Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾತ್ರ ಬೇಕೆಂದರೆ ಮಂಚ ಏರಬೇಕು ಎಂದಿದ್ದನಂತೆ ಆ ನಿರ್ದೇಶಕ
ಮೀ ಟೂ ಅಭಿಯಾನ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟಿತು. ಆದರೆ ಆ ಕರಾಳ ಕತೆಗಳು ಚಿತ್ರರಂಗದಲ್ಲಿ ಇನ್ನೂ ಸಾಕಷ್ಟಿವೆ. ಕಾಲ-ಕಾಲಕ್ಕೆ ಹೊರಗೆ ಬರುತ್ತಿವೆ.
ಇದೀಗ ಟಿವಿ ನಟಿಯೊಬ್ಬರು ತಮಗಾದ ಕೆಟ್ಟ ಅನುಭವವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬ ಪಾತ್ರ ನೀಡಲು ಮುಂದಿಟ್ಟಿದ್ದ ಕೆಟ್ಟ ಷರತ್ತಿನ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಮೀ ಟೂ ಚಳವಳಿಯಿಂದ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ: ರಾಧಿಕಾ
ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ದೋನಲ್ ಬಿಶ್ಟ್ ತಮಗಾದ ಕೆಟ್ಟ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಪತ್ರಕರ್ತೆಯಾಗುವ ಕನಸಿಟ್ಟುಕೊಂಡು ಶಿಕ್ಷಣ ಮುಗಿಸಿದ್ದ ದೋನಲ್, ಉದ್ಯೋಗಕ್ಕೆ ಹೊದಾಗ ತೀವ್ರ ನಿರಾಸೆ ಅನುಭವಿಸಿದ್ದರಂತೆ. ಈ ರೀತಿಯ ಪತ್ರಕರ್ತೆ ಆಗಲು ತಾವು ಶಿಕ್ಷಣ ಮಾಡಿರಲಿಲ್ಲ ಎಂದು ನಿಶ್ಚಯಿಸಿ, ಸಿನಿಮಾದಲ್ಲಿ ನಟಿಸುವ ನಿರ್ಧಾರ ಮಾಡಿದರಂತೆ.
'ಆರಂಭದಲ್ಲಿ ಒಂದು ಶೋ ನಲ್ಲಿ ಅವಕಾಶ ಸಿಕ್ಕು, ಹಣದ ಮಾತು-ಕತೆ ಮುಗಿದು, ಡೇಟ್ಸ್ ನೀಡಿದ್ದು ಸಹ ಆಗಿತ್ತು, ಆದರೆ ಕೊನೆ ಕ್ಷಣದಲ್ಲಿ ನನ್ನನ್ನು ತೆಗೆದು ಬೇರೆ ನಟಿಯನ್ನು ಆಯ್ಕೆ ಮಾಡಲಾಯಿತು. ಆಗ ನಾನು ಮತ್ತು ನನ್ನ ಕುಟುಂಬದ ಅನುಭವಿಸಿದ ಶಾಕ್ ಅಷ್ಟಿಷ್ಟಲ್ಲ, ಸಿನಿಮಾ ರಂಗದಲ್ಲಿರುವವರೆಲ್ಲಾ ಮೋಸಗಾರರು, ಮುಂಬೈ ನ ಜನರೆಲ್ಲಾ ಪೊಳ್ಳು ಜನರು' ಎಂದು ಕೊಂಡಿದ್ದರಂತೆ ನಟಿ.
ಜೂನಿಯರ್ ಎನ್ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!
'ಆದರೆ ನಿಜವಾಗಿ ಶಾಕ್ ಆಗಿದ್ದು, ದಕ್ಷಿಣ ಭಾರತದ ನಿರ್ದೇಶಕನೊಬ್ಬ, ಸಿನಿಮಾದಲ್ಲಿ ಪಾತ್ರ ನೀಡಲು ತನ್ನೊಂದಿಗೆ ಮಂಚ ಹಂಚಿಕೊಳ್ಳಲು ಕೇಳಿದಾಗ' ಎಂದು ಹೇಳಿದ್ದಾರೆ ನಟಿ ದೋನಲ್. ಕೂಡಲೇ ನಾನು ಆ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.