Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿ ಮಾತ್ರವಲ್ಲ, ರೇಡಿಯೋದಲ್ಲೂ ಅಮೀರ್ ಅಲೆ
ಅಮೀರ್ ನಡೆಸಿಕೊಡಲಿರುವ ಈ ಕಾರ್ಯಕ್ರಮ ಮೇ 12, 2012 ರಿಂದ ಪ್ರಾರಂಭವಾಗಲಿದೆ. ಪ್ರತಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಆಲ್ ಇಂಡಿಯಾ ರೇಡಿಯೋ ಮೂಲಕ ಇದು, ಮಧ್ಯಪ್ರದೇಶ, ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರಸಾರವಾಗಲಿದೆ. ಅಷ್ಟೇ ಅಲ್ಲ, ವಿವಿಧ ಭಾರತಿ ಬಾನುಲಿ ಕೇಂದ್ರದ ಮೂಲಕ ಪ್ರತಿ ಶನಿವಾರ ಮಧ್ಯಾನ್ಹ 3 ಗಂಟೆಗೂ ಇದನ್ನು ದೇಶಾದ್ಯಂತ ಕೇಳಬಹುದು.
"ಲೇಟೇಸ್ಟ್ ಸುದ್ದಿಗಳ ಬಗ್ಗೆ ಜನರ ಅಭಿಪ್ರಾಯ, ಪ್ರತಿಕ್ರಿಯೆ ಹಾಗೂ ವಿಚಾರಧಾರೆಗಳ ಬಗ್ಗೆ ನನಗೆ ತೀವ್ರ ಕುತೂಹಲವಿದೆ. ಅದಕ್ಕಾಗಿ ಆಕಾಶವಾಣಿ ಮೊರೆ ಹೋಗಿದ್ದೇನೆ" ಎಂಬುದು ಅಮೀರ್ ಮಾತು. ಆದರೆ ಈ ಮೂಲಕ ಅಮೀರ್, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ತಮ್ಮ ಕಾರ್ಯಕ್ರಮ ಸತ್ಯಮೇವ ಜಯತೇ ಬಗ್ಗೆ ಜನರ ಪ್ರತಿಕ್ರಿಯೆ ಕಂಡುಕೊಳ್ಳಲಿದ್ದಾರೆ ಎಂಬುದಂತೂ ಸತ್ಯ.
ಅಮೀರ್ ಆಕಾಶವಾಣಿ ಪ್ರವೇಶ ಸತ್ಯಮೇವ ಜಯತೆ ಪ್ರಚಾರಕಾರ್ಯದ ಒಂದು ಭಾಗವೂ ಹೌದು ಎನ್ನಬಹುದು. ಒಟ್ಟಿನಲ್ಲಿ ಬಾಲಿವುಡ್ ಸಿನಿಮಾಗಳ ಮೂಲಕ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿದ ಅಮೀರ್, ಟಿವಿ ಹಾಗೂ ರೇಡಿಯೋ ಮೂಲಕ ಭಾರತದ ಮೂಲೆಮೂಲೆಗೂ ತಲುಪುವ ಟಾರ್ಗೆಟ್ ಹೊಂದಿದ್ದಾರೆ. ಬಹುಶಃ ಸದ್ಯದಲ್ಲೇ ಭಾರತೀಯರೆಲ್ಲರ ಬಾಯಲ್ಲಿ 'ಸತ್ಯಮೇವ' ಹಾಗೂ 'ಜಯತೇ' ಎಂಬ ಎರಡೇ ಎರಡು ಶಬ್ದ ಮಾತ್ರ ಬಂದರೆ ಆಶ್ಚರ್ಯವೇನೂ ಇಲ್ಲ. (ಒನ್ ಇಂಡಿಯಾ ಕನ್ನಡ)