Don't Miss!
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ ವಾಹಿನಿಯಲ್ಲಿ ಮನೋಜ್ಞ ಚಿತ್ರ ರಂಗನಾಯಕಿ
ಅಂಬರೀಷ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು.ಆರತಿಯವರ ಮನೋಜ್ಞ ಅಭಿನಯದಿಂದಾಗಿ ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಗುರುತಿಸಲ್ಪಡುತ್ತಾರೆ. ಅವರ ಚಿತ್ರರಂಗ ಜೀವನದಲ್ಲಿ ಇದೊಂದು ಮೈಲಿಗಲ್ಲು.
ಉದಯ ವಾಹಿನಿಯಲ್ಲಿ ರಂಗನಾಯಕಿ ಬಳಿಕ ಬೆಳಗ್ಗೆ 10ಕ್ಕೆ ಮತ್ತೊಂದು ಯಶಸ್ವಿ ಚಿತ್ರ 'ಫ್ರೆಂಡ್ಸ್' ಪ್ರಸಾರವಾಗಲಿದೆ; ಸಂಜೆ 4ಕ್ಕೆ ಜೀಬೂಂಬಾ; ರಾತ್ರಿ 8ಕ್ಕೆ ಕುಬೇರ; ರಾತ್ರಿ 11ಕ್ಕೆ ಅಮರ್ ಅಕ್ಬರ್ ಆಂಟೋನಿ. ಇವಿಷ್ಟು ಚಿತ್ರಗಳನ್ನು ಉದಯ ಮೂವೀಸ್ ವಾಹಿನಿಯಲ್ಲಿ ಸವಿಬಹುದು. ಉಳಿದ ವಾಹಿನಿಗಳಲ್ಲಿ ಪ್ರಸಾರವಾಗುವ ಚಿತ್ರಗಳ ವಿವರ ಹೀಗಿದೆ.
ಕಸ್ತೂರಿ: ಸಂಜೆ 3ಕ್ಕೆ ಮೌರ್ಯ ಚಿತ್ರ ಪ್ರಸಾರವಾಗಲಿದೆ. ಎಸ್ ನಾರಾಯಣ್ ನಿರ್ದೇಶನದ ಚಿತ್ರದ ತಾರಾಬಳಗದಲ್ಲಿ ಪುನೀತ್ ರಾಜ್ ಕುಮಾರ್, ಮೀರಾ ಜಾಸ್ಮಿನ್ ಇದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಪಕರು.
ಡಿಡಿ ಚಂದನ: ಸಂಜೆ 4ಕ್ಕೆ ಶ್ರೀಗಂಧ ಚಿತ್ರ ಪ್ರಸಾರವಾಗಲಿದೆ. ರಾಘವೇಂದ್ರ ರಾಜ್ ಕುಮಾರ್, ನಾಗೇಂದ್ರ ಶಾ, ಹಂಸಲೇಖ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಸಂಪತ್ ಕುಮಾರ್ ನಿರ್ದೇಶನದ ಚಿತ್ರ ಇದಾಗಿದೆ.
ಉದಯ ಟಿವಿ: ಮಧ್ಯಾಹ್ನ 12ಕ್ಕೆ ಅನು; ಸಂಜೆ 3 ಗಂಟೆಗೆ ಪ್ರೀತ್ಸೋದ್ ತಪ್ಪಾ; ಸಂಜೆ 6 ಗಂಟೆಗೆ ಶಂಕರ್ ಐಪಿಎಸ್; ರಾತ್ರಿ 9ಕ್ಕೆ ಪ್ರೀತಿ ಪ್ರೇಮ ಚಿತ್ರಗಳು ಪ್ರಸಾರವಾಗಲಿವೆ. 'ಶಂಕರ್ ಐಪಿಎಸ್' ಚಿತ್ರ ಹೊಚ್ಚಹೊಸ ಚಿತ್ರವಾಗಿದ್ದು ದುನಿಯಾ ವಿಜಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ.
ಸುವರ್ಣ ವಾಹಿನಿ: ಮಧ್ಯಾಹ್ನ 1 ಗಂಟೆಗೆ ಬಳ್ಳಾರಿನಾಗ ಹಾಗೂ ಸಂಜೆ 4ಗಂಟೆಗೆ ಕಿಚ್ಚಹುಚ್ಚ ಚಿತ್ರಗಳು ಪ್ರಸಾರವಾಗಲಿವೆ. ವಿಷ್ಣುವರ್ಧನ್ ಅಭಿನಯದ ಚಿತ್ರ ಬಳ್ಳಾರಿ ನಾಗ ಹಾಗೂ ಸುದೀಪ್ ಅಭಿನಯ ಚಿತ್ರ ಕಿಚ್ಚ ಹುಚ್ಚ.
ಈಟಿವಿ ಕನ್ನಡ: ಸಂಜೆ 4 ಗಂಟೆಗೆ ಸಿಕ್ಸರ್ ಚಿತ್ರ ಪ್ರಸಾರವಾಗಲಿದೆ. ಕ್ರಿಕೆಟ್ ಪಟು ಆಗಬೇಕು ಎಂದು ಕನಸು ಕಾಣುವ ಯುವಕನ ಕಥಾಹಂದರದ ಚಿತ್ರ. ಚಿತ್ರದ ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಸ್ಮಿತಾ, ದೇವಿಕಾ ಮುಂತಾದವರಿದ್ದಾರೆ. ಶಶಾಂಕ್ ನಿರ್ದೇಶನದ ಚಿತ್ರ.
ಜೀ ಕನ್ನಡ: ಸಂಜೆ 5ಕ್ಕೆ ಜೋಗಿ; ಬೆಳಗ್ಗೆ 11ಕ್ಕೆ ಶ್ರೀಕೃಷ್ಣ ಚಿತ್ರಗಳು ಪ್ರಸಾರವಾಗಲಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಜೋಗಿ. ಪ್ರೇಮ್ ನಿರ್ದೇಶನ ಈ ಚಿತ್ರ ತಾಚಿಕೊಂಡಿದ್ದ ಕನ್ನಡ ಚಿತ್ರರಂಗವನ್ನು ಎದ್ದು ನಿಲ್ಲಿಸಿತ್ತು. ಜೆನ್ನಿಫರ್ ಕೊತ್ವಾಲ್ ಚಿತ್ರದ ನಾಯಕಿ. ಪೌರಾಣಿಕ ಚಿತ್ರವಾದ ಶ್ರೀಕೃಷ್ಣಅನಿಮೇಷನ್ ಚಿತ್ರವಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)