ಜೀ ಕನ್ನಡದಲ್ಲಿ 'ಯಮಲೋಕದಲ್ಲಿ ಪ್ರಾಯಶ್ಚಿತ್ತ'

ಯಮಲೋಕದಲ್ಲಿ ಪ್ರಾಯಶ್ಚಿತ್ತ ಕೂಡ ಇಂತಹ ನಂಬಿಕೆಯನ್ನೇ ಆಧರಿಸಿದೆ. ಆದರೆ ಇಲ್ಲಿ ಪಾಪಿಗಳು, ಶಿಕ್ಷೆಗೆ ಒಳಗಾಗಿ ಪ್ರಾಯಶ್ಚಿತ್ತ ಅನುಭವಿಸುವವರು ಸಾಮಾನ್ಯ ಜನರಲ್ಲ. ಬದಲಿಗೆ ಟಿ.ವಿ. ಸೀರಿಯಲ್, ಸಿನಿಮಾಗಳಲ್ಲಿ ಖಳನಟ, ಖಳನಟಿಯರಾಗಿ ಒಳ್ಳೆಯ ಪಾತ್ರಗಳಿಗೆ ಕಷ್ಟ ಕೊಡುತ್ತ ಪಾಪ ಎಸಗುವವರು! ಆ ಪಾತ್ರಗಳನ್ನು ಯಮಲೋಕಕ್ಕೆ ಕರೆತಂದು ವಿವಿಧ ಶಿಕ್ಷೆ ನೀಡಲಾಗುವುದು. ಆ ಶಿಕ್ಷೆಗಳನ್ನು ನೋಡಿದವರು ಬಿದ್ದು ಬಿದ್ದು ನಗುವುದಂತೂ ಖಂಡಿತ.
ಉದಾ: ಹಾವಿನ ಬುಟ್ಟಿಯಲ್ಲಿ ಕೈ ಹಾಕಿ ಚೆಂಡು ಹೆಕ್ಕುವುದು, ಕೈ ಹಿಂದೆ ಕಟ್ಟಿಕೊಂಡು ಬಾಳೆಹಣ್ಣು ತಿನ್ನುವುದು, ಹಾಗಲಕಾಯಿ ತಿನ್ನುವುದು, ಐಸ್ ತುಂಡು ಅಂಗೈಲಿ ಹಿಡಿದು ಪ್ರದಕ್ಷಿಣೆ ಇತ್ಯಾದಿ ಇನ್ನೂ ತರಹೇವಾರಿ ಶಿಕ್ಷೆಗಳು. ಮೂರು ಸುತ್ತುಗಳಲ್ಲಿ ಶಿಕ್ಷೆ ಅನುಭವಿಸಿ ಯಾರು ಹೆಚ್ಚು ಪಾಯಿಂಟ್ ಗಳಿಸುತ್ತಾರೋ ಅವರು ಗೆದ್ದಂತೆ.
ಈ ಹೊಚ್ಚ ಹೊಸ ಪರಿಕಲ್ಪನೆ ಕನ್ನಡ ಕಿರುತೆರೆಗೆ ಹೊಸ ಬಣ್ಣ ತುಂಬಲಿದೆ. ಪೌರಾಣಿಕ ಸೆಟ್ ಅಪ್ನಲ್ಲಿ ಆಧುನಿಕ ಪಾತ್ರಗಳು ಪ್ರವೇಶವಾಗಿ ನಗೆಯ ಹೊನಲು ಹರಿಯಲಿದೆ. ಖ್ಯಾತ ರಂಗಕರ್ಮಿ, ಚಿತ್ರನಟ ಮಂಡ್ಯರಮೇಶ್ ಚಿತ್ರಗುಪ್ತನ ಪಾತ್ರದಲ್ಲಿ ಶೋವನ್ನು ನಿರೂಪಿಸುತ್ತಾರೆ. ಯಮಧರ್ಮನಾಗಿ ರಂಗಕಲಾವಿದ ಗಿರೀಶ್ ಘಜರ್ ನಟಿಸಲಿದ್ದಾರೆ. ಇಲ್ಲಿ ಭಾಗವಹಿಸಲು ಚಾನೆಲ್ ಮತ್ತು ಕಲಾವಿದರ ವಿಷಯದಲ್ಲಿ ನಿರ್ಬಂಧ ಇಲ್ಲ.
ಮನರಂಜನೆಯಲ್ಲಿ ಏಕತಾನತೆ ಮುರಿಯುವ ಸಲುವಾಗಿಯೇ ಈ ಶೋ ವಿನ್ಯಾಸಗೊಳಿಸಲಾಗಿದೆ. ಇದು ವೀಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಜೀ ಕನ್ನಡ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್. ಯಮಲೋಕದಲ್ಲಿ ಪ್ರಾಯಶ್ಚಿತ್ತ ಮಾರ್ಚ್ 22ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











