twitter
    For Quick Alerts
    ALLOW NOTIFICATIONS  
    For Daily Alerts

    'ಕೋಟ್ಯಧಿಪತಿ'ಯಲ್ಲಿ ಪುಟ್ಟಗೌರಿ ಮಹೇಶ ಮಾಡಿದ ತಪ್ಪನ್ನ ಜಯಶ್ರೀ ಮಾಡಲಿಲ್ಲ

    By Bharath Kumar
    |

    Recommended Video

    Kannadada Kotyadipathi Season 3 : ಒಳ್ಳೆ ಹಣ ಗೆದ್ದ ಜಯಶ್ರೀ..! | Filmibeat Kannada

    'ಕನ್ನಡದ ಕೋಟ್ಯಧಿಪತಿ'ಯಲ್ಲಿ ಭಾಗವಹಿಸಿದ್ದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟ ರಕ್ಷಿತ್ (ಪುಟ್ಟಗೌರಿ ಮಹೇಶ) ಮಾಡಿಕೊಂಡ ಒಂದು ತಪ್ಪಿನಿಂದ ದೊಡ್ಡ ಮೊತ್ತವನ್ನ ಕಳೆದುಕೊಳ್ಳಬೇಕಾಯಿತು. ಅದಾದ ಬಳಿಕ ಹಾಟ್ ಸೀಟ್ ನಲ್ಲಿ ಕುಳಿತುಕೊಂಡ ಕಿರುತೆರೆ ನಟಿ ಜಯಶ್ರೀಗೂ ಅದೇ ಸಂದರ್ಭ ಎದುರಾಗಿತ್ತು.

    ಆ ವೇಳೆ ಪುಟ್ಟಗೌರಿ ಮಹೇಶ ಮಾಡಿದ ಎಡವಟ್ಟು ಜಯಶ್ರೀ ಅವರು ಮಾಡ್ತಾರೆ ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಆದ್ರೆ, ಆ ತಪ್ಪನ್ನ ಜಯಶ್ರೀ ಮಾಡಲಿಲ್ಲ. ಅದಕ್ಕೆ ಆಕೆ ಗೆದ್ದು ಪೂರ್ತಿ ಹಣವನ್ನ ತೆಗೆದುಕೊಂಡು ಹೋದರು.

    'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ

    'ಕನ್ನಡದ ಕೋಟ್ಯಧಿಪತಿ' ಆಟದಲ್ಲಿ ಬುದ್ದಿವಂತಿಕೆ ಇದ್ರೆ ಮಾತ್ರ ಆಗಲ್ಲ, ಅದರ ಜೊತೆಗೆ ಆ ಬುದ್ದಿವಂತಿಕೆಯನ್ನ ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಹೊಂದಿರಬೇಕು ಎಂಬುದನ್ನ ಜಯಶ್ರೀ ತೋರಿಸಿಕೊಟ್ಟರು. ಅಷ್ಟಕ್ಕೂ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಕ್ಷಿತ್ ಮಾಡಿದ ಎಡವಟ್ಟೇನು.? ನಟಿ ಜಯಶ್ರೀ ಗಳಿಸಿದ ಮೊತ್ತವೆಷ್ಟು.? ಹೇಗಿತ್ತು ಜಯಶ್ರೀ ಅವರ ಆಟ.? ಎಂದು ತಿಳಿದುಕೊಳ್ಳಲು ಮುಂದೆ ಓದಿ....

    9 ಪ್ರಶ್ನೆಗೂ ಉತ್ತರಿಸಿದ ಜಯಶ್ರೀ

    9 ಪ್ರಶ್ನೆಗೂ ಉತ್ತರಿಸಿದ ಜಯಶ್ರೀ

    'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿ ರಕ್ಷಿತ್ ಅವರಂತೆ ಜಯಶ್ರೀ ಅವರು ಕೂಡ ಮೊದಲ ಒಂಭತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದರು. ಆದ್ರೆ, ಅವರಂತೆ ಹತ್ತನೇ ಪ್ರಶ್ನೆಯಲ್ಲಿ ಎಡವಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ಚಾಣಕ್ಷತನದಿಂದ ಯೋಚಿಸಿ ಆಟವನ್ನ ಕ್ವಿಟ್ ಮಾಡಿಕೊಂಡರು.

    ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್

    ಇವರಿಗೂ ಕೈ ಕೊಡ್ತು 10ನೇ ಪ್ರಶ್ನೆ

    ಇವರಿಗೂ ಕೈ ಕೊಡ್ತು 10ನೇ ಪ್ರಶ್ನೆ

    ಮೊದಲ ಒಂಭತ್ತು ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿದ್ದ ಜಯಶ್ರೀ ಅವರಿಗೆ ಹತ್ತನೇ ಪ್ರಶ್ನೆ ಕಷ್ಟವಾಯಿತು. ಉತ್ತರ ಏನು ಎಂಬುದು ಗೊತ್ತಾಗಲಿಲ್ಲ. ಆಟ ಮುಂದುವರೆಸುವುದಾ ಅಥವಾ ಕ್ವಿಟ್ ಮಾಡೋದಾ ಎಂಬ ಯೋಚನೆ ಉಂಟಾಯಿತು.

    ಬುದ್ದಿವಂತಿಕೆಯಿಂದ ಕ್ವಿಟ್ ಮಾಡಿದ ನಟಿ

    ಬುದ್ದಿವಂತಿಕೆಯಿಂದ ಕ್ವಿಟ್ ಮಾಡಿದ ನಟಿ

    ಒಂದು ವೇಳೆ ಹತ್ತನೇ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸರಿಯಾದರೇ ಓಕೆ. ಬಟ್, ಅದು ತಪ್ಪಾದರೇ ಗೆದ್ದ ಹಣವನ್ನೆಲ್ಲಾ ಕಳೆದುಕೊಂಡು ಖಾಲಿ ಹತ್ತು ಸಾವಿರ ರೂಪಾಯಿಗೆ ಜಾರುತ್ತಿದ್ದರು. ಅದನ್ನ ಗಮದಲ್ಲಿಟ್ಟುಕೊಂಡಿದ್ದ ಜಯಶ್ರೀ, ರಕ್ಷಿತ್ ಮಾಡಿದ ತಪ್ಪನ್ನ ಮಾಡಲಿಲ್ಲ. ಬುದ್ದಿವಂತಿಕೆಯಿಂದ ಆಟವನ್ನ ಕ್ವಿಟ್ ಮಾಡಿ ಗೆದ್ದ ಹಣವನ್ನ ತೆಗೆದುಕೊಂಡು ಹೋದರು.

    'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?

    ಜಯಶ್ರೀ ಆಟ ಮುಗಿಸಿದ ಆ ಪ್ರಶ್ನೆ ಯಾವುದು.?

    ಜಯಶ್ರೀ ಆಟ ಮುಗಿಸಿದ ಆ ಪ್ರಶ್ನೆ ಯಾವುದು.?

    ಹಿಂದೂ ಪುರಾಣದ ಪ್ರಕಾರ, ತ್ರಿಕೂಟ ಪರ್ವತದ ಮೇಲೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ನಗರದ ಹೆಸರೇನು.?

    A ಲಂಕಾ

    B ದ್ವಾರಕ

    C ಅಮರಾವತಿ

    D ಅಯೋಧ್ಯ

    'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

    ಜಯಶ್ರೀ ಗಳಿಸಿದ್ದೆಷ್ಟು.?

    ಜಯಶ್ರೀ ಗಳಿಸಿದ್ದೆಷ್ಟು.?

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಶ್ರೀ' ಧಾರಾವಾಹಿಯಲ್ಲಿ ಶ್ರೀಗೆ ತಾಯಿಯ ಪಾತ್ರ ಮಾಡುತ್ತಿರುವುದು ಇದೇ ಜಯಶ್ರೀ. ಇವರು ಕನ್ನಡದ ಕೋಟ್ಯಧಿಪತಿಯಲ್ಲಿ ಗಳಿಸಿದ್ದು 1.60 ಲಕ್ಷ. ಹತ್ತನೇ ಪ್ರಶ್ನೆ ಉತ್ತರ ಆಯ್ಕೆ A ಲಂಕಾ.

    English summary
    'Kannadada Kotyadhipathi season 3' contestant Shree serial actress jayashree has won 1 lakh 60 thousand rupees.
    Thursday, August 16, 2018, 16:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X