Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾತ್ರ ಬೇಕೆಂದರೆ ಮಂಚ ಏರಬೇಕು ಎಂದಿದ್ದನಂತೆ ಆ ನಿರ್ದೇಶಕ
ಮೀ ಟೂ ಅಭಿಯಾನ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟಿತು. ಆದರೆ ಆ ಕರಾಳ ಕತೆಗಳು ಚಿತ್ರರಂಗದಲ್ಲಿ ಇನ್ನೂ ಸಾಕಷ್ಟಿವೆ. ಕಾಲ-ಕಾಲಕ್ಕೆ ಹೊರಗೆ ಬರುತ್ತಿವೆ.
ಇದೀಗ ಟಿವಿ ನಟಿಯೊಬ್ಬರು ತಮಗಾದ ಕೆಟ್ಟ ಅನುಭವವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬ ಪಾತ್ರ ನೀಡಲು ಮುಂದಿಟ್ಟಿದ್ದ ಕೆಟ್ಟ ಷರತ್ತಿನ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಮೀ ಟೂ ಚಳವಳಿಯಿಂದ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ: ರಾಧಿಕಾ
ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ದೋನಲ್ ಬಿಶ್ಟ್ ತಮಗಾದ ಕೆಟ್ಟ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಪತ್ರಕರ್ತೆಯಾಗುವ ಕನಸಿಟ್ಟುಕೊಂಡು ಶಿಕ್ಷಣ ಮುಗಿಸಿದ್ದ ದೋನಲ್, ಉದ್ಯೋಗಕ್ಕೆ ಹೊದಾಗ ತೀವ್ರ ನಿರಾಸೆ ಅನುಭವಿಸಿದ್ದರಂತೆ. ಈ ರೀತಿಯ ಪತ್ರಕರ್ತೆ ಆಗಲು ತಾವು ಶಿಕ್ಷಣ ಮಾಡಿರಲಿಲ್ಲ ಎಂದು ನಿಶ್ಚಯಿಸಿ, ಸಿನಿಮಾದಲ್ಲಿ ನಟಿಸುವ ನಿರ್ಧಾರ ಮಾಡಿದರಂತೆ.
'ಆರಂಭದಲ್ಲಿ ಒಂದು ಶೋ ನಲ್ಲಿ ಅವಕಾಶ ಸಿಕ್ಕು, ಹಣದ ಮಾತು-ಕತೆ ಮುಗಿದು, ಡೇಟ್ಸ್ ನೀಡಿದ್ದು ಸಹ ಆಗಿತ್ತು, ಆದರೆ ಕೊನೆ ಕ್ಷಣದಲ್ಲಿ ನನ್ನನ್ನು ತೆಗೆದು ಬೇರೆ ನಟಿಯನ್ನು ಆಯ್ಕೆ ಮಾಡಲಾಯಿತು. ಆಗ ನಾನು ಮತ್ತು ನನ್ನ ಕುಟುಂಬದ ಅನುಭವಿಸಿದ ಶಾಕ್ ಅಷ್ಟಿಷ್ಟಲ್ಲ, ಸಿನಿಮಾ ರಂಗದಲ್ಲಿರುವವರೆಲ್ಲಾ ಮೋಸಗಾರರು, ಮುಂಬೈ ನ ಜನರೆಲ್ಲಾ ಪೊಳ್ಳು ಜನರು' ಎಂದು ಕೊಂಡಿದ್ದರಂತೆ ನಟಿ.
ಜೂನಿಯರ್ ಎನ್ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!
'ಆದರೆ ನಿಜವಾಗಿ ಶಾಕ್ ಆಗಿದ್ದು, ದಕ್ಷಿಣ ಭಾರತದ ನಿರ್ದೇಶಕನೊಬ್ಬ, ಸಿನಿಮಾದಲ್ಲಿ ಪಾತ್ರ ನೀಡಲು ತನ್ನೊಂದಿಗೆ ಮಂಚ ಹಂಚಿಕೊಳ್ಳಲು ಕೇಳಿದಾಗ' ಎಂದು ಹೇಳಿದ್ದಾರೆ ನಟಿ ದೋನಲ್. ಕೂಡಲೇ ನಾನು ಆ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.