Don't Miss!
- News ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
- Finance ಟಿಸಿಎಸ್ನಿಂದ ಭಾರತೀಯ ಸೇನೆಗೆ ಸೇರಿದ ಲೆಫ್ಟಿನೆಂಟ್ ದಿವ್ಯಾಂಗಿನಿ ತ್ರಿಪಾಠಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ಟಿವಿ ರಂಗನಾಥ್ ಬಗ್ಗೆ ಏಳು ಪ್ಯಾರ
ಆಗ ಕನ್ನಡಪ್ರಭ ಸಂಪಾದಕರಾಗಿದ್ದ ವಂಡರ್ ಕಣ್ ವೈ ಎನ್ ಕೆ ಹಠಾತ್ ಸಾವಿನಿಂದ ತೆರವಾದ ಜಾಗಕ್ಕೆ ಬಂದವರು ಕೆ. ಸತ್ಯನಾರಾಯಣ. ಕರ್ನಾಟಕ ಪತ್ರಕರ್ತರಿಗೆ ಗುರು ಸಮಾನರಾದ ಇವರು ನನಗೂ, ನಿಮಗೂ ಎಲ್ಲರಿಗೂ ಜಸ್ಟ್ ಸತ್ಯ. ಸತ್ಯ ಅವರ ನಿವೃತ್ತಿಯಿಂದ ಖಾಲಿಯಾದ ಕುರ್ಚಿಯಲ್ಲಿ ರಂಗ ಅವರನ್ನು ಕುಳ್ಳಿರಿಸಿದವರು news in English ಗುರು ಟಿ ಜೆ ಎಸ್ ಜಾರ್ಜ್.
ರಂಗ ಪಕ್ಕಾ ಪತ್ರಕರ್ತ. ದೂಸರಾ ಮಾತಿಲ್ಲ. ಅಪರಾಧ, ಕಾನೂನು, ಪೊಲೀಸು, ಕೋರ್ಟು, ಕೇಸು, ಜಾಮೀನು, ತೀರ್ಪು, ಮೇಲ್ಮನವಿ, ವಿಧಾನಸಭಾ ಕಲಾಪಗಳು, ಅಲ್ಲಿನ ನಡಾವಳಿಗಳು, ರಾಜಕಾರಣಿಗಳ ಸೋಗು, ರಾಜಕೀಯದ ಒಳಸುಳಿಗಳನ್ನು ಪದರಪದರವಾಗಿ ವರದಿ ಮಾಡುವುದು ಮತ್ತು ವಿಶ್ಲೇಷಣೆ ಮಾಡುವುದರಲ್ಲಿ ಬಲೇ ನಿಪುಣ.
ಮೂರೂವರೆ ದಶಕಗಳ ಕಾಲ ಒಂದೇ ಗೇರಿನಲ್ಲಿ ಓಡುತ್ತಿದ್ದ ಕನ್ನಡಪ್ರಭ ಲಾರಿಯ ಗೇರು ಬದಲಾಯಿಸಿದ್ದು ಸಂಪಾದಕ ರಂಗ. ಎಳೆಯರನ್ನು ಹುರಿದುಂಬಿಸುವುದೇನು, ತಂಡ ಕಟ್ಟುವುದೇನು, ಸುದ್ದಿಗೆ, ಸುದ್ದಿ ನಿರ್ವಹಣೆಗೆ, ಪುಟಕ್ಕೆ, ಪುಟ ನಿರ್ವಹಣೆಗೆ ಹೊಸ ಮಜಲು ಕೊಡುವುದೇನು, ಪತ್ರಿಕೆಗೆ ಹೊಸ ಕಳೆ ಬೆಳೆ ತಂದು ಕೊಟ್ಟದ್ದು ಇದೇ ರಂಗ. ಪರಂತು, ಆರು ವರ್ಷ ಏನೇ ತಿಪ್ಪರಲಾಗ ಹಾಕಿದರೂ ಪತ್ರಿಕೆಯ ಪ್ರಸಾರ ಸಂಖ್ಯೆ 2 ಲಕ್ಷದ ಗಡಿ ದಾಟಿಸಲಾಗಲಿಲ್ಲ. ಅದು ಬೇರೆ ವಿಷ್ಯ.
