Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಮಾಲಿಗುಡ್ಡ'ದ ಮೂಲಕ ಬೆಳ್ಳಿಪರದೆಗೆ ಭಾವನಾ ರೀ ಎಂಟ್ರಿ
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಭಾವನಾ ರಾಮಣ್ಣ ಕೂಡಾ ಒಬ್ಬರು. ಸುಮಾರು 5 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಇದೀಗ 'ಜಮಾಲಿಗುಡ್ಡ' ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ.
ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಭಾವನಾ ರಾಮಣ್ಣ ಅಭಿನಯಿಸಿದ ಮೊದಲ ಕನ್ನಡ ಸಿನಿಮಾ 'ನೀ ಮುಡಿದ ಮಲ್ಲಿಗೆ'. ಮೊದಲ ಕನ್ನಡ ಚಿತ್ರದಲ್ಲೇ ಭಾವನಾಗೆ ಉತ್ತಮ ನಟಿ ಪ್ರಶಸ್ತಿ ದೊರೆಯಿತು. ಅಲ್ಲಿಂದ ಅವರು ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಕುರಿಗಳು ಸಾರ್ ಕುರಿಗಳು, ಪರ್ವ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ , ಆಪ್ತರಕ್ಷಕ, ಚಿಂಗಾರಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಈ ನಡುವೆ ಅವರು ತೆಲುಗು, ತಮಿಳು ಒಂದು ಹಿಂದಿ ಚಿತ್ರದಲ್ಲಿ ಕೂಡಾ ನಟಿಸಿ ಬಂದರು. ಆದರೆ 2016 ರಲ್ಲಿ ಬಿಡುಗೆಯಾದ 'ನಿರುತ್ತರ' ಚಿತ್ರದ ನಂತರ ಅವರು ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಬಹಳ ದಿನಗಳ ಬಿಡುವಿನ ನಂತರ 'ಜಮಾಲಿಗುಡ್ಡ'ದಲ್ಲಿ ಭಾವನಾ ರಾಮಣ್ಣ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.
ಭಾವನಾ ಅವರ ಹೆಸರು ಮೊದಲಿಗೆ ನಂದಿನಿ ರಾಮಣ್ಣ ಎಂದು ಕರೆಯುತ್ತಿದ್ದರು. ಭಾವನಾ ಶಾಸ್ತ್ರೀಯ ನೃತ್ಯ ತರಬೇತಿ ಸಹ ಪಡೆದಿದ್ದಾರೆ. ಆರಂಭದಲ್ಲಿ ನಟಿ ಭಾವನಾಗೆ ನಟಿಸುವ ಉದ್ದೇಶವಿರಲಿಲ್ಲ. ಹಾಗಾಗಿ ಸುಮಾರು ಹತ್ತು ವರ್ಷಗಳ ಕಾಲ ಭರತನಾಟ್ಯವನ್ನು ಕಲಿತರು ಮತ್ತು ರಂಗ ನೃತ್ಯ ಸಂಯೋಜಕರಾಗಲು ಬಯಸಿದ್ದರು.
ಸಿನಿಮಾಗಳಿಗೆ ಹೇಗೆ ಎಂಟ್ರಿ ನೀಡಿದ್ರು ಭಾವನಾ
ಮದುವೆ ಸಮಾರಂಭದಲ್ಲಿ ತಮ್ಮನ್ನು ನೋಡಿ ತಮ್ಮ ನೃತ್ಯದಿಂದ ಪ್ರಭಾವಿತರಾದ ಕೃಷ್ಣಪ್ಪ ಉಪ್ಪೂರರಿಂದ ತುಳು ಚಿತ್ರವಾದ 'ಮರಿಬೆಲೆ' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದರು ಭಾವನಾ. ಆದರೆ ಆ ಸಿನಿಮಾ ಯಶಸ್ವಿಯಾಗಲಿಲ್ಲ, ಆದರೆ ಭಾವನಾ ಅವರನ್ನು ಕನ್ನಡ ಚಲನಚಿತ್ರ ನಿರ್ಮಾಪಕರು ಗುರುತಿಸಿದರು. 'ಮರಿಬೆಲೆ' ನಂತರ ಆಕೆ ಕನ್ನಡ ಚಿತ್ರ ನಂ .1 ರಲ್ಲಿ ಪೋಲಿಸ್ ಪಾತ್ರದಲ್ಲಿ ಅಭಿನಯಿಸಿ ಪ್ರಸಿದ್ಧರಾದರು.
