Don't Miss!
- News ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ
'ಬಿಗ್ ಬಾಸ್' ಮನೆಯೊಳಗೆ ''ನಿಮ್ಮನ್ನ ಏನಂತ ಕರೆಯಬೇಕು?'' ಎಂದು ಯಾರಾದರೂ ಕೇಳಿದಾಗ 'ಡ್ರಾಕುಲಾ' ಅಂತ ಕರೆಯಿರಿ ಎಂಬ ಮಾತು ದಯಾಳ್ ಪದ್ಮನಾಭನ್ ಬಾಯಿಂದ ಬರುತ್ತದೆ. ಇದಕ್ಕೆ ಕಾರಣವೂ ಇದೆ. ಸೂಪರ್ ಹಿಟ್ 'ಗಾಳಿಪಟ' ಚಿತ್ರದಲ್ಲಿ ದಯಾಳ್ ಪದ್ಮನಾಭನ್ ನಿರ್ವಹಿಸಿದ ಪಾತ್ರದ ಹೆಸರೇ 'ಡ್ರಾಕುಲಾ'.
ಹೌದು... ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದಯಾಳ್ ಪದ್ಮನಾಭನ್ ಇದೀಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ದಯಾಳ್ ಪದ್ಮನಾಭನ್ ರವರ ಕಿರು ಪರಿಚಯ ಇಲ್ಲಿದೆ, ನಿಮಗಾಗಿ....
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ದಯಾಳ್
ಬಡ ಕುಟುಂಬದಲ್ಲಿ ತಮಿಳುನಾಡಲ್ಲಿ ಹುಟ್ಟಿ ಬೆಳೆದ ದಯಾಳ್ ಇಂದು ಸೆಲೆಬ್ರಿಟಿ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.
ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.?
ವಿಜ್ಞಾನಿ ಆಗಿದ್ದವರು
ಬಿ.ಇ ಪದವಿ ಮುಗಿಸಿದ ಬಳಿಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ದಯಾಳ್ ಪದ್ಮನಾಭನ್ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಹಲವಾರು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ
2000 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಯಾಳ್ ಪದ್ಮನಾಭನ್, 'ಓಂ ಗಣೇಶ್', 'ಹುಡುಗಿಗಾಗಿ', 'H20', 'ಗಟ್ಟಿಮೇಳ' ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?
13 ಚಿತ್ರಗಳಿಗೆ ನಿರ್ದೇಶಕ
'ಓಕೆ ಸಾರ್ ಓಕೆ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ದಯಾಳ್ ಪದ್ಮನಾಭನ್, 'ಬಾ ಬಾರೋ ರಸಿಕ', 'ಸರ್ಕಸ್', 'ಯೋಗರಾಜ್ ಬಟ್', 'ಘರ್ಷಣೆ', 'ಆಕ್ಟರ್' ಸೇರಿದಂತೆ 13 ಚಿತ್ರಗಳಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ಸತ್ಯ ಹರಿಶ್ಚಂದ್ರ' ಸಿನಿಮಾ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.
ಆರು ಚಿತ್ರಗಳ ನಿರ್ಮಾಪಕ
'ಸರ್ಕಸ್', 'ಹಗ್ಗದ ಕೊನೆ', 'ಆಕ್ಟರ್' ಸೇರಿದಂತೆ ಒಟ್ಟು 6 ಚಿತ್ರಗಳಿಗೆ ನಿರ್ಮಾಪಕರಾಗಿ ದಯಾಳ್ ಪದ್ಮನಾಭನ್ ಬಂಡವಾಳ ಹಾಕಿದ್ದಾರೆ.
ಖ್ಯಾತಿ ತಂದುಕೊಟ್ಟ 'ಗಾಳಿಪಟ' ಡ್ರಾಕುಲಾ
ನಟನಾಗಬೇಕು ಎಂದು ಸರ್ಕಾರಿ ನೌಕರಿ ಬಿಟ್ಟು ಚಿತ್ರರಂಗಕ್ಕೆ ಬಂದ ದಯಾಳ್ ಆಗಿದ್ದು ಮಾತ್ರ ನಿರ್ದೇಶಕ ಮತ್ತು ನಿರ್ಮಾಪಕ. 'ಗಾಳಿಪಟ' ಚಿತ್ರದ 'ಡ್ರಾಕುಲಾ' ಪಾತ್ರ ದಯಾಳ್ ಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದ್ದು ಸುಳ್ಳಲ್ಲ.
'ಬಿಗ್ ಬಾಸ್' ಮನೆಯಲ್ಲಿ ದಯಾಳ್ ಜರ್ನಿ ಹೇಗಿರುತ್ತೋ.?
99 ಕೆ.ಜಿ ತೂಗುವ ದಯಾಳ್, 'ಒಂದೊಳ್ಳೆ ಅನುಭವ'ಕ್ಕಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ದಯಾಳ್ ಜರ್ನಿ ಹೇಗಿರುತ್ತೆ ಅಂತ ನೋಡೋಣ.