತ್ರ ದರ್ಶನದ ವಿಚಾರಗಳೊಂದಿಗೆ ಪ್ರಳಯ ಕುರಿತ ಮಾಹಿತಿಯನ್ನು ಸಹ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಪ್ರವಚನದ ಸ್ಥಳ ಹಾಗೂ ದಿನಾಂಕ: ದಿನಾಂಕ 20.03.2011ರ ಭಾನುವಾರ. ಶ್ರೀ ದುರ್ಗಾಪರಮೇಶ್ವರಿ ಆಟದ ಮೈದಾನ, ಆರ್. ವಿ. ಡೆಂಟಲ್ ಕಾಲೇಜ್ ಎದುರು, ಜೆ.ಪಿ. ನಗರ, 2ನೇ ಹಂತ, ಬೆಂಗಳೂರು. ಸಮಯ: ಸಂಜೆ 6.30 ಗಂಟೆಗೆ. ಪ್ರವಚನದೊಂದಿಗೆ ಸಾರ್ವಜನಿಕರು ಅವರನ್ನು ನೇರವಾಗಿ ಭೇಟಿ ಮಾಡಬಹುದಾಗಿದೆ ಎಂದು ಜೀಕನ್ನಡ ಪ್ರಕಟಣೆ ತಿಳಿಸಿದೆ.