Don't Miss!
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Sports KKR vs RR IPL 2024: ಸುನಿಲ್ ನರೈನ್ ಚೊಚ್ಚಲ ಐಪಿಎಲ್ ಶತಕ; ರಾಜಸ್ಥಾನ್ಗೆ ಬೃಹತ್ ಗುರಿ ನೀಡಿದ ಕೋಲ್ಕತ್ತಾ
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ ಮೋಹನ್.!
ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ತುತ್ತಾ ಮುತ್ತಾ' ಕೂಡ ಒಂದು. ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಕಾರ್ಯಕ್ರಮಗಳಲ್ಲಿ ಒಂದಾದ 'ತುತ್ತಾ ಮುತ್ತಾ'ದ ಈ ವಾರದ ಸಂಚಿಕೆಯಲ್ಲಿ ರಸದೌತಣವೇ ಕಾದಿದೆ.
ಖ್ಯಾತ ನಟ, ನಿರ್ದೇಶಕ ಮೋಹನ್ ತಮ್ಮ ಕುಟುಂಬದೊಂದಿಗೆ ಇದೇ ಶನಿವಾರ 9 ಗಂಟೆಗೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಉಗ್ರ ನರಸಿಂಹ' ಎಂಬ ಆಕ್ಷನ್ ಚಿತ್ರದ ಸೆಟ್ ನಲ್ಲಿ ನಡೆದ ವಿಚಿತ್ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮೋಹನ್, ತಾನು ತಿಂದ ಪೆಟ್ಟುಗಳ ಬಗ್ಗೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...
'ಉಗ್ರ ನರಸಿಂಹ' ಚಿತ್ರದ ಕರಾಳ ಅನುಭವ
ನಾವು ಚಿತ್ರೀಕರಣ ಮಾಡುತ್ತಿದ್ದ ಬಂಗಲೆಯೊಂದರಲ್ಲಿ ದೆವ್ವ-ಭೂತಗಳಿವೆ ಎಂದು ಹಲವಾರು ಬಾರಿ ನಮಗೆ ಎಚ್ಚರಿಸಲಾಗಿತ್ತು. ಅದಕ್ಕೆ ಬೆಲೆ ಕೊಡದೆ ನಾವು ಕೆಲಸ ಮುಂದುವರೆಸಿದೆವು. ಅದು ಹೇಗೋ ಗೊತ್ತಿಲ್ಲ, ನನ್ನ ಕುತ್ತಿಗೆಯ ಮೇಲೆ ಒಂದು ದೊಡ್ಡ ಹಂಚು ಬಿದ್ದು ನನ್ನ ಪ್ರಜ್ಞೆ ಹೋಗಿತ್ತು. ನಂತರ ನನ್ನ ಬೆನ್ನಿನಲ್ಲಿ ಇನ್ನೊಂದು ಗಾಯವಾಗಿ ವಾರವಿಡೀ ಶೂಟಿಂಗ್ ಸ್ಪಾಟ್ ಗೆ ಡಾಕ್ಟರ್ ಬಂದು ಸೂಜಿ ಚುಚ್ಚಬೇಕಾಯಿತು. ನಾವು ಸ್ಥಳದಲ್ಲಿ ಶಾಂತಿಯುತವಾಗಿ ಚಿತ್ರೀಕರಣ ಮಾಡಲು ಸಾಧ್ಯವೇ ಆಗಲಿಲ್ಲ ಅಂತ ಮೋಹನ್ 'ಉಗ್ರ ನರಸಿಂಹ' ಚಿತ್ರದ ಅನುಭವವನ್ನು ಹೊರ ಹಾಕಿದರು.
ಉದಯ ಟಿವಿಯಲ್ಲಿ ಆರಂಭ ಆಗಲಿದೆ ಹೊಸ ಶೋ 'ತುತ್ತಾ ಮುತ್ತಾ'
ಮೋಹನ್ ಲವ್ ಸ್ಟೋರಿ
ರಂಗಭೂಮಿ ಕಲಾವಿದರಾದ ಮೋಹನ್ ಅವರ ಪತ್ನಿ ವಿದ್ಯಾ ಸಂಚಿಕೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ತಮ್ಮ ಪ್ರೇಮ ಕಥೆಯನ್ನು ನೆನೆಯುತ್ತ, ಮೋಹನ್ ರವರ ಮಹಿಳಾ ಫ್ಯಾನ್ಸ್ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ
ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ಮೋಹನ್ ತಾಯಿ
ಮೋಹನ್ ತಾಯಿ ಸತ್ಯಭಾಮ ತನ್ನ ಮಗನ ಸಕಾರಾತ್ಮಕ ವರ್ತನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸತ್ಯಭಾಮಾ ರವರು ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬಂದ ಸಮಯದ ಬಗ್ಗೆ ವಿವರಿಸಿ, ಆಪರೇಷನ್ ನಂತರ ತಾಯಿಯ ಕರುಳನ್ನು ಕೈಯಲ್ಲಿ ಹಿಡಿದ ಕ್ಷಣವನ್ನು ನೋವಿನಿಂದ ಮೋಹನ್ ವಿವರಿಸಿದರು. ''ತಾಯಿ ಮಗುವಿನ ಕರಳು ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಆಕೆಯ ದೇಹದ ಒಂದು ಭಾಗವನ್ನು ಕೈಯಲ್ಲಿ ಹಿಡಿಯುವಂತಹ ನತದೃಷ್ಟ ಸನ್ನಿವೇಶ ಇನ್ಯಾರಿಗೂ ಬಾರದಿರಲಿ'' ಎಂದರು ಮೋಹನ್.
ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ದೇವಯಾನಿ'
ಪ್ರಸಾರ ಯಾವಾಗ.?
ಮೋಹನ್, ಪತ್ನಿ ವಿದ್ಯಾ ಮತ್ತು ತಾಯಿ ಸತ್ಯಭಾಮ ಅತಿಥಿಗಳಾಗಿ ಭಾಗವಹಿಸಿರುವ, ನಿರಂಜನ್ ದೇಶಪಾಂಡೆ ನಿರೂಪಣೆ ಹೊಂದಿರುವ 'ತುತ್ತಾ ಮುತ್ತಾ' ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.