Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿ ಜ್ಯೋತಿಷಿಗಳ ನಿತ್ಯ ಬಕ್ರಾ ಕಾರ್ಯಕ್ರಮ
ಆದರೆ ಕನ್ನಡ ಟಿವಿಯವರು ಇದೇ ಬಕ್ರಾ ಕಾರ್ಯಕ್ರಮವನ್ನು ದೊಡ್ಡ ದೊಡ್ಡ ರೀತಿಯಲ್ಲಿ ನಡೆಸಿ ಇಡೀ ಸಮಾಜಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಹೇಗೆಂದರೆ ಕನ್ನಡ ಚಾನೆಲ್ಗಳಲ್ಲಿ ದಿನಾ ಬೆಳಿಗ್ಗೆ ಪ್ರಸಾರವಾಗುವ ಎಲ್ಲಾ ಜ್ಯೋತಿಷ್ಯ ಹಾಗೂ ವಾಸ್ತು ಕಾರ್ಯಕ್ರಮಗಳು ಎಲ್ಲರನ್ನೂ 'ಬಕ್ರಾ" ಮಾಡಿ ಮೋಸ ಮಾಡಿ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಖರ್ಚು ನಷ್ಟ ಮಾಡಿಸುತ್ತದೆ.
ಮಹಿಳೆಯರೇ ಟಾರ್ಗೆಟ್ : ಈ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಾ ಗಿ 'ಬಕ್ರಿ " ಆಗುವುದು, ಕಾರಣ ಮಹಿಳೆಯರೇ ಹೆಚ್ಚಾಗಿ ಯಾವುದನ್ನೂ ಪ್ರಶ್ನಿಸದೆ, ತರ್ಕಿಸದೇ, ಮೌಢ್ಯ ಮತ್ತು ಕಂದಾಚಾರಗಳನ್ನು ಸುಲಭವಾಗಿ ಅಪ್ಪಿಕೊಳ್ಳುವುದು. ಇಂತಹ ಕಂದಚಾರಿಗಳಲ್ಲಿ ವಿದ್ಯಾವಂತ ಮಹಿಳೆಯರೇ ಹೆಚ್ಚು!
ಜಪಾನ್ನ ಸುಮೋ ಪೈಲ್ವಾನ್ ತರಹದ ಜ್ಯೋತಿಷಿಯೊಬ್ಬ ಕೊಟ್ಟ ಸಲಹೆಯೆಂದರೆ ಅವನು ಹೇಳಿದ ಕೆಲವು ವಸ್ತುಗಳನ್ನು ಸುಟ್ಟು ಬೂದಿ ಸೇವಿಸಿದ್ದರೆ ಅವರಿಗೆ ವಾಮಾಚಾರದಿಂದ ರಕ್ಷಣೆ ಸಿಗುತ್ತದೆಂತೆ. ಅವನು ಹೇಳಿದ ವಿಷ ವಸ್ತುಗಳ ಬೂದಿಯೂ ವಿಷಕಾರಕವಾಗಿರುತ್ತದೆಂಬ ಸಾಧಾರಣ ಜ್ಞಾನವೂ ಆ ದಡಿಯನಿಗಿಲ್ಲ!
ಇನ್ನೊಬ್ಬ ಜ್ಯೋತಿಷಿಯು ಹಾವು ಕಡಿದರೆ ವಿಷವನ್ನು ಮಂತ್ರದಿಂದ ಪರಿಹರಿಸಬಹುದೆಂಬ ಆತ್ಮಘಾತುಕ ಸಲಹೆ ಕೊಡುತ್ತಾನೆ. ಹಾವುಗಳಿಗೆ ಕಿವಿಯಿರುವುದಿಲ್ಲ. ಮಾನವನ ಮಂತ್ರ ಅವುಗಳಿಗೆ ಕೇಳಿಸುವುದೇ ಇಲ್ಲ ಎಂಬ ಜ್ಞಾನವೂ ಆತನಿಗಿಲ್ಲ. ಕೆಲವು ಜ್ಯೋತಿಷಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಹೇಳಿದ ವಿಷಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತ ಎಂದು ಗೊತ್ತಿರುವುದರಿಂದ ಕಂದಾಚಾರ ಹರಡಲು ಬೇಕೆಂದೇ ಇಂಗ್ಲೀಷ್ ಬಳಸುತ್ತಾರೆ.
