Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಶ್ರೀಯಿಂದ 'ಬೆಂಗಳೂರು-ಇದು ನಮ್ಮ ಊರು'
ಬೆಂಗಳೂರಿನ ಇತಿಹಾಸ, ಜನಜೀವನ, ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಇತಿಹಾಸಕಾರ, ಚಿಂತಕ ಸುರೇಶ್ ಮೂನ ಪ್ರಸ್ತುತ ಪಡಿಸುವ ಈ ಕಾರ್ಯಕ್ರಮದಲ್ಲಿ ಆಯಾ ಸ್ಥಳದ ಇತಿಹಾಸ, ಅಲ್ಲಿನ ಸ್ಮಾರಕಗಳು, ತಿಂಡಿ, ತಿನಿಸಿನ ವೈವಿಧ್ಯ, ಅಲ್ಲಿ ನೆಲೆಸಿರುವ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಸಹಿತ ಹಲವಾರು ಮಾಹಿತಿಗಳು ಇರುತ್ತವೆ. ಜತೆಗೆ ಜನರನ್ನು ತೊಡಗಿಸಿಕೊಳ್ಳುವಂತಹ ರೀತಿಯಲ್ಲಿ ಪ್ರಶ್ನೋತ್ತರಗಳು ಇರಲಿವೆ.
ನಗರದ ಬಗೆಗೆ ಅಭಿಮಾನ ಇರುವವರು ನಗರದ ಪರಂಪರೆ, ಸಂಸ್ಕೃತಿ ರಕ್ಷಣೆಗೆ ಮುಂದಾಗುತ್ತಾರೆ. ಬೆಂಗಳೂರಿನಲ್ಲಿ ಇಂದು ಮೂಲ ನಿವಾಸಿಗಳಿಗಿಂತ ಹೊರಗಿನಿಂದ ಬಂದು ನೆಲೆಸಿದವರೇ ಅಧಿಕ ಮಂದಿ ಇದ್ದಾರೆ. ಬೆಂಗಳೂರಿನ ಬಗ್ಗೆ ತಿಳಿಯದ ಅದೆಷ್ಟೋ ಸಂಗತಿಗಳು ಇದ್ದು ಅದನ್ನು ಕಾರ್ಯಕ್ರಮ ಸರಣಿಯ ಮೂಲಕ ಪರಿಚಯಿಸುವ ಪ್ರಯತ್ನವೇ ಬೆಂಗಳೂರು ಇದು ನಮ್ಮ ಊರು ಕಾರ್ಯಕ್ರಮ ಎನ್ನುತ್ತಾರೆ ಜನಶ್ರೀ ಸುದ್ದಿವಾಹಿನಿ ಮುಖ್ಯಸ್ಥ ಅನಂತ್ ಚಿನಿವಾರ್.
ಹಿಂದಿನ ಮತ್ತು ಇಂದಿನ ಬೆಂಗಳೂರನ್ನು ಜನರಿಗೆ ಪರಿಚಯಿಸುತ್ತಲೇ, ನಾಳಿನ ಬೆಂಗಳೂರು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಜನರಿಗೆ ಅದರಲ್ಲೂ ಯುವಜನತೆಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶ ಮತ್ತು ಮೂಲ ಬೆಂಗಳೂರಿಗರು ಮತ್ತು ಇಲ್ಲಿಗೆ ವಲಸೆ ಬಂದು ಬೆಂಗಳೂರಿಗರಾಗಿರುವವರು ಎಲ್ಲರೂ ಈ ಊರನ್ನು ಪ್ರೀತಿಸುವ ಹಾಗಾಗಬೇಕು. ಈ ಊರಿನ ಬಗ್ಗೆ ಕಾಳಜಿ ತೋರಿಸುವ ಹಾಗಾಗಬೇಕು ಎನ್ನುವುದೂ ಕೂಡ ಕಾರ್ಯಕ್ರಮಗಳ ಆಶಯಗಳಲ್ಲೊಂದು.