Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ಮೀಪತಿಯರಿಗೆ ಯಮಗಂಡಕಾಲ, ಸಮಯ ಜ್ಯೋತಿಷ್ಯ
ಕಾರ್ಯಕ್ರಮದ ಹೈಲೈಟ್ ಹಿಂದೂ ದೇವತೆ ಲಕ್ಷ್ಮೀ. ಅವಳು ಪ್ರಬಲೆ ಮತ್ತು ಚಂಚಲೆ. ಅವಳ ಹೆಸರನ್ನು ನಾವುಗಳು, ಅಂದರೆ ಹುಲುಮಾನವರು ಇಟ್ಟುಕೊಳ್ಳಬಾರದು. ಹಾಗೇನಾದರೂ ಆಗಿದ್ದರೆ ಹೆಸರು ಇಟ್ಟುಕೊಂಡವಳಿಗೂ ಕಷ್ಟ, ಅವಳನ್ನು ಕಟ್ಟಿಕೊಂಡವನಿಗೆ ಭಾರೀ ನಷ್ಟ-ಕಷ್ಟ.
ಈ ವಿಚಾರಗಳನ್ನು ನೀವು ನಂಬಿದರೆ ನಂಬಿ, ಬಿಟ್ಟರೆ ಬಿಟ್ಹಾಕಿ. ಆದರೆ "ನಮ್ಮ ನಂಬಿಕೆಯನ್ನು ಪ್ರೂವ್ ಮಾಡಕ್ಕೆ ಸಾಕು ಬೇಕಾದಷ್ಟು ಜ್ವಲಂತ ಉದಾಹರಣೆಗಳಿವೆ" ಎಂದು ಸಂಖ್ಯಾಶಾಸ್ತ್ರಜ್ಞರು ಟಿವಿ ಪರದೆ ಮೇಲೆ ವಾದಿಸಿದರು.
ನೀವೇ ನೋಡಿ : ಮುತ್ತುಲಕ್ಷ್ಮಿಯ ಗಂಡ, ಮೀಸೆಮಾವ ವೀರಪ್ಪನ್ ಗತಿ ಏನಾಯಿತು, ಅರುಣ ಲಕ್ಷ್ಮಿಯ ಪತಿ ಜನಾರ್ದನ ರೆಡ್ಡಿಗೆ ಬರಬಾರದ ಕಷ್ಟ ಬಂತಲ್ಲವೇ. ಇನ್ನು ವಿಜಯಲಕ್ಷ್ಮಿಯ ಗಂಡ ನಟ ದರ್ಶನ್ಗೆ ಸೆರೆಮನೆ ವಾಸ, ಪಾಪ.
ಎರಡೋ ಮೂರೋ ಮದುವೆಯಾಗಿ ಹಾಯಾಗಿದ್ದ ಎನ್ ಟಿ ರಾಮರಾವ್ ಲಕ್ಷ್ಮಿಪಾರ್ವತಿಯನ್ನು ಮದುವೆ ಆದಮೇಲೆ ಇನ್ನಿಲ್ಲವಾಗಿಹೋದರು. ಅಷ್ಟು ದೂರ ಯಾಕೆ, ಲಕ್ಷ್ಮಿ ನಾಮಾಂಕಿತಳನ್ನು ಮದುವೆಯಾದ ನಿರ್ದೇಶಕ ಎಸ್ ನಾರಾಯಣ್ ಕೂಡ ಸ್ಯಾಂಡಲ್ವುಡ್ಡಿನಲ್ಲಿ ಅಂಥ ಏಳಿಗೆಯನ್ನು ಕಾಣುತ್ತಿಲ್ಲ. ಯಾಕೆ! ಯಾಕೆ?