Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂದೆಯ ವಿರುದ್ಧವೇ ಹತ್ಯೆ ಯತ್ನದ ದೂರು ದಾಖಲಿಸಿದ ಧಾರಾವಾಹಿ ನಟಿ
ನನ್ನ ತಂದೆ ನನ್ನನ್ನು ಕೊಲ್ಲುವ ಯತ್ನ ಮಾಡಿದ್ದಾರೆ ಎಂದು ಹಿಂದಿ ಧಾರಾವಾಹಿಯ ನಟಿ ತೃಪ್ತಿ ಶಂಖಧರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿರುವ ನಟಿ ತೃಪ್ತಿ ಶಂಖಧರ್, 'ನನ್ನ ತಂದೆ ನನಗೆ ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಹಾಗೂ ನನ್ನನ್ನು ಕೊಲ್ಲುವ ಯತ್ನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
ತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡ ಖ್ಯಾತ ಗಾಯಕ ಬಾದ್ಶಾ
ಪ್ರಸ್ತುತ ಬರೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನಟಿ, ಪೊಲೀಸರಿಂದ ಭದ್ರತೆಯನ್ನು ಸಹ ಕೇಳಿದ್ದಾರೆ. ಅಂತೆಯೇ ನಟಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಟಿ ಮಾತ್ರವಲ್ಲದೆ ಆಕೆಯ ತಾಯಿ, ತಂಗಿ, ಸಹೋದರ ಎಲ್ಲರೂ ಸಹ ಆರೋಪ ಮಾಡಿದ್ದು, ಎಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದೇವೆ, ನಮ್ಮ ಜೀವ ಅಪಾಯದಲ್ಲಿರುವ ಕಾರಣ ಹೀಗೆ ಮಾಡಿದ್ದೇವೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾ ನಂಟು: ಡ್ರಗ್ ಮಾರಾಟದಲ್ಲಿ ರಿಯಾ ಭಾಗಿ?
ಕುಂಕುಮ ಭಾಗ್ಯ ಧಾರಾವಾಹಿ ನಟಿ
ಝೀ ಚಾನೆಲ್ನಲ್ಲಿ ಪ್ರಸಾರವಾಗುವ ಹಿಂದಿ ಧಾರಾವಾಹಿ ಕುಂಕುಮ ಭಾಗ್ಯದಲ್ಲಿ ನಟಿ ತೃಪ್ತಿ ಶಂಖಧರ್ ನಟಿಸುತ್ತಿದ್ದಾರೆ. ಅವರು ಒಂದು ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ಆಕೆ ತಂದೆಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
'ಕತ್ತಿಯಿಂದ ಕತ್ತರಿಸುವ ಯತ್ನ ಮಾಡಿದ್ದಾರೆ'
ತಂದೆಯ ಕುರಿತು ಐದು ವಿಡಿಯೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ನಟಿ ತೃಪ್ತಿ, 'ನನ್ನ ತಂದೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಕತ್ತಿಯಿಂದ ಕತ್ತರಿಸಲು ಸಹ ಯತ್ನಿಸಿದರು' ಎಂದಿರುವ ನಟಿ ಕೈ ಮೇಲೆ ಆಗಿರುವ ಗಾಯದ ಗುರುತು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ.
ಮದುವೆ ಆಗುವಂತೆ ಪೀಡಿಸುತ್ತಿದ್ದಾರೆ: ತೃಪ್ತಿ ಶಂಖಧರ್
ಯಾವುದೋ ಹುಡುಗನೊಂದಿಗೆ ಮದುವೆ ಆಗುವಂತೆ ನನ್ನನ್ನು ಪೀಡಿಸುತ್ತಿದ್ದಾರೆ. ನನಗಿನ್ನೂ ಹತ್ತೊಂಬತ್ತು ವರ್ಷ ವಯಸ್ಸು. ನನಗೆ ಆ ವ್ಯಕ್ತಿಯೊಂದಿಗೆ ಮದುವೆ ಆಗಲು ಇಷ್ಟವಿಲ್ಲ. ಆದರೆ ಅಪ್ಪ ನನ್ನನ್ನು ಬಿಡುತ್ತಿಲ್ಲ. ನನಗೆ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ ನಟಿ.
ಹಣ ವಾಪಸ್ ಕೇಳುತ್ತಿದ್ದಾರೆ: ತೃಪ್ತಿ
ನನ್ನನ್ನು ನಟಿ ಆಗುವಂತೆ ಮುಂಬೈ ಗೆ ಕಳಿಸಿದ್ದರು. ನನ್ನ ಒಂದು ಸಿನಮಾ ಈಗಷ್ಟೆ ಬಿಡುಗಡೆ ಆಗಿದೆ. ನಟಿಯಾಗಲು ಖರ್ಚು ಮಾಡಿದ್ದ ಹಣವನ್ನೆಲ್ಲಾ ವಾಪಸ್ ಕೊಡು ಎಂದು ನನ್ನನ್ನು ಪೀಡಿಸುತ್ತಿದ್ದಾರೆ. ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿಲ್ಲ ಎಂದಿದ್ದಾರೆ ನಟಿ.
ನಟಿಯ ತಾಯಿ-ಸಹೋದರಿರಿಂದಲೂ ಆರೋಪ
ನಟಿಯ ತಾಯಿಯೂ ಸಹ ವಿಡಿಯೋದಲ್ಲಿ ಮಾತನಾಡಿದ್ದು, ಆತ ಬಹಳ ಅನುಮಾನದ ಪ್ರಾಣಿ. ಮನೆಯಲ್ಲಿ ಎಲ್ಲರಿಗೂ ಕಷ್ಟಗಳನ್ನು ಕೊಡುತ್ತಿದ್ದಾರೆ. ಮೊದಲಿನಿಂದಲೂ ಆತ ಹೀಗೆಯೇ ಇದ್ದ. ಆತನದ್ದು ಹಿಂಸಾತ್ಮಕ ಪ್ರವೃತ್ತಿ ಎಂದಿದ್ದಾರೆ. ನಟಿಯೂ ತನ್ನ ತಾಯಿ, ತಂಗಿ, ತಮ್ಮನನ್ನು ಕರೆದುಕೊಂಡು ಮನೆ ಬಿಟ್ಟು ಹೊರಗೆ ಹೋಗಿಬಿಟ್ಟಿದ್ದಾರೆ. ತಾವು ಸ್ವಿಚ್ಛೆಯಿಂದಲೇ ಮನೆ ಬಿಟ್ಟು ಬಂದಿದ್ದೇವೆ ಎಂದು ವಿಡಿಯೋ ಮಾಡಿ ಹೇಳಿದ್ದಾರೆ.