Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋಟ್ಯಧಿಪತಿ'ಯಲ್ಲಿ ಪುಟ್ಟಗೌರಿ ಮಹೇಶ ಮಾಡಿದ ತಪ್ಪನ್ನ ಜಯಶ್ರೀ ಮಾಡಲಿಲ್ಲ
Recommended Video
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಭಾಗವಹಿಸಿದ್ದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟ ರಕ್ಷಿತ್ (ಪುಟ್ಟಗೌರಿ ಮಹೇಶ) ಮಾಡಿಕೊಂಡ ಒಂದು ತಪ್ಪಿನಿಂದ ದೊಡ್ಡ ಮೊತ್ತವನ್ನ ಕಳೆದುಕೊಳ್ಳಬೇಕಾಯಿತು. ಅದಾದ ಬಳಿಕ ಹಾಟ್ ಸೀಟ್ ನಲ್ಲಿ ಕುಳಿತುಕೊಂಡ ಕಿರುತೆರೆ ನಟಿ ಜಯಶ್ರೀಗೂ ಅದೇ ಸಂದರ್ಭ ಎದುರಾಗಿತ್ತು.
ಆ ವೇಳೆ ಪುಟ್ಟಗೌರಿ ಮಹೇಶ ಮಾಡಿದ ಎಡವಟ್ಟು ಜಯಶ್ರೀ ಅವರು ಮಾಡ್ತಾರೆ ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಆದ್ರೆ, ಆ ತಪ್ಪನ್ನ ಜಯಶ್ರೀ ಮಾಡಲಿಲ್ಲ. ಅದಕ್ಕೆ ಆಕೆ ಗೆದ್ದು ಪೂರ್ತಿ ಹಣವನ್ನ ತೆಗೆದುಕೊಂಡು ಹೋದರು.
'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ
'ಕನ್ನಡದ ಕೋಟ್ಯಧಿಪತಿ' ಆಟದಲ್ಲಿ ಬುದ್ದಿವಂತಿಕೆ ಇದ್ರೆ ಮಾತ್ರ ಆಗಲ್ಲ, ಅದರ ಜೊತೆಗೆ ಆ ಬುದ್ದಿವಂತಿಕೆಯನ್ನ ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಹೊಂದಿರಬೇಕು ಎಂಬುದನ್ನ ಜಯಶ್ರೀ ತೋರಿಸಿಕೊಟ್ಟರು. ಅಷ್ಟಕ್ಕೂ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಕ್ಷಿತ್ ಮಾಡಿದ ಎಡವಟ್ಟೇನು.? ನಟಿ ಜಯಶ್ರೀ ಗಳಿಸಿದ ಮೊತ್ತವೆಷ್ಟು.? ಹೇಗಿತ್ತು ಜಯಶ್ರೀ ಅವರ ಆಟ.? ಎಂದು ತಿಳಿದುಕೊಳ್ಳಲು ಮುಂದೆ ಓದಿ....
9 ಪ್ರಶ್ನೆಗೂ ಉತ್ತರಿಸಿದ ಜಯಶ್ರೀ
'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿ ರಕ್ಷಿತ್ ಅವರಂತೆ ಜಯಶ್ರೀ ಅವರು ಕೂಡ ಮೊದಲ ಒಂಭತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದರು. ಆದ್ರೆ, ಅವರಂತೆ ಹತ್ತನೇ ಪ್ರಶ್ನೆಯಲ್ಲಿ ಎಡವಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ಚಾಣಕ್ಷತನದಿಂದ ಯೋಚಿಸಿ ಆಟವನ್ನ ಕ್ವಿಟ್ ಮಾಡಿಕೊಂಡರು.
ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್
ಇವರಿಗೂ ಕೈ ಕೊಡ್ತು 10ನೇ ಪ್ರಶ್ನೆ
ಮೊದಲ ಒಂಭತ್ತು ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿದ್ದ ಜಯಶ್ರೀ ಅವರಿಗೆ ಹತ್ತನೇ ಪ್ರಶ್ನೆ ಕಷ್ಟವಾಯಿತು. ಉತ್ತರ ಏನು ಎಂಬುದು ಗೊತ್ತಾಗಲಿಲ್ಲ. ಆಟ ಮುಂದುವರೆಸುವುದಾ ಅಥವಾ ಕ್ವಿಟ್ ಮಾಡೋದಾ ಎಂಬ ಯೋಚನೆ ಉಂಟಾಯಿತು.
ಬುದ್ದಿವಂತಿಕೆಯಿಂದ ಕ್ವಿಟ್ ಮಾಡಿದ ನಟಿ
ಒಂದು ವೇಳೆ ಹತ್ತನೇ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸರಿಯಾದರೇ ಓಕೆ. ಬಟ್, ಅದು ತಪ್ಪಾದರೇ ಗೆದ್ದ ಹಣವನ್ನೆಲ್ಲಾ ಕಳೆದುಕೊಂಡು ಖಾಲಿ ಹತ್ತು ಸಾವಿರ ರೂಪಾಯಿಗೆ ಜಾರುತ್ತಿದ್ದರು. ಅದನ್ನ ಗಮದಲ್ಲಿಟ್ಟುಕೊಂಡಿದ್ದ ಜಯಶ್ರೀ, ರಕ್ಷಿತ್ ಮಾಡಿದ ತಪ್ಪನ್ನ ಮಾಡಲಿಲ್ಲ. ಬುದ್ದಿವಂತಿಕೆಯಿಂದ ಆಟವನ್ನ ಕ್ವಿಟ್ ಮಾಡಿ ಗೆದ್ದ ಹಣವನ್ನ ತೆಗೆದುಕೊಂಡು ಹೋದರು.
'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?
ಜಯಶ್ರೀ ಆಟ ಮುಗಿಸಿದ ಆ ಪ್ರಶ್ನೆ ಯಾವುದು.?
ಹಿಂದೂ ಪುರಾಣದ ಪ್ರಕಾರ, ತ್ರಿಕೂಟ ಪರ್ವತದ ಮೇಲೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ನಗರದ ಹೆಸರೇನು.?
A ಲಂಕಾ
B ದ್ವಾರಕ
C ಅಮರಾವತಿ
D ಅಯೋಧ್ಯ
'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!
ಜಯಶ್ರೀ ಗಳಿಸಿದ್ದೆಷ್ಟು.?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಶ್ರೀ' ಧಾರಾವಾಹಿಯಲ್ಲಿ ಶ್ರೀಗೆ ತಾಯಿಯ ಪಾತ್ರ ಮಾಡುತ್ತಿರುವುದು ಇದೇ ಜಯಶ್ರೀ. ಇವರು ಕನ್ನಡದ ಕೋಟ್ಯಧಿಪತಿಯಲ್ಲಿ ಗಳಿಸಿದ್ದು 1.60 ಲಕ್ಷ. ಹತ್ತನೇ ಪ್ರಶ್ನೆ ಉತ್ತರ ಆಯ್ಕೆ A ಲಂಕಾ.