ಮೈಸೂರಿನ ರಾಜ ವಿಜಯೇಂದ್ರರಿಗ್ಯಾಕಿ ದುರ್ಗತಿ ಬಂತು

ಇದು ಜೀ ಕನ್ನಡ ವಾಹಿನಿ ಆರಂಭಿಸಿರುವ ಹೊಸ ಧಾರಾವಾಹಿ ರಾಜಕುಮಾರಿ ಕತೆ. ಇಂದಿನಿಂದ (ಏ.23) ಧಾರಾವಾಹಿ ಆರಂಭವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ತನಕ ಧಾರಾವಾಹಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಹೊಸ್ತಿಲಾಚೆ ಅರಮನೆ, ಹೊಸ್ತಿಲೊಳಗೆ ಬಡಮನೆ, ಅರಮನೆಯೆಂಬ ಬಡಮನೆಯ ರಾಜ ಮತ್ತು ಕುಮಾರಿಯ ಕತೆ ನೋಡಬಹುದು.
ರಾಜ ವಿಜಯೇಂದ್ರರ ಪಾತ್ರದಲ್ಲಿ ದತ್ತಣ್ಣ ಕಾಣಿಸಲಿದ್ದಾರೆ. ಸುದೀರ್ಘ ಸಮಯದ ಬಳಿಕ ಅವರು ಕಿರುತೆರೆಗೆ ಮರಳಿರುವುದು ಸಂತಸದ ವಿಚಾರ. ಲಕ್ಷ್ಮಿ ಚಂದ್ರಶೇಖರ್ ರಾಣಿಯಾಗಿ, ಅಂಜನಾ (ಹೊಸ ಪರಿಚಯ) ರಾಜಕುಮಾರಿಯಾಗಿ ಅಭಿನಯಿಸಿದ್ದಾರೆ. ಪಾತ್ರವರ್ಗದಲ್ಲಿ ಶ್ರೀದೇವಿ, ವಾಣಿಶ್ರೀ, ರೋಹಿಣಿ, ಕಾವ್ಯಾ ಶಾ, ಶಶಿಕುಮಾರ್, ಎನ್ ಎಂ ಸುರೇಶ್, ಸಾಗರ್ ಪುರಾಣಿಕ್ ಮುಂತಾದವರಿದ್ದಾರೆ.
ಈ ಹಿಂದೆ ಚಿ.ಸೌ.ಸಾವಿತ್ರಿ ಧಾರಾವಾಹಿಯನ್ನು ನಿರ್ದೇಶಿಸಿದ್ದ ಶೃತಿ ನಾಯ್ಡು ರಾಜಕುಮಾರಿ ನಿರ್ದೇಶಕರು. ಈ ಧಾರಾವಾಹಿಗಾಗಿ ಜೀ ಕನ್ನಡ ವಾಹಿನಿ ರು.8 ಲಕ್ಷ ವೆಚ್ಚದಲ್ಲಿ ಸೆಟ್ ನಿರ್ಮಿಸಿರುವುದು ಕಿರುತೆರೆಯಲ್ಲೇ ದಾಖಲೆ ಎನ್ನಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