ಕೇವಲ ಕಂಟೆಂಟಿನಿಂದ ಪತ್ರಿಕೆ ಬೆಳೆಯದು ಎನ್ನುವ ಸತ್ಯ ನನಗೂ ಗೊತ್ತು, ಸೀತಾರಾಮ ಶಾಸ್ತ್ರಿಗಳಿಂದ ಮೊದಲುಗೊಂಡು ರಂಗಾವರೆಗೂ ನಾಲಕ್ಕು ದಶಕಗಳ ಅವಧಿಯಲ್ಲಿ ಕನ್ನಡಪ್ರಭ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಗೊತ್ತು. ನಿಮಗೂ ಗೊತ್ತು. ಪತ್ರಿಕೆಯ ಸಂಪಾದಕರಾಗಿ ಈಗ ಚುಕ್ಕಾಣಿ ಹಿಡಿದಿರುವ ವಿಶ್ವೇಶ್ವರ ಭಟ್ಟರಿಗೂ ಗೊತ್ತಿದೆ.
ಹೀಗಿರುವಾಗ ಒಂದು ದಿನ ಏನಾಯಿತೆಂದರೆ ಏಶಿಯಾ ನೆಟ್ ಸುಪರ್ದಿನಲ್ಲಿ ಕುಂಟಾಪಿಲ್ಲೆ ಆಡುತ್ತಿದ್ದ ಸುವರ್ಣ ಟಿವಿ ಕನ್ನಡ ಚಾನಲ್ಲಿನಲ್ಲಿನ ಕಂಟೆಂಟ್ ಮುಖ್ಯಸ್ಥ ಶಶಿಧರ ಭಟ್ ಅವರ ಬಗ್ಗೆ ಮ್ಯಾನೇಜ್ ಮೆಂಟಿಗೆ ಅದ್ಯಾಕೋ ಬೋರು ಹೊಡೆಯಿತು. ಮಾತಿನ ಮಲ್ಲ ರಂಗಾ ಅವರಿಗೆ ಬುಲಾವ್ ಹೋಯಿತು. ತಾನಲ್ಲದೆ ಕನ್ನಡಪ್ರಭದಲ್ಲಿ ತನ್ನ ಜತೆ ಕೆಲಸ ಮಾಡುತ್ತಿದ್ದ ಎಲ್ಲ "ಟ್ಯಾಲೆಂಟೆಡ್ ಜರ್ನಲಿಸ್ಟು"ಗಳನ್ನು ಕಟ್ಟಿಕೊಂಡು ಡಬ್ಬಲ್ ತ್ರಿಬ್ಬಲ್ ಸಂಬಳ ಸಾರಿಗೆಗೆ ಸುವರ್ಣ ನ್ಯೂಸ್ ಚಾನಲ್ಲಿಗೆ ದಾಂಗುಡಿ ಇಟ್ಟಿತು ರಂಗಾ ಅಂಡ್ ಕಂಪನಿ.
"ಹದಿನೆಂಟು ತಿಂಗಳ ಕಾಲ ಸುವರ್ಣ ನ್ಯೂಸ್ ಚಾನಲ್ ಹೆಡ್ ಆಗಿ ಅಪಾರ ಅನುಭವ ಸಂಪಾದಿಸಿಕೊಂಡೆ. ಪ್ರಿಂಟ್ ಮೀಡಿಯಂ ಜನ ವಿದ್ಯುನ್ಮಾನ ಮಾಧ್ಯಮದಲ್ಲಿ ಮಿಂಚುವುದಿಲ್ಲ ಎಂಬ ಮಿಥ್ ಅನ್ನು ಡಿಮಿಸ್ಟಿಫೈ ಮಾಡಿದ ತೃಪ್ತಿ ನನ್ನದು. ಸುವರ್ಣ ಟಿವಿಯಿಂದಾಗಿ ನಾನೂ ಒಂದು ಬ್ರಾಂಡ್ ಆದೆ, ಚಾನಲ್ಲೂ ಒಂದು ಬ್ರಾಂಡ್ ಆಯಿತು" ಎಂದು ಹೇಳುತ್ತಾ ಜಯನಗರದ ಜಾವಾ ಸಿಟಿ ಕಾಫಿ ಶಾಪಿನಲ್ಲಿ ಮಾತಿಗೆ ಕುಳಿತರು ಹಂಚಿಕಡ್ಡಿಯ ತೂಕ, ಕುರುಚಲು ಗಡ್ಡ, ಎರಡು ಬೇಬಿನ ಬುಷ್ ಶರ್ಟ್, ಒಂದು ಸಲಕ್ಕೆ ಒಂದೇ ಸಿಗರೇಟು ಸೇದುವ ಜರ್ನಲಿಸ್ಟ್ ರಂಗ. (ಫೋಟೋ : ಕೆಎಂ ವೀರೇಶ್)
ಸೋಮವಾರ ಓದಿ : ರಂಗನ ಮುಂದೆ ಸಿಂಗ...