Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೀರ್ ಖಾನ್ ಸತ್ಯಮೇವ ಜಯತೆ ವಿಶೇಷ ಸಂಚಿಕೆ
ಈಗಾಗಲೆ ಅವರು 'ಸತ್ಯಮೇವ ಜಯತೆ' ರಿಯಾಲಿಟಿ ಶೋ ಮಾಡಿದ್ದು ನೆನಪಿರಬಹುದು. ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮರ್ಯಾದಾ ಹತ್ಯೆ, ಮದ್ಯಪಾನ, ಅಸ್ಪೃಶ್ಯತೆ... ಪ್ರಚಲಿತ ಸಮಸ್ಯೆಗಳ ಮೇಲೆ ಈ ಟಾಕ್ ಶೋ ಅಟ್ಯಾಕ್ ಮಾಡಿತ್ತು. ಸಾಕಷ್ಟು ಚರ್ಚೆ, ವಾದ ವಿವಾದಕ್ಕೆ ವೇದಿಕೆ ಒದಗಿಸಿತ್ತು.
ಈ ಶೋನ ವಿಶೇಷ ಸಂಚಿಕೆ ಆಗಸ್ಟ್ 19ರಂದು ಪ್ರಸಾರವಾಗಲಿವೆ. ಈ ವಿಶೇಷ ಸಂಚಿಕೆಯಲ್ಲಿ ಅಮೀರ್ ತಮ್ಮ ಅಭಿಮಾನಿಗಳೊಂದಿಗೆ ಮುಖಾಮುಖಿಯಾಗಲಿದ್ದಾರೆ. ಶೋನ ಪ್ರತಿ ಸಂಚಿಕೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂಬುದನ್ನು ಖುದ್ದು ಅಮೀರ್ ತಿಳಿಯ ಬಯಸಿದ್ದಾರೆ.
ಈ ಶೋಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಗೆ ಅಮೀರ್ ಧನ್ಯವಾದಗಳೂ ತಿಳಿಸಲಿದ್ದಾರೆ. ಅವರಿಗೆ ಅಸಂಖ್ಯಾತ ಈ-ಮೇಲ್ ಗಳು, ದೂರವಾಣಿ ಕರೆಗಳು, ಎಸ್ಎಂಎಸ್ ಗಳು, ಪತ್ರಗಳು ರಾಶಿ ರಾಶಿ ಬಂದಿವೆಯಂತೆ. ಎಲ್ಲರದೂ ಒಂದೇ ಅಭಿಪ್ರಾಯ 'ಸೂಪರ್ ಶೋ' ಎಂದು.
ಅಮೀರ್ ಖಾನ್ ಅವರ ಸಾಮಾಜಿಕ ಕಳಕಳಿಗೆ ಅನೇಕ ಸರ್ಕಾರೇತರ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಲು ಮುಂದಾಗಿವೆ. ಸತ್ಯಮೇವ ಜಯತೆ ಕಾರ್ಯಕ್ರಮದಿಂದ ರು.8 ಕೋಟಿ ನಿಧಿ ಸಂಗ್ರಹವಾಗಿದೆ. ಅಮೀರ್ ಖಾನ್ ಸಾಮಾಜಿಕ ಕಾಳಜಿಗೆ ಆನೆಬಲ ಬಂದಂತಾಗಿದೆ.
'ಸತ್ಯಮೇವ ಜಯತೆ'ಯ ವಿಶೇಷ ಸಂಚಿಕೆಗೆ 'ಸತ್ಯಮೇವ ಜಯತೇ ಕಾ ಸಫರ್' ಎಂದು ಹೆಸರಿಡಲಾಗಿದೆ. ಸ್ಟಾರ್ ಪ್ಲಸ್ ಹಾಗೂ ಡಿಡಿ 1 ವಾಹಿನಿಗಳಲ್ಲಿ ಆಗಸ್ಟ್ 19ರ ಬೆಳಗ್ಗೆ 11 ಗಂಟೆಗೆ ಈ ವಿಶೇಷ ಸಂಚಿಕೆಯನ್ನು ಕಣ್ಣು ತುಂಬಿಕೊಳ್ಳಬಹುದು. (ಏಜೆನ್ಸೀಸ್)