Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಟಿವಿ ಕನ್ನಡ ವಾಹಿನಿಯಲ್ಲಿ ನಿತ್ಯ ಹಾರಲಿದೆ ಗಾಳಿಪಟ
ಈಗ ಎಲ್ಲೆಲ್ಲೂ ಗಾಳಿಪಟದ್ದೇ ಸುದ್ದಿ. ಒಟ್ಟಿನಲ್ಲಿ ಗಾಳಿಪಟಗಳಿಗೆ ಒಳ್ಳೆ ಮಾರುಕಟ್ಟೆ ಇರುವಂತಿದೆ. ಬಾಲಿವುಡ್ 'ಕೈಟ್ಸ್ ' ವಿವಾದದ ನಡುವೆ ಇದೀಗ ಮತ್ತೊಂದು ಗಾಳಿಪಟ ಸುದ್ದಿ ಮಾಡಿದೆ. ಈ ಗಾಳಿಪಟ ಗೋಲ್ಡನ್ ಸ್ಟಾರ್ ಗಣೇಶ್ ಹಾರಿಸಿದ ಗಾಳಿಪಟವಲ್ಲ. ಈಟಿವಿ ಕನ್ನಡದಲ್ಲಿ ಹಾರಲಿರುವ ಹೊಸ ಗಾಳಿಪಟವಿದು.
ಈಟಿವಿ ಕನ್ನಡ ವಾಹಿನಿ 'ಗಾಳಿಪಟ' ಎಂಬ ನೂತನ ದೈನಿಕ ಧಾರಾವಾಹಿಯನ್ನು ಮೇ.31ರಿಂದ ಪ್ರಸಾರ ಮಾಡಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.30ಕ್ಕೆ ಈ ಧಾರಾವಾಹಿ ಬಿತ್ತರವಾಗಲಿದೆ. ಈ ಧಾರಾವಾಹಿಯ ನಿರ್ಮಾಪಕರು ತೆಲುಗಿನ ಖ್ಯಾತ ನಟ ಸತ್ಯನಾರಾಯಣರಾವ್ ಅವರ ಪುತ್ರ ಕೆ ವಿ ರಾಮಾರಾವ್.
ಕೆ ಎಸ್ ಎನ್ ಟೆಲಿ ಫಿಲಂಸ್ ಲಾಂಛನದಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ಈ ಹಿಂದೆ ಛಾಯಾಗ್ರಾಹಕರಾಗಿದ್ದ ಕೆ.ಶಶಿಧರ್ ಈ ಧಾರಾವಾಹಿ ನಿರ್ದೇಶಕರು. ಇಳಗೂರು ಇಳವರಸನ್ ಚಿತ್ರಕತೆ, ರಾಜಶೇಖರ ನಿಲೋಗಲ್ ಮಠ್ ಅವರ ಸಂಭಾಷಣೆ ಹಾಗೂ ಪ್ರವೀಣ್ ಡಿ ರಾವ್ ಅವರ ಸಂಗೀತವಿದೆ. ತಾರಾಗಣದಲ್ಲಿ ಪಲ್ಲವಿ, ಹಿರೇ ಹಿರಣ್ಣಯ್ಯ, ಕೃಷ್ಣೇಗೌಡ್ರು, ಆಶಾಲತಾ, ಶ್ರೀಕಾಂತ್ ಹೆಬ್ಳೀಕರ್ ಇದ್ದಾರೆ. ನಿರ್ಮಾಣ, ಮೇಲ್ವಿಚಾರಣೆ ಎಂ ಪ್ರವೀಣ್ ಕುಮಾರ್ ಅವರದು.