twitter
    For Quick Alerts
    ALLOW NOTIFICATIONS  
    For Daily Alerts

    ಚಂದನ ವಾಹಿನಿ ಸುದ್ದಿ ವಿಭಾಗಕ್ಕೆ ಹೊಸ ನಾವಿಕ

    By Mahesh
    |

    SG Raveendra
    ಬೆಂಗಳೂರು ದೂರದರ್ಶನದ ಸುದ್ದಿ ವಾಹಿನಿಗೆ ಹೊಸ ರೂಪ ಹಾಗೂ ಶೈಲಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ದೂರದರ್ಶನ ವಾಹಿನಿಯ ಸುದ್ದಿ ಹಳ್ಳಿಯಿಂದ ದಿಲ್ಲಿಗೆ ತಲುಪುತ್ತಿದ್ದು, ಜನರಿಗೆ ನೈಜ ಸುದ್ದಿಗಳನ್ನು ಬಿತ್ತರಿಸುವ ಕಾರ್ಯ ಮುಂದುವರೆಸಲಿದೆ ಎಂದು ಚಂದನದ ಸುದ್ದಿ ವಾಹಿನಿಯ ಹೊಸ ನಿರ್ದೇಶಕರಾಗಿ ಆಯ್ಕೆಯಾದ ರವೀಂದ್ರ ಅವರು ಹೇಳಿದ್ದಾರೆ.

    ಇಂಡಿಯನ್ ಇನ್ ಫಾರ್ಮೆಷನ್ ಸರ್ವೀಸ್ ನ 'ಎ' ಶ್ರೇಣಿ ಆಧಿಕಾರಿ(1997 ಬ್ಯಾಚ್ ) ಯಾಗಿರುವ ರವೀಂದ್ರ ಅವರ ಜೊತೆಗೆ ನಟಾಶಾ ಶರೋನ್ ಡಿ'ಸೋಜ ಅವರಿಗೂ ಭಡ್ತಿ ನೀಡಿ ವಾರ್ತಾ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದೆ.

    ನಟಾಶಾ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಾಹೀರಾತು ಮತ್ತು ದೃಶ್ಯ ಪ್ರಚಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

    ರವೀಂದ್ರ ಅವರಿಗೆ ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ಹೊಣೆ ಜೊತೆಗೆ ಬೆಂಗಳೂರು ಆಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕರಾಗಿಯೂ ಮುಂದುವರೆಯುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

    ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಣೆ ಯೋಜನೆಗಳಲ್ಲಿ 2005-2008ರವರೆಗೆ ರವೀಂದ್ರ ಅವರು ಕರ್ತವ್ಯ ನಿರ್ವಹಿಸಿದ್ದಾರೆ.

    English summary
    S.G. Raveendra is promoted and continues in the upgraded post as Director(News) and Head of Regional NEWS UNIT, Doordarshan Kendra, Bangalore.
    Friday, August 26, 2011, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X