Don't Miss!
- News Lok Sabha Election: ಚಾಮರಾಜನಗರ ಕ್ಷೇತ್ರ ಸಿಎಂಗೆ ಪ್ರತಿಷ್ಠೆಯ ಕಣ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದಾಶಿವನಗರದಲ್ಲಿ ನಮ್ಮ ಮನೆಯೇ ಇಲ್ಲ: ಎಲ್ಲಾ ಸುಳ್ಳು
ಇನ್ನು ಐಷಾರಾಮಿ ಎನ್ನುವುದಕ್ಕೆ ಏನಿದೆ? ನಾನು ಓಡಾಡುವ ಕಾರು ಸ್ವಿಫ್ಟ್ ಡಿಸೈರ್. ಅದಕ್ಕೆ ಎಷ್ಟು ಬೆಲೆ ಎಂಬುದು ಎಲ್ಲರಿಗೂ ಗೊತ್ತು. ಅದ್ಯಾಕೆ ರಾಜಕೀಯ ವ್ಯಕ್ತಿಗಳ ಮಕ್ಕಳ ಜೊತೆ ನಮ್ಮಂತ ನಟಿಯರ ಹೆಸರು ಸೇರಿಸುತ್ತಾರೋ ತಿಳಿಯದಾಗಿದೆ. ಅಷ್ಟಕ್ಕೂ ನಾನು ಯಡಿಯೂರಪ್ಪ ಅವರ ಮಕ್ಕಳಲ್ಲಿ ಒಬ್ಬರನ್ನೂ ಇನ್ನೂ ಭೇಟಿಯೇ ಆಗಿಲ್ಲದಿರುವಾಗ..!" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ, ನನ್ನ ಕನ್ನಡ ಸಿನಿಮಾ ಬಿಡುಗಡೆ ವೇಳೆ ಈ ರೀತಿ ಈ ಸುದ್ದಿ ಹಬ್ಬುವುದು ಮಾಮೂಲಿಯಾಗಿದೆ. ಚಿತ್ರಕ್ಕೆ ಪ್ರಚಾರವನ್ನು ಬೇರೆ ಒಳ್ಳೆಯ ರೀತಿಯಲ್ಲಿ ಮಾಡಬಹುದು. ಅಷ್ಟಕ್ಕೂ ಮಾಡಿದ ಚಿತ್ರ ಚೆನ್ನಾಗಿದ್ದರೆ ಮಾತ್ರ ಜನ ಬಂದು ನೋಡುತ್ತಾರೆ. ಮನಸುಗಳ ಮಾತು ಮಧುರ, ಕಳ್ಳರ ಸಂತೆ ಬಿಡುಗಡೆ ವೇಳೆಯಲ್ಲೂ ಹೀಗೇ ಆಗಿತ್ತು. ನಾಡಿದ್ದು, ಮೇ 18ಕ್ಕೆ ಕಿಲಾಡಿ ಕಿಟ್ಟಿ ಬಿಡುಗಡೆಯಾಗುತ್ತಿದೆ.
ಅದಕ್ಕೆ ಯಾರೋ ಬೇಕಂತಲೇ ನನ್ನ ಹೆಸರು ಕೆಡಿಸಲು, ನನ್ನ ವೃತ್ತಿಜೀವನ ಹಾಳುಮಾಡಲು ಈ ರೀತಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಕನ್ನಡದ ಹುಡುಗಿಯಾಗಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸುತ್ತಿರುವ ನಾನು ಕೊನೇಪಕ್ಷ ಇಲ್ಲಿ ಬೆಳೆಯಬಾರದೆಂದು ಈ ರೀತಿ ಸುದ್ದಿ ಹಬ್ಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ" ಎಂದು ಸುವರ್ಣ ವಾಹಿನಿಯ ಸಂದರ್ಶನದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ನಟಿ ಹರಿಪ್ರಿಯಾ. (ಒನ್ ಇಂಡಿಯಾ ಕನ್ನಡ)