Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಟಿವಿ ಕನ್ನಡ ವಾಹಿನಿಯಲ್ಲಿ ನಿತ್ಯ ಹಾರಲಿದೆ ಗಾಳಿಪಟ
ಈಗ ಎಲ್ಲೆಲ್ಲೂ ಗಾಳಿಪಟದ್ದೇ ಸುದ್ದಿ. ಒಟ್ಟಿನಲ್ಲಿ ಗಾಳಿಪಟಗಳಿಗೆ ಒಳ್ಳೆ ಮಾರುಕಟ್ಟೆ ಇರುವಂತಿದೆ. ಬಾಲಿವುಡ್ 'ಕೈಟ್ಸ್ ' ವಿವಾದದ ನಡುವೆ ಇದೀಗ ಮತ್ತೊಂದು ಗಾಳಿಪಟ ಸುದ್ದಿ ಮಾಡಿದೆ. ಈ ಗಾಳಿಪಟ ಗೋಲ್ಡನ್ ಸ್ಟಾರ್ ಗಣೇಶ್ ಹಾರಿಸಿದ ಗಾಳಿಪಟವಲ್ಲ. ಈಟಿವಿ ಕನ್ನಡದಲ್ಲಿ ಹಾರಲಿರುವ ಹೊಸ ಗಾಳಿಪಟವಿದು.
ಈಟಿವಿ ಕನ್ನಡ ವಾಹಿನಿ 'ಗಾಳಿಪಟ' ಎಂಬ ನೂತನ ದೈನಿಕ ಧಾರಾವಾಹಿಯನ್ನು ಮೇ.31ರಿಂದ ಪ್ರಸಾರ ಮಾಡಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.30ಕ್ಕೆ ಈ ಧಾರಾವಾಹಿ ಬಿತ್ತರವಾಗಲಿದೆ. ಈ ಧಾರಾವಾಹಿಯ ನಿರ್ಮಾಪಕರು ತೆಲುಗಿನ ಖ್ಯಾತ ನಟ ಸತ್ಯನಾರಾಯಣರಾವ್ ಅವರ ಪುತ್ರ ಕೆ ವಿ ರಾಮಾರಾವ್.
ಕೆ ಎಸ್ ಎನ್ ಟೆಲಿ ಫಿಲಂಸ್ ಲಾಂಛನದಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ಈ ಹಿಂದೆ ಛಾಯಾಗ್ರಾಹಕರಾಗಿದ್ದ ಕೆ.ಶಶಿಧರ್ ಈ ಧಾರಾವಾಹಿ ನಿರ್ದೇಶಕರು. ಇಳಗೂರು ಇಳವರಸನ್ ಚಿತ್ರಕತೆ, ರಾಜಶೇಖರ ನಿಲೋಗಲ್ ಮಠ್ ಅವರ ಸಂಭಾಷಣೆ ಹಾಗೂ ಪ್ರವೀಣ್ ಡಿ ರಾವ್ ಅವರ ಸಂಗೀತವಿದೆ. ತಾರಾಗಣದಲ್ಲಿ ಪಲ್ಲವಿ, ಹಿರೇ ಹಿರಣ್ಣಯ್ಯ, ಕೃಷ್ಣೇಗೌಡ್ರು, ಆಶಾಲತಾ, ಶ್ರೀಕಾಂತ್ ಹೆಬ್ಳೀಕರ್ ಇದ್ದಾರೆ. ನಿರ್ಮಾಣ, ಮೇಲ್ವಿಚಾರಣೆ ಎಂ ಪ್ರವೀಣ್ ಕುಮಾರ್ ಅವರದು.