ಚಂದನ ವಾಹಿನಿ ಸುದ್ದಿ ವಿಭಾಗಕ್ಕೆ ಹೊಸ ನಾವಿಕ

ಇಂಡಿಯನ್ ಇನ್ ಫಾರ್ಮೆಷನ್ ಸರ್ವೀಸ್ ನ 'ಎ' ಶ್ರೇಣಿ ಆಧಿಕಾರಿ(1997 ಬ್ಯಾಚ್ ) ಯಾಗಿರುವ ರವೀಂದ್ರ ಅವರ ಜೊತೆಗೆ ನಟಾಶಾ ಶರೋನ್ ಡಿ'ಸೋಜ ಅವರಿಗೂ ಭಡ್ತಿ ನೀಡಿ ವಾರ್ತಾ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದೆ.
ನಟಾಶಾ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಾಹೀರಾತು ಮತ್ತು ದೃಶ್ಯ ಪ್ರಚಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರವೀಂದ್ರ ಅವರಿಗೆ ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ಹೊಣೆ ಜೊತೆಗೆ ಬೆಂಗಳೂರು ಆಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕರಾಗಿಯೂ ಮುಂದುವರೆಯುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಣೆ ಯೋಜನೆಗಳಲ್ಲಿ 2005-2008ರವರೆಗೆ ರವೀಂದ್ರ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
More from Filmibeat
English summary
S.G. Raveendra is promoted and continues in the upgraded post as Director(News) and Head of Regional NEWS UNIT, Doordarshan Kendra, Bangalore.
ಚಂದನ ಕಿರುತೆರೆ ಮಾಧ್ಯಮ ವಾರ್ತಾ ಇಲಾಖೆ ಬೆಂಗಳೂರು ದೂರದರ್ಶನ chandana television media information department bangalore doordarshan


Click it and Unblock the Notifications











