Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ
Recommended Video
'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ಆದಮ್ ಪಾಶಾ ಹೊರ ನಡೆದಿದ್ದಾರೆ. ಕಾರಣ, ಆದಮ್ ಪಾಶಾಗೆ ಅವಮಾನ ಆಗುವ ರೀತಿಯಲ್ಲಿ ವೇದಿಕೆ ಮೇಲೆ ಅಕುಲ್ ಬಾಲಾಜಿ ಮಾತನ್ನಾಡಿದ್ದಾರೆ. ನಿರ್ದೇಶಕಿ ಶ್ರದ್ಧಾ ಧಮ್ಕಿ ಹಾಕಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆ ಬ್ರೇಕ್ ಆಯ್ತು.
''ಅಕುಲ್ ಬಾಲಾಜಿ ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಕೆಟ್ಟದಾಗಿ ನನ್ನ ಬಗ್ಗೆ ಜೋಕ್ ಮಾಡಿದ್ದಾರೆ. ಇನ್ನೂ ''ಜನರಿಂದ ಜಾಸ್ತಿ ವೋಟ್ಸ್ ಬಂದಿದ್ದರೂ, ನಿಮ್ಮನ್ನ ಎಲಿಮಿನೇಟ್ ಮಾಡಬಹುದು'' ಎಂದು ನಿರ್ದೇಶಕಿ ಶ್ರದ್ಧಾ ಹೇಳಿದ್ದಾರೆ. ಹೀಗಾಗಿ, ಆ ಶೋನಲ್ಲಿ ನಾನು ಮುಂದುವರೆಯುವುದಿಲ್ಲ. ಇಬ್ಬರ ಮೇಲೆಯೂ ಕಂಪ್ಲೇಂಟ್ ಕೊಡುವೆ'' ಎಂದು ಬೆಳಗ್ಗೆ ಆದಮ್ ಪಾಶಾ ಹೇಳಿದ್ದರು.
ಆದಮ್ ಪಾಶಾ ಮಾಡಿರುವ ಈ ಆರೋಪದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಅಕುಲ್ ಬಾಲಾಜಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಕುಲ್ ಏನು ಹೇಳಿದ್ದಾರೆ ಅಂತ ನೀವೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....
ಧಕ್ಕೆ ತರುವ ಹಾಗೆ ಮಾತನಾಡಿಲ್ಲ
''ತಕಧಿಮಿತ' ಎಂಟರ್ ಟೈನ್ಮೆಂಟ್ ಶೋ. ಒಬ್ಬರಿಗೆ ಧಕ್ಕೆ ತರುವ ಹಾಗೆ ನಾವು ಯಾವತ್ತೂ ಮಾತನಾಡುವುದಿಲ್ಲ. ಬಹುಶಃ ಆದಮ್ ಈ ವಾರ ಎಲಿಮಿನೇಟ್ ಆಗುತ್ತಿದ್ದ. ಯಾಕಂದ್ರೆ, ಪರ್ಫಾಮೆನ್ಸ್ ಚೆನ್ನಾಗಿರಲಿಲ್ಲ ಅಂತ ತೀರ್ಪುಗಾರರು ಹೇಳಿದ್ದರು'' ಅಂತಾರೆ ಅಕುಲ್ ಬಾಲಾಜಿ.
ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!
ತಮಾಷೆಯಿಂದ ರೇಗಿಸ್ತೀನಿ ಅಷ್ಟೇ.!
''ಶೋನಲ್ಲಿ ಪ್ರಾಬ್ಲಂ ಆಗಿದ್ದರೆ ಆದಮ್ ಪಾಶಾ ವಾಹಿನಿಯವರ ಜೊತೆಗೆ ಮಾತನಾಡಬೇಕು. ನಾನು ನಿರೂಪಕ ಅಷ್ಟೇ. ತಮಾಷೆಯಿಂದ ರೇಗಿಸ್ತೀವಿ ಅನ್ನೋದು ಬಿಟ್ಟರೆ ಧಕ್ಕೆ ತರುವ ಹಾಗೆ ಯಾವತ್ತೂ ಮಾಡಿಲ್ಲ'' - ಅಕುಲ್ ಬಾಲಾಜಿ.
'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ
ಆದಮ್ ಪಾರ್ಟ್ನರ್ ಕಂಪ್ಲೇಂಟ್
''ಚೆನ್ನಾಗಿ ಪರ್ಫಾಮ್ ಮಾಡಿಲ್ಲ ಅಂದ್ರೆ ಗದರಿಸುತ್ತಾರೆ ಅಂತ ಆದಮ್ ಪಾರ್ಟ್ನರ್ ಕಂಪ್ಲೇಂಟ್ ಮಾಡಿದ್ದರು. ನಾನು ಆಗ ಹೀಗೆಲ್ಲ ಮಾಡಬೇಡಿ, ಕೋ-ಕಂಟೆಸ್ಟೆಂಟ್ ನ ಚೇಂಜ್ ಮಾಡುವ ಅಧಿಕಾರ ಯಾರಿಗೂ ಇಲ್ಲ ಅಂತ ಹೇಳಿದ್ದೆ'' - ಅಕುಲ್ ಬಾಲಾಜಿ.
ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!
ಸತ್ಯ ಹೊರಗೆ ಬರುತ್ತದೆ
''ನನಗೆ ಆದಮ್ ಪಾಶಾ ಬಗ್ಗೆ ಗೊತ್ತಿರಲಿಲ್ಲ. ಸ್ಟೇಜ್ ಮೇಲೆ ಬಂದಾಗಲೇ ಗೊತ್ತಾಗಿದ್ದು. ಕಂಪ್ಲೇಂಟ್ ಕೊಡುವ ಹಾಗಿದ್ದರೆ ಕೊಡಲಿ, ಸತ್ಯ ಹೊರಗೆ ಬರುತ್ತದೆ. ಆಂಕರ್ ಆಗಿ ನನ್ನ ಕೆಲಸ ನಾನು ವೇದಿಕೆ ಮೇಲೆ ಮಾಡಿದ್ದೇನೆ. ಈ ಬಗ್ಗೆ ವಾಹಿನಿಯವರು ನಿರ್ಧಾರ ಮಾಡಲಿ'' - ಅಕುಲ್ ಬಾಲಾಜಿ.