ಹೊಸ ತಾರೆಯ ಹುಡುಕಾಟದಲ್ಲಿ ಜನಶ್ರೀ ವಾಹಿನಿ

ಏನಿದು ಎಂದು ಅರ್ಥವಾಗಲಿಲ್ಲವೆ? ಏನಿಲ್ಲ ಜನಶ್ರೀ ವಾಹಿನಿ ಹೊಸ ಕಾರ್ಯಕ್ರಮ 'ಚಂದನದ ಗೊಂಬೆ' (ಹೊಸ ನಕ್ಷದ ಶೋಧ). ಈ ಕಾರ್ಯಕ್ರಮದಲ್ಲಿ ಅಂತಿಮವಾಗಿ ಗೆದ್ದ ಸ್ಪರ್ಧಿಯನ್ನು ಕನ್ನಡದ 'ಅಘೋರ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗುತ್ತದೆ.
ಜನಶ್ರೀ ವಾಹಿನಿ ಸ್ಪರ್ಧಿಗಳಿಗೆ ವಿಧಿಸಿರುವ ಷರತ್ತುಗಳಿ ಹೀಗಿವೆ. ಪಿಯುಸಿ ಪಾಸಾಗಿರಬೇಕು. ವಯಸ್ಸು 20 ರಿಂದ 25 ವರ್ಷದ ಒಳಗಿರಬೇಕು. ಅಭಿನಯ ಗೊತ್ತಿರಬೇಕು. ಸ್ಪಷ್ಟವಾಗಿ ಕನ್ನಡವನ್ನು ಓದಲು ಮತ್ತು ಮಾತನಾಡಲು ಗೊತ್ತಿರಬೇಕು. ಸ್ಪರ್ಧೆಗೆ ಭಾಗವಹಿಸುವ ಮೊದಲು ತಮ್ಮ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಇವುಗಳ ಜೊತೆ ಇನ್ನೊಂದಿಷ್ಟು ಷರತ್ತುಗಳು ಸೇರಿವೆ. ಹೆಚ್ಚಿನ ಮಾಹಿತಿಗೆ http://janasritv.com/ ನೋಡಬಹುದು. (ಒನ್ಇಂಡಿಯಾ ಕನ್ನಡ)
More from Filmibeat
English summary
Kannada news TV channel Janasri is launching a Star Hunt (Chandanada Gombe) on 5th May, 2012. The winner of the title will be the heroine of the sandalwood movie - AGHORA.


Click it and Unblock the Notifications











