Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಶ್ರೀಯಿಂದ 'ಬೆಂಗಳೂರು-ಇದು ನಮ್ಮ ಊರು'
ಬೆಂಗಳೂರಿನ ಇತಿಹಾಸ, ಜನಜೀವನ, ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಇತಿಹಾಸಕಾರ, ಚಿಂತಕ ಸುರೇಶ್ ಮೂನ ಪ್ರಸ್ತುತ ಪಡಿಸುವ ಈ ಕಾರ್ಯಕ್ರಮದಲ್ಲಿ ಆಯಾ ಸ್ಥಳದ ಇತಿಹಾಸ, ಅಲ್ಲಿನ ಸ್ಮಾರಕಗಳು, ತಿಂಡಿ, ತಿನಿಸಿನ ವೈವಿಧ್ಯ, ಅಲ್ಲಿ ನೆಲೆಸಿರುವ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಸಹಿತ ಹಲವಾರು ಮಾಹಿತಿಗಳು ಇರುತ್ತವೆ. ಜತೆಗೆ ಜನರನ್ನು ತೊಡಗಿಸಿಕೊಳ್ಳುವಂತಹ ರೀತಿಯಲ್ಲಿ ಪ್ರಶ್ನೋತ್ತರಗಳು ಇರಲಿವೆ.
ನಗರದ ಬಗೆಗೆ ಅಭಿಮಾನ ಇರುವವರು ನಗರದ ಪರಂಪರೆ, ಸಂಸ್ಕೃತಿ ರಕ್ಷಣೆಗೆ ಮುಂದಾಗುತ್ತಾರೆ. ಬೆಂಗಳೂರಿನಲ್ಲಿ ಇಂದು ಮೂಲ ನಿವಾಸಿಗಳಿಗಿಂತ ಹೊರಗಿನಿಂದ ಬಂದು ನೆಲೆಸಿದವರೇ ಅಧಿಕ ಮಂದಿ ಇದ್ದಾರೆ. ಬೆಂಗಳೂರಿನ ಬಗ್ಗೆ ತಿಳಿಯದ ಅದೆಷ್ಟೋ ಸಂಗತಿಗಳು ಇದ್ದು ಅದನ್ನು ಕಾರ್ಯಕ್ರಮ ಸರಣಿಯ ಮೂಲಕ ಪರಿಚಯಿಸುವ ಪ್ರಯತ್ನವೇ ಬೆಂಗಳೂರು ಇದು ನಮ್ಮ ಊರು ಕಾರ್ಯಕ್ರಮ ಎನ್ನುತ್ತಾರೆ ಜನಶ್ರೀ ಸುದ್ದಿವಾಹಿನಿ ಮುಖ್ಯಸ್ಥ ಅನಂತ್ ಚಿನಿವಾರ್.
ಹಿಂದಿನ ಮತ್ತು ಇಂದಿನ ಬೆಂಗಳೂರನ್ನು ಜನರಿಗೆ ಪರಿಚಯಿಸುತ್ತಲೇ, ನಾಳಿನ ಬೆಂಗಳೂರು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಜನರಿಗೆ ಅದರಲ್ಲೂ ಯುವಜನತೆಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶ ಮತ್ತು ಮೂಲ ಬೆಂಗಳೂರಿಗರು ಮತ್ತು ಇಲ್ಲಿಗೆ ವಲಸೆ ಬಂದು ಬೆಂಗಳೂರಿಗರಾಗಿರುವವರು ಎಲ್ಲರೂ ಈ ಊರನ್ನು ಪ್ರೀತಿಸುವ ಹಾಗಾಗಬೇಕು. ಈ ಊರಿನ ಬಗ್ಗೆ ಕಾಳಜಿ ತೋರಿಸುವ ಹಾಗಾಗಬೇಕು ಎನ್ನುವುದೂ ಕೂಡ ಕಾರ್ಯಕ್ರಮಗಳ ಆಶಯಗಳಲ್ಲೊಂದು.