'ಚಂದ್ರಮುಖಿ ಪ್ರಾಣಸಖಿ'ಯಲ್ಲಿ ನಟನೆ
ಭಾವನಾ ಸೀತಾರಾಂ ಕಾರಂತ್ ಅವರ ಸಂಗೀತಪ್ರಧಾನ ಚಿತ್ರ 'ಚಂದ್ರಮುಖಿ ಪ್ರಾಣಸಖಿ'ಯಲ್ಲಿ ನಟಿಸಿದರು, ಅಲ್ಲಿ ಅವರು ರಮೇಶ್ ಅರವಿಂದ್ ಮತ್ತು ಪ್ರೇಮಾ ಅವರೊಂದಿಗೆ ನಟಿಸಿದರು. ಭಾವನಾ ಕವಿತಾ ಲಂಕೇಶ್ ಅವರ 'ದೇವೇರಿ' ಚಿತ್ರಕ್ಕೆ ಅರವಿಂದನ್ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು. ಖ್ಯಾತ ನಿರ್ದೇಶಕ ಕೆವಿ ರಾಜು ನಿರ್ದೇಶಿಸಿದ "ರಾಷ್ಟ್ರಗೀತೆ" ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸಿದರು. ಮಲೆಯಾಳಂ ಚಲನಚಿತ್ರಗಳ ನಿರ್ದೇಶಕ ಮತ್ತು ಛಾಯಾಗ್ರಾಹಕ ದಿನೇಶ್ ಬಾಬು, ಭಾವನಾ ಅವರಿಗೆ "ದೀಪಾವಳಿ" ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು.
ಸ್ಟಾರ್ ನಟರೊಂದಿಗೆ ನಟಿಸಿರುವ ಭಾವನಾ
ಇದರಲ್ಲಿ ವಿಷ್ಣುವರ್ಧನ್ ಮತ್ತು ರಮೇಶ್ ಅರವಿಂದ್ ಅವರ ಎದುರಿಗೆ ಭಾವನಾ ನಟಿಸಿದರೂ ಈ ಚಿತ್ರ ಬಾಕ್ಸಾಫೀಸಿನಲ್ಲಿ ವಿಫಲವಾಯಿತು. ವಿಷ್ಣುವರ್ಧನ್ ಅವರ "ಪರ್ವ"ದಲ್ಲಿ ಭಾವನಾ ಒಂದು ಹಾಡಿನಲ್ಲಿ ನಟಿಸಿದ್ದಾರೆ ಭಾವನ 'ನಿನಗಾಗಿ' ಚಿತ್ರದಲ್ಲಿ ಐಟಂ ನೃತ್ಯ ಮಾಡಿದ್ದಾರೆ. ಭಾವನಾ ಕವಿತಾ ಲಂಕೇಶ್ ಅವರ ಎರಡನೇ ಚಿತ್ರ ಅಲೆಮಾರಿಯಲ್ಲಿ ನಟಿಸಿದರು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮಕ್ಕಾಗಿ ಮಾಡಿದ ಅಲೆಮಾರಿಯನ್ನು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು.
ಬಾಲಿವುಡ್ನಲ್ಲಿಯೂ ನಟಿಸಿರುವ ಭಾವನಾ
ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ ಆಫ್ ಬೀಟ್ ಕನ್ನಡ ಚಲನಚಿತ್ರ, ಗಿನ್ನಿಸ್ ದಾಖಲೆಗೆ ಸೇರಿದ ಎರಡನೇ ಭಾರತೀಯ ಚಿತ್ರ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಭಾವನಾ ಅಮಿತಾಬ್ ಬಚ್ಚನ್ ನಟಿಸಿದ ಬಾಲಿವುಡ್ ಚಲನಚಿತ್ರ ಫ್ಯಾಮಿಲಿ ಕೂಡ ಮಾಡಿದರು. ಭಾರತೀಯ ಚಲನಚಿತ್ರ ನಟಿ ನಂದಿನಿ ರಾಮಣ್ಣ ಅವರು ತಮ್ಮ ರಂಗನಾಮ ಭಾವನಾ ರಾಮಣ್ಣನಿಂದಲೇ ಚಿರಪರಿಚಿತರು. ಅವರು ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ .
ಭರತನಾಟ್ಯ ನೃತ್ಯಗಾರ್ತಿ ಭಾವನಾ
ಭರತನಾಟ್ಯ ನೃತ್ಯಗಾರ್ತಿಯಾದ ಅವರು ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಮತ್ತು ಗಿನ್ನಿಸ್ ದಾಖಲೆಗೆ ಸೇರಿದ ಶಾಂತಿ ಚಿತ್ರದಲ್ಲಿ ನಟಿಸಿದ್ದಾರೆ. ಭಾವನಾ ರಾಮಣ್ಣ ಹೋಮ್ಟೌನ್ ಪ್ರೊಡಕ್ಷನ್ಸ್ ಎಂಬ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯನ್ನು ಇವರು ಸ್ಥಾಪಿಸಿದ್ದಾರೆ. 2014 ರ ಲೋಕಸಭಾ ಚುನಾವಣೆಗೆ ಮುನ್ನ, ಭಾವನಾ ರಾಮಣ್ಣ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಹೆಸರಿಸಲಾಯಿತು, ಅವರು 2013 ರ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಸ್ಟಾರ್ ಪ್ರಚಾರಕಿ ಆಗಿದ್ದರು.