ಹೈಟೆಕ್ ಜ್ಯೋತಿಷಿಗಳು: ಲ್ಯಾಪ್ಟಾಪ್ ಬಳಸುವುದು ಗೊತ್ತಿಲ್ಲದಿದ್ದರೂ, ವೀಕ್ಷಕರನ್ನು ಇಂಪ್ರೆಸ್ ಮಾಡಲು ಕೆಲವು ಜ್ಯೋತಿಷಿಗಳು ಎದುರಲ್ಲಿ ಲ್ಯಾಪ್ಟ್ಯಾಪ್ ತೋರಿಕೆಗೆ ಇಟ್ಟಿರುತ್ತಾರೆ. ಭಿಕ್ಷುಕರಿಗೆ ದಾನ ಮಾಡುವುದರಿಂದ ಲಕ್ಷ್ಮಿ ಮುನಿಯುತ್ತಾಳೆ ಎಂದು ಒಬ್ಬ ಜ್ಯೋತಿಷಿ ಹೇಳಿದ್ದೆ ತಡ, ನಮ್ಮ ಕಂದಾಚಾರಿ ಮುಖ್ಯಮಂತ್ರಿ ಯಡ್ಡಿ ಬೆಂಗಳೂರಿನಲ್ಲಿ ಭಿಕ್ಷುಕರನ್ನೆಲ್ಲ ಹಿಡಿದು ತಂದು ಮರುವಸತಿ ಕೇಂದ್ರದಲ್ಲಿ ತುರುಕಿ ನಂತರ ಪಸರಿಸಿದ ಸಾಂಕ್ರಾಮಿಕ ರೋಗದಿಂದ ನೂರಾರು ಭಿಕ್ಷುಕರ ಸಾವಿಗೆ ಕಾರಣೀಭೂತನಾದ.
'ಕನ್ನಡಿಗ ಮಾಜಿ ಪ್ರಧಾನಿಗಳು" ಇನ್ನು ಮೂರು ತಿಂಗಳಲ್ಲಿ ಸಾಯುತ್ತಾರೆ ಎಂದು ಹುಂಬ ಜ್ಯೋತಿಷಿ ಹೇಳಿ ಎರಡು ವರ್ಷವಾಯಿತು. ದೇವೇಗೌಡರು ಆರೋಗ್ಯವಾಗಿಯೇ ಇದ್ದಾನೆ. ಅಮೆರಿಕದಲ್ಲಿ ಹೀಗೆ ರಾಷ್ಟ್ರೀಯ ನಾಯಕರ ಬಗ್ಗೆ ಹೇಳಿ ಅವರ ಕುಟುಂಬಿಕರಿಗೆ ಅಭಿಮಾನಿಗಳಿಗೆ ಮಾನಸಿಕ ಹಿಂಸೆ ಕೊಟ್ಟಿದ್ದರೆ ಆ ಮೂರ್ಖ ಜ್ಯೋತಿಷಿಯನ್ನು ಕೋರ್ಟಿಗೆಳೆದು ಜೈಲಿಗೆ ಅಟ್ಟುತಿದ್ದರು.
ಒಟ್ಟಾರೆ, ಟಿವಿ ಜ್ಯೋತಿಷಿವೆಂದರೆ ಮೂಢರ ಸಂತೆ. ವೀಕಕರು ಪೆದ್ದು ಪೆದ್ದಾಗಿ ಕೇಳುವ ಪ್ರಶ್ನೆಗಳಿಗೆ ಅದಕ್ಕಿಂತ ಪೆದ್ದ ಉತ್ತರ ನೀಡುವ ಹುಂಬ ಜ್ಯೋತಿಷಿಗಳಿಗೆ ಕಾನೂನಿನ ಕಡಿವಾಣ ಅಗತ್ಯ. ಅಂತೆಯೇ ಅದಾಯಕರ ಇಲಾಖೆಯವರು ಈ ಟಿವಿ ಜ್ಯೋತಿಷಿಗಳ ವಿವಿಧ ಆದಾಯ ಮೂಲಗಳ ತನಿಖೆ ನಡೆಸಬೇಕು.