twitter
    For Quick Alerts
    ALLOW NOTIFICATIONS  
    For Daily Alerts

    ತಪ್ಪದೆ ನೋಡಿ ಡಿಡಿ ಚಂದನದಲ್ಲಿ ಭಗವದ್ಗೀತ ಸಂವಾದ

    By Rajendra
    |

    Pavagada Prasad Rao
    ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೆಲ್ಲವೂ ವೈವಿಧ್ಯಭರಿತವಾಗಿ ಮೂಡಿಬರುತ್ತಿವೆ. ಅದರಲ್ಲೂ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಉಳಿದೆಲ್ಲಾ ವಾಹಿನಿಗಳಿಗಿಂತ ಚಂದನ ಸಾಕಷ್ಟು ಮುಂದಿದೆ. 'ಭಗವದ್ಗೀತೆ ಪ್ರವಚನ' ಕಾರ್ಯಕ್ರಮವಂತೂ ನಿತ್ಯ ನೂತನವಾಗಿ ಪ್ರಸಾರವಾಗುತ್ತಿದ್ದು ಈಗಾಗಲೆ 600 ಸಂಚಿಕೆಗಳನ್ನು ಪೂರೈಸಿದೆ.

    ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆ 8ರಿಂದ 8.30ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮ ಆಸ್ತಿಕರ ಜ್ಞಾನದಾಹದನ್ನು ತಣಿಸುತ್ತಿದೆ. ತಮ್ಮ ವಾಕ್ ಚಾತುರ್ಯದಿಂದ ಪಾವಗಡ ಪ್ರಕಾಶ್ ರಾವ್ ಅವರು ಸರಳವಾಗಿ ಎಲ್ಲರಿಗೂ ಮನದಟ್ಟಾಗುವಂತೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಎಲ್ಲರ ಮನ ಗೆದ್ದಿದ್ದಾರೆ.

    ಭಗವದ್ಗೀತೆಯ ಬಗ್ಗೆ ಅನೇಕರಿಗೆ ಇರುವ ಗೊಂದಲ, ಸಂದೇಹಗಳನ್ನು ಸಮಂಜಸ ಉತ್ತರಗಳ ಮೂಲಕ ನೀಡಿದ್ದಾರೆ. ಅವರು ಕೊಟ್ಟ ಉತ್ತರಗಳ ಸಂಗ್ರಹ ಭಾಗ ಈಗ 'ಭಗವದ್ಗೀತ ಸಂವಾದ' ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

    ಈ ಕಾರ್ಯಕ್ರಮದ ನಿರ್ದೇಶಕರು ಕೆ.ಪುರುಷನಾಥ್. ಸಂಗೀತವನ್ನು ಎಂ.ಎಸ್.ಮಾರುತಿ ಒದಗಿಸಿದ್ದಾರೆ. ಸಾಹಿತ್ಯವನ್ನು, ಚಿಂದೋಡಿ ಬಂಗಾರೇಷ್. ಶೀರ್ಷಿಕೆಯ ಜನಪ್ರಿಯ ಶ್ಲೋಕ ವನ್ನು,ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮ್ಹಣ್ಯಂ ರಸವತ್ತಾಗಿ ಹಾಡಿದ್ದಾರೆ. ಸಂಕಲನ, ಹರೀಶ್ ಕೊದ್ವಾಡಿಯವರದು. (ಒನ್‌ಇಂಡಿಯಾ ಕನ್ನಡ)

    English summary
    Bhagvadgeetha Samvada, a devotional program by Vidwan Pavagada Prakash Rao, an eminent speaker, orator and a cultural torchbearer is playing Sunday, April 1 at 8:00 PM on DD Chandana.
    Thursday, March 29, 2012, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X