Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೀತಿ ಹುಟ್ಟಿಸುವ ಜ್ಯೋತಿಷಿಗಳಿಗೆ ಶಿಕ್ಷೆ ಏಕಿಲ್ಲ?
ದಢೂತಿ ಜ್ಯೋತಿಷಿಯೊಬ್ಬರಂತೂ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಅನಗತ್ಯ ಭೀತಿ ಹರಡುತ್ತಿದ್ದಾರೆ. ಅವರ ಜಾಣ್ಮೆ ಎಷ್ಟಿದೆಯೆಂದರೆ ಅವರು ಮಾತನಾಡುವುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಭೂಕಂಪ, ಪ್ರವಾಹವೇ ಆಗುವುದೆಂದು ತಾನು ಹೇಳಲಾರೆ, ಆದರೆ ಏನೋ ಒಂದು ಆಗಲಿದೆ ಎಂದು ಅವರು ಹೇಳುತ್ತಾರೆ. ಮಾ.19ರಂದೇ ಸಂಭವಿಸುವುದೆಂದು ಹೇಳಲಾರೆ, ಮುಂದೆ ಯಾವಾಗಲೂ ಸಂಭವಿಸಬಹುದು ಎನ್ನುತ್ತಾರೆ.
ಮುಂದಕ್ಕೆ ಲಾರಿಯಡಿಗೆ ನಾಯಿ ಬಿದ್ದು ಸತ್ತರೂ 'ನೋಡಿ, ನಾನು ಹೀಗೆ ಹೇಳಿರಲಿಲ್ಲವೆ " ಎಂದು ಅವರು ಹೇಳಿದರೂ ಹೇಳಿಯಾರೆ. ಹಿಂದೊಮ್ಮೆ ಇದೇ ರೀತಿ ಟಿವಿ ಜ್ಯೋತಿಷಿಯೊಬ್ಬರು ಬಂಟ್ವಾಳಕ್ಕೆ ಬಂದಿದ್ದಾಗ ಮುಂದಿನ ತಿಂಗಳು ಇಂತಿಷ್ಟೇ ತಾರೀಕಿನಂದು ಪ್ರಳಯ ಸದೃಶ ಮಳೆ ಬಂದು ಬಂಟ್ವಾಳವು ಭೀಕರ ಪ್ರವಾಹಕ್ಕೆ ತುತ್ತಾಗಲಿದೆ ಎಂದು ಹೇಳಿಹೋಗಿದ್ದರು. ಆದರೆ ಅವರು ಹೇಳಿದ ದಿನದಂದು ಬಂಟ್ವಾಳದಲ್ಲಿ ಸುಡು ಬಿಸಿಲಿತ್ತು.
ಇದೀಗ ಜನತೆಯಲ್ಲಿ ಭಾರೀ ಭಯಭೀತಿ ಬಿತ್ತುವಲ್ಲಿ ಈ ಕಪಟ ಜ್ಯೋತಿಷಿಗಳು ಸಫಲರಾಗಿದ್ದಾರೆ. ಒಂದುವೇಳೆ ನಾಡಿದ್ದು ಏನೂ ಸಂಭವಿಸಲಿಲ್ಲವೆಂದಾದರೆ ಅವರು ಈ ರೀತಿ ಅನವಶ್ಯ ಭೀತಿ ಬಿತ್ತಿದ್ದಕ್ಕೆ ಸೂಕ್ತ ಶಿಕ್ಷೆ ಪಡೆಯಬೇಡವೆ? ಅವರೇನೋ ಮರುದಿನದಿಂದ ಬೇರೆಯೆ ತೆರನಾದ ನೆಪ ಹೇಳಲು ಆರಂಭಿಸಿಯಾರು. ಆದರೆ ಜನಗಳು ಅವರಿಗೆ ಪಾಠ ಕಲಿಸಲು ಈಗಲೆ ಸಿದಟಛಿರಾಗಿರುವುದೊಳಿತು. ಇಲ್ಲದಿದ್ದರೆ ಮುಂದೊಂದು ದಿನ ಹೊಸದಾದ ವಿಷಯ ಎತ್ತಿ ಅವರು ಜನರಲ್ಲಿ ಭೀತಿ ಸೃಷ್ಟಿಸತೊಡಗುತ್ತಾರೆ.