Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯಲ್ಲಿ ಛಾಪು ಮೂಡಿಸುತ್ತಿರುವ ತೇಜಸ್ವಿನಿ ಗೌಡ, ಅಕ್ಕನ ಹಾದಿಯಲ್ಲಿಯೇ ತಂಗಿ
ಸಾಧಿಸುವಾಗ ಎಡರುತೊಡರುಗಳು ಇದ್ದಿದ್ದೇ. ಅದನ್ನು ಮೀರಿ ನಿಂತಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ತನ್ನ ಕಷ್ಟಗಳನ್ನೆಲ್ಲಾ ಮೀರಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ತೇಜಸ್ವಿನಿ ಗೌಡ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ನಾಗಿಣಿ 2 ನಲ್ಲಿ ದಿಗ್ವಿಜಯ್ ಮಗಳಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಕಿರುತೆರೆ, ಹಿರಿತೆರೆ ನಟಿ ಅನುಪಮಾ ಗೌಡ ಅವರ ಮುದ್ದಿನ ತಂಗಿಯೂ ಹೌದು. ಅಕ್ಕನಂತೆಯೇ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು, ನಟನಾ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದ ಈಕೆ ಇಂದು ತುಂಬಾ ಸಂತಸವಾಗಿದ್ದಾರೆ. ಅಕ್ಕನ ಹಾದಿಯಲ್ಲಿಯೇ ಹೆಜ್ಜೆ ಹಾಕಿರುವ ತೇಜಸ್ವಿನಿ ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ತೇಜಸ್ವಿನಿ ಅವರ ತಾಯಿಗೆ ಇದ್ದುದು ಒಂದೇ ಆಸೆ. ಮಕ್ಕಳಿಬ್ಬರು ಏನಾದರೂ ಸಾಧಿಸಬೇಕು, ಯಾವುದಾದರೂ ಕ್ಷೇತ್ರದಲ್ಲಿ ಹೆಸರು ಗಳಿಸಬೇಕು, ಬಹು ಎತ್ತರ ಬೆಳೆಯಬೇಕು ಎಂದೆಲ್ಲಾ ಕನಸು ಕಂಡಿದ್ದ ಅಮ್ಮನ ಕನಸನ್ನು ನನಸು ಮಾಡಿದ ಸಂತಸ ತೇಜಸ್ವಿನಿ ಅವರಿಗಿದೆ. ಅಮ್ಮನಿಗೂ ನಟನಾ ರಂಗದತ್ತ ಒಲವಿದ್ದ ಕಾರಣ ಮಕ್ಕಳು ಆ ಲೋಕದಲ್ಲಿ ಗುರುತಿಸಿಕೊಂಡರೆ ಚೆನ್ನ ಎಂದು ಬಯಸಿದ್ದರು. ಆ ಬಯಕೆ ಈಡೇರಿಸಿದ ತೇಜಸ್ವಿನಿ ಅಕ್ಕನಂತೆಯೇ ನಟನಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತೇಜಸ್ವಿನಿ ಮೊದಲ ಬಾರಿ ನಟಿಸಿದಾಗ ಕೇವಲ ಹದಿನಾಲ್ಕರ ಹರೆಯ. ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಕೇಳದೇ ನಿಮಗೀಗ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು ತೇಜಸ್ವಿನಿ. ಅವಕಾಶ ತಾನಾಗಿ ಬಂದಾಗ ಬೇಡ ಎನ್ನದ ಆಕೆ ನಟಿಸಿದರು. ಆದರೆ ಮುಂದೆ ಆ ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ತದ ನಂತರ ಶಿಕ್ಷಣದ ಕಡೆಗೆ ಗಮನಹರಿಸಿದ ತೇಜಸ್ವಿನಿ ಬಿ.ಕಾಂ ಪದವಿ ಮುಗಿಸಿದರು. ಪದವಿ ಮುಗಿದದ್ದೇ ತಡ, ಮನಸು ನಟನೆಯತ್ತ ವಾಲಿತು. ಬಣ್ಣದ ನಂಟಿನ ಸೆಳೆತ ಅಷ್ಟು ಸುಲಭವಾಗಿ ದೂರವಾಗುವುದಕ್ಕೆ ಬಿಡಲಿಲ್ಲ. ಆಡಿಷನ್ ಮೂಲಕ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.
ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಖಳನಾಯಕಿ ನಂದಿನಿಯಾಗಿ ಅಭಿನಯಿಸಿದ್ದ ತೇಜಸ್ವಿನಿ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿಯಾಗಿ ನಟಿಸಿದ್ದರು. ಮುಂದೆ ತಮಿಳು ಕಿರುತೆರೆಯಿಂದಲೂ ಅವಕಾಶ ಪಡೆದುಕೊಂಡ ತೇಜಸ್ವಿನಿ ಸುಬ್ರಹ್ಮಣ್ಯಪುರಂ ಎಂಬ ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಧಾರಾವಾಹಿ ಎನ್ನುವುದು ಒಂದು ರೀತಿಯ ಶಾಲೆ ಹೌದು. ಆ ಶಾಲೆಗೆ ಕಾಲಿಡುವ ತನಕವಷ್ಟೇ ನಾವು ನಾವಾಗಿರುತ್ತೇವೆ. ಆದರೆ ಆ ಶಾಲೆ ಪ್ರವೇಶಿಸಿದ ನಂತರ ಅದು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಚೆಂದುಳ್ಳಿ ಚೆಲುವೆ ತೇಜಸ್ವಿನಿ ಅವಕಾಶದಿಂದ ದೊರೆತರೆ ಹಿರಿತೆರೆಯಲ್ಲೂ ಮಿಂಚಲು ತಯಾರಾಗಿದ್ದಾರೆ.