Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುರ್ವೇಧ ಚಿಕಿತ್ಸೆಗಾಗಿ ಗೋಮೂತ್ರ ಕುಡಿದಿದ್ದ ಅಕ್ಷಯ್ ಕುಮಾರ್!
ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆಂದರೆ ನೀವು ನಂಬಲೇ ಬೇಕು.
ಹೌದು, ಬಾಲಿವುಡ್ನ ಖ್ಯಾತ ನಟ, ಭಾರತೀಯ ನಟರ ಪೈಕಿ ಶ್ರೀಮಂತ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ. ಅಷ್ಟೇ ಅಲ್ಲ, ತಾವು ಗೋಮೂತ್ರವನ್ನು ಕುಡಿದಿದ್ದಾಗಿ ಹೇಳಿದ್ದಾರೆ ಅವರು.
ಸಾಹಸ ದೃಶ್ಯಗಳಿಗೆ, ಸಾಹಕ ಕಲೆಗಳಿಂದ ಪ್ರಸಿದ್ಧರಾಗಿರುವ ನಟ ಅಕ್ಷಯ್ ಕುಮಾರ್, ಸಾಹಸ ಯಾತ್ರಿ 'ಮ್ಯಾನ್ ವರ್ಸಸ್ ವೈಲ್ಡ್' ಖ್ಯಾತಿಯ ಬೇರ್ ಗ್ರಿಲ್ಸ್ ಜೊತೆಗೆ ಬಂಡಿಪುರ ಕಾಡಿನಲ್ಲಿ ಸಾಹಸ ಯಾತ್ರೆ ಮಾಡಿದ್ದು, ಅದರ ಎಪಿಸೋಡ್ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಇದೇ ಸಾಹಸ ಯಾತ್ರೆ ಸಂದರ್ಭ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರನೇ ಭಾರತೀಯ ಅಕ್ಷಯ್
ಬೇರ್ ಗ್ರಿಲ್ಸ್ ನ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ನಂತರ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಮೂರನೇ ಭಾರತೀಯ ಅಕ್ಷಯ್ ಕುಮಾರ್.
ಆನೆ ಲದ್ದಿಯಿಂದ ಮಾಡಿದ ಟೀ ಕುಡಿದ ಅಕ್ಷಯ್
ಅಕ್ಷಯ್ ಕುಮಾರ್ ಭಾಗವಹಿಸಿರುವ ಈ ಎಪಿಸೋಡ್ ಅನ್ನು ರಾಜ್ಯದ ಬಂಡಿಪುರ ಅರಣ್ಯದಲ್ಲಿ ಚಿತ್ರೀಕರಿಸಿದ್ದು, ಸಾಹಸ ಯಾತ್ರೆ ಸಮಯ, ಅಕ್ಷಯ್ ಕುಮಾರ್, ಆನೆ ಲದ್ದಿಯಿಂದ ಮಾಡಿದ ಚಹಾ ಸೇವನೆ ಮಾಡಿದ್ದಾರೆ. ಇದು ಎಪಿಸೋಡ್ನ ಟ್ರೇಲರ್ನಲ್ಲಿ ಪ್ರಸಾರವಾಗಿದೆ. ಕಾರ್ಯಕ್ರಮ ಡಿಸ್ಕವರಿ ಚಾನೆಲ್ನಲ್ಲಿ ಇನ್ನಷ್ಟೆ ಪ್ರಸಾರವಾಗಬೇಕಿದೆ.
ಗೋಮೂತ್ರ ಕುಡಿದಿರುವುದಾಗಿ ಹೇಳಿದ ಅಕ್ಷಯ್
ಅಕ್ಷಯ್ ಕುಮಾರ್ ಮತ್ತು ನಟಿ ಹುಮಾ ಖುರೇಷಿ ಇನ್ಸ್ಟಾಗ್ರಾಂ ಲೈವ್ ನಡೆಸಿದ್ದು ಈ ಲೈವ್ನಲ್ಲಿ ಬಿಯರ್ ಗ್ರಿಲ್ಸ್ ಸಹ ಭಾಗವಹಿಸಿದ್ದರು. ಈ ಸಂದರ್ಭ ತಾವು ಆಯುರ್ವೇಧ ಚಿಕಿತ್ಸೆಯೊಂದರ ಭಾಗವಾಗಿ ಗೋಮೂತ್ರವನ್ನು ಕುಡಿದಿದ್ದಾಗಿ ಸಹ ಹೇಳಿದ್ದಾರೆ ನಟ ಅಕ್ಷಯ್ ಕುಮಾರ್.
ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುತ್ತೇನೆ: ಗ್ರಿಲ್ಸ್
ಬಿಯರ್ ಗ್ರಿಲ್ಸ್ ಜೊತೆಗೆ ಸಾಹಸ ಯಾತ್ರೆಯಲ್ಲಿ ಅಕ್ಷಯ್ ಕುಮಾರ್ ಹಲವಾರು ಸಾಹಸಗಳನ್ನು ಮಾಡಿದ್ದಾರೆ. ಜೊತೆಗೆ ತಾವು ಸೈನ್ಯದ ಬಗ್ಗೆ ಏಕೆ ಅಪಾರ ಗೌರವ ಹೊಂದಿದ್ದೇನೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಿಯರ್ ಗ್ರಿಲ್ಸ್ ಸಹ ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.