twitter
    For Quick Alerts
    ALLOW NOTIFICATIONS  
    For Daily Alerts

    ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ ಮೋಹನ್.!

    |

    ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ತುತ್ತಾ ಮುತ್ತಾ' ಕೂಡ ಒಂದು. ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಕಾರ್ಯಕ್ರಮಗಳಲ್ಲಿ ಒಂದಾದ 'ತುತ್ತಾ ಮುತ್ತಾ'ದ ಈ ವಾರದ ಸಂಚಿಕೆಯಲ್ಲಿ ರಸದೌತಣವೇ ಕಾದಿದೆ.

    ಖ್ಯಾತ ನಟ, ನಿರ್ದೇಶಕ ಮೋಹನ್ ತಮ್ಮ ಕುಟುಂಬದೊಂದಿಗೆ ಇದೇ ಶನಿವಾರ 9 ಗಂಟೆಗೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    'ಉಗ್ರ ನರಸಿಂಹ' ಎಂಬ ಆಕ್ಷನ್ ಚಿತ್ರದ ಸೆಟ್ ನಲ್ಲಿ ನಡೆದ ವಿಚಿತ್ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮೋಹನ್, ತಾನು ತಿಂದ ಪೆಟ್ಟುಗಳ ಬಗ್ಗೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

    'ಉಗ್ರ ನರಸಿಂಹ' ಚಿತ್ರದ ಕರಾಳ ಅನುಭವ

    'ಉಗ್ರ ನರಸಿಂಹ' ಚಿತ್ರದ ಕರಾಳ ಅನುಭವ

    ನಾವು ಚಿತ್ರೀಕರಣ ಮಾಡುತ್ತಿದ್ದ ಬಂಗಲೆಯೊಂದರಲ್ಲಿ ದೆವ್ವ-ಭೂತಗಳಿವೆ ಎಂದು ಹಲವಾರು ಬಾರಿ ನಮಗೆ ಎಚ್ಚರಿಸಲಾಗಿತ್ತು. ಅದಕ್ಕೆ ಬೆಲೆ ಕೊಡದೆ ನಾವು ಕೆಲಸ ಮುಂದುವರೆಸಿದೆವು. ಅದು ಹೇಗೋ ಗೊತ್ತಿಲ್ಲ, ನನ್ನ ಕುತ್ತಿಗೆಯ ಮೇಲೆ ಒಂದು ದೊಡ್ಡ ಹಂಚು ಬಿದ್ದು ನನ್ನ ಪ್ರಜ್ಞೆ ಹೋಗಿತ್ತು. ನಂತರ ನನ್ನ ಬೆನ್ನಿನಲ್ಲಿ ಇನ್ನೊಂದು ಗಾಯವಾಗಿ ವಾರವಿಡೀ ಶೂಟಿಂಗ್ ಸ್ಪಾಟ್ ಗೆ ಡಾಕ್ಟರ್ ಬಂದು ಸೂಜಿ ಚುಚ್ಚಬೇಕಾಯಿತು. ನಾವು ಸ್ಥಳದಲ್ಲಿ ಶಾಂತಿಯುತವಾಗಿ ಚಿತ್ರೀಕರಣ ಮಾಡಲು ಸಾಧ್ಯವೇ ಆಗಲಿಲ್ಲ ಅಂತ ಮೋಹನ್ 'ಉಗ್ರ ನರಸಿಂಹ' ಚಿತ್ರದ ಅನುಭವವನ್ನು ಹೊರ ಹಾಕಿದರು.

    ಉದಯ ಟಿವಿಯಲ್ಲಿ ಆರಂಭ ಆಗಲಿದೆ ಹೊಸ ಶೋ 'ತುತ್ತಾ ಮುತ್ತಾ'ಉದಯ ಟಿವಿಯಲ್ಲಿ ಆರಂಭ ಆಗಲಿದೆ ಹೊಸ ಶೋ 'ತುತ್ತಾ ಮುತ್ತಾ'

    ಮೋಹನ್ ಲವ್ ಸ್ಟೋರಿ

    ಮೋಹನ್ ಲವ್ ಸ್ಟೋರಿ

    ರಂಗಭೂಮಿ ಕಲಾವಿದರಾದ ಮೋಹನ್ ಅವರ ಪತ್ನಿ ವಿದ್ಯಾ ಸಂಚಿಕೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ತಮ್ಮ ಪ್ರೇಮ ಕಥೆಯನ್ನು ನೆನೆಯುತ್ತ, ಮೋಹನ್ ರವರ ಮಹಿಳಾ ಫ್ಯಾನ್ಸ್ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

    ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ

    ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ಮೋಹನ್ ತಾಯಿ

    ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ಮೋಹನ್ ತಾಯಿ

    ಮೋಹನ್ ತಾಯಿ ಸತ್ಯಭಾಮ ತನ್ನ ಮಗನ ಸಕಾರಾತ್ಮಕ ವರ್ತನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸತ್ಯಭಾಮಾ ರವರು ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬಂದ ಸಮಯದ ಬಗ್ಗೆ ವಿವರಿಸಿ, ಆಪರೇಷನ್ ನಂತರ ತಾಯಿಯ ಕರುಳನ್ನು ಕೈಯಲ್ಲಿ ಹಿಡಿದ ಕ್ಷಣವನ್ನು ನೋವಿನಿಂದ ಮೋಹನ್ ವಿವರಿಸಿದರು. ''ತಾಯಿ ಮಗುವಿನ ಕರಳು ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಆಕೆಯ ದೇಹದ ಒಂದು ಭಾಗವನ್ನು ಕೈಯಲ್ಲಿ ಹಿಡಿಯುವಂತಹ ನತದೃಷ್ಟ ಸನ್ನಿವೇಶ ಇನ್ಯಾರಿಗೂ ಬಾರದಿರಲಿ'' ಎಂದರು ಮೋಹನ್.

    ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ದೇವಯಾನಿ'ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ದೇವಯಾನಿ'

    ಪ್ರಸಾರ ಯಾವಾಗ.?

    ಪ್ರಸಾರ ಯಾವಾಗ.?

    ಮೋಹನ್, ಪತ್ನಿ ವಿದ್ಯಾ ಮತ್ತು ತಾಯಿ ಸತ್ಯಭಾಮ ಅತಿಥಿಗಳಾಗಿ ಭಾಗವಹಿಸಿರುವ, ನಿರಂಜನ್ ದೇಶಪಾಂಡೆ ನಿರೂಪಣೆ ಹೊಂದಿರುವ 'ತುತ್ತಾ ಮುತ್ತಾ' ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

    English summary
    Kannada Actor, Director Mohan and family have taken part in Tutta Mutta game show.
    Wednesday, November 21, 2018, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X