Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುರ್ವೇಧ ಚಿಕಿತ್ಸೆಗಾಗಿ ಗೋಮೂತ್ರ ಕುಡಿದಿದ್ದ ಅಕ್ಷಯ್ ಕುಮಾರ್!
ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆಂದರೆ ನೀವು ನಂಬಲೇ ಬೇಕು.
ಹೌದು, ಬಾಲಿವುಡ್ನ ಖ್ಯಾತ ನಟ, ಭಾರತೀಯ ನಟರ ಪೈಕಿ ಶ್ರೀಮಂತ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ. ಅಷ್ಟೇ ಅಲ್ಲ, ತಾವು ಗೋಮೂತ್ರವನ್ನು ಕುಡಿದಿದ್ದಾಗಿ ಹೇಳಿದ್ದಾರೆ ಅವರು.
ಸಾಹಸ ದೃಶ್ಯಗಳಿಗೆ, ಸಾಹಕ ಕಲೆಗಳಿಂದ ಪ್ರಸಿದ್ಧರಾಗಿರುವ ನಟ ಅಕ್ಷಯ್ ಕುಮಾರ್, ಸಾಹಸ ಯಾತ್ರಿ 'ಮ್ಯಾನ್ ವರ್ಸಸ್ ವೈಲ್ಡ್' ಖ್ಯಾತಿಯ ಬೇರ್ ಗ್ರಿಲ್ಸ್ ಜೊತೆಗೆ ಬಂಡಿಪುರ ಕಾಡಿನಲ್ಲಿ ಸಾಹಸ ಯಾತ್ರೆ ಮಾಡಿದ್ದು, ಅದರ ಎಪಿಸೋಡ್ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಇದೇ ಸಾಹಸ ಯಾತ್ರೆ ಸಂದರ್ಭ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರನೇ ಭಾರತೀಯ ಅಕ್ಷಯ್
ಬೇರ್ ಗ್ರಿಲ್ಸ್ ನ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ನಂತರ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಮೂರನೇ ಭಾರತೀಯ ಅಕ್ಷಯ್ ಕುಮಾರ್.
ಆನೆ ಲದ್ದಿಯಿಂದ ಮಾಡಿದ ಟೀ ಕುಡಿದ ಅಕ್ಷಯ್
ಅಕ್ಷಯ್ ಕುಮಾರ್ ಭಾಗವಹಿಸಿರುವ ಈ ಎಪಿಸೋಡ್ ಅನ್ನು ರಾಜ್ಯದ ಬಂಡಿಪುರ ಅರಣ್ಯದಲ್ಲಿ ಚಿತ್ರೀಕರಿಸಿದ್ದು, ಸಾಹಸ ಯಾತ್ರೆ ಸಮಯ, ಅಕ್ಷಯ್ ಕುಮಾರ್, ಆನೆ ಲದ್ದಿಯಿಂದ ಮಾಡಿದ ಚಹಾ ಸೇವನೆ ಮಾಡಿದ್ದಾರೆ. ಇದು ಎಪಿಸೋಡ್ನ ಟ್ರೇಲರ್ನಲ್ಲಿ ಪ್ರಸಾರವಾಗಿದೆ. ಕಾರ್ಯಕ್ರಮ ಡಿಸ್ಕವರಿ ಚಾನೆಲ್ನಲ್ಲಿ ಇನ್ನಷ್ಟೆ ಪ್ರಸಾರವಾಗಬೇಕಿದೆ.
ಗೋಮೂತ್ರ ಕುಡಿದಿರುವುದಾಗಿ ಹೇಳಿದ ಅಕ್ಷಯ್
ಅಕ್ಷಯ್ ಕುಮಾರ್ ಮತ್ತು ನಟಿ ಹುಮಾ ಖುರೇಷಿ ಇನ್ಸ್ಟಾಗ್ರಾಂ ಲೈವ್ ನಡೆಸಿದ್ದು ಈ ಲೈವ್ನಲ್ಲಿ ಬಿಯರ್ ಗ್ರಿಲ್ಸ್ ಸಹ ಭಾಗವಹಿಸಿದ್ದರು. ಈ ಸಂದರ್ಭ ತಾವು ಆಯುರ್ವೇಧ ಚಿಕಿತ್ಸೆಯೊಂದರ ಭಾಗವಾಗಿ ಗೋಮೂತ್ರವನ್ನು ಕುಡಿದಿದ್ದಾಗಿ ಸಹ ಹೇಳಿದ್ದಾರೆ ನಟ ಅಕ್ಷಯ್ ಕುಮಾರ್.
ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುತ್ತೇನೆ: ಗ್ರಿಲ್ಸ್
ಬಿಯರ್ ಗ್ರಿಲ್ಸ್ ಜೊತೆಗೆ ಸಾಹಸ ಯಾತ್ರೆಯಲ್ಲಿ ಅಕ್ಷಯ್ ಕುಮಾರ್ ಹಲವಾರು ಸಾಹಸಗಳನ್ನು ಮಾಡಿದ್ದಾರೆ. ಜೊತೆಗೆ ತಾವು ಸೈನ್ಯದ ಬಗ್ಗೆ ಏಕೆ ಅಪಾರ ಗೌರವ ಹೊಂದಿದ್ದೇನೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಿಯರ್ ಗ್ರಿಲ್ಸ್ ಸಹ ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.