Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?
Recommended Video
ಪ್ರತಿದಿನ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಟಿಕೆಟ್ ಕೊಡುವ ಕಂಡಕ್ಟರ್ ಆನಂದ ಮಾಲಗತ್ತಿ ಅವರಿಗೆ 'ಬಿಗ್ ಬಾಸ್' ಮನೆಯೊಳಗೆ ಹೋಗುವ ಟಿಕೆಟ್ ಈ ಬಾರಿ ಸಿಕ್ಕಿದೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 'ಕಾಮನ್ ಮ್ಯಾನ್' ಸ್ಪರ್ಧಿಗಳ ಪೈಕಿ ಆನಂದ ಮಾಲಗತ್ತಿ ಕೂಡ ಒಬ್ಬರು. 'ಒಳ್ಳೆ ಹುಡುಗ' ಪ್ರಥಮ್ ನಂತೆ ಡೈಲಾಗ್ ಹೊಡೆಯುವ ಆನಂದ ಮಾಲಗತ್ತಿ 'ಸಾಧನೆ' ಮಾಡಲು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ.
ಪ್ರಥಮ್, ಚಂದನ್ ಶೆಟ್ಟಿ ಹಾಗೂ ದಿವಾಕರ್ ಕಂಡ್ರೆ ಆನಂದ ಮಾಲಗತ್ತಿ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಅಂತೆ. ಅವರುಗಳಂತೆಯೇ 'ಬಿಗ್ ಬಾಸ್' ಮನೆಯಲ್ಲಿ ಆಟ ಆಡ್ತಾರಾ ಆನಂದ ಮಾಲಗತ್ತಿ.? ಗೊತ್ತಿಲ್ಲ. ಸದ್ಯಕ್ಕೆ ಅವರ ಬಗ್ಗೆ ಕಿರುಪರಿಚಯ ಇಲ್ಲಿದೆ, ಓದಿರಿ...
ಯಾದಗಿರಿಯ ಯುವಕ ಆನಂದ
ಆನಂದ ಮಾಲಗತ್ತಿ ಮೂಲತಃ ಯಾದಗಿರಿ ಜಿಲ್ಲೆಯ ಕಲ್ಲದೇವನಹಳ್ಳಿ ಗ್ರಾಮದವರು. ಮೂರು ವರ್ಷ ಇರುವಾಗಲೇ, ತಾಯಿಯನ್ನ ಕಳೆದುಕೊಂಡ ಆನಂದ ಮಾಲಗತ್ತಿ ಕಷ್ಟಪಟ್ಟು ಜೀವನ ಸಾಗಿಸಿದ್ದಾರೆ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.!
ಬಸ್ ಕಂಡಕ್ಟರ್
25 ವರ್ಷದ ಆನಂದ ಮಾಲಗತ್ತಿ ಆರು ವರ್ಷಗಳಿಂದ ಬಿ.ಎಂ.ಟಿ.ಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದ್ಯೋಗಿಯನ್ನೇ ಪ್ರೀತಿಸಿ ಮದುವೆ ಆಗಿರುವ ಆನಂದ ಮಾಲಗತ್ತಿ ಅವರಿಗೆ ಮುದ್ದಾದ ಮಗು ಇದೆ.
'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.!
'ಬಿಗ್ ಬಾಸ್' ವೀಕ್ಷಕ
'ಬಿಗ್ ಬಾಸ್ ಕನ್ನಡ-3', 'ಬಿಗ್ ಬಾಸ್ ಕನ್ನಡ-4', 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಗಳನ್ನ ಮಿಸ್ ಮಾಡದೆ ನೋಡಿದ್ದಾರಂತೆ ಆನಂದ ಮಾಲಗತ್ತಿ. ಪ್ರಥಮ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಅಂದ್ರೆ ಇವರಿಗೆ ಅಚ್ಚುಮೆಚ್ಚು.
'ಬಿಗ್ ಬಾಸ್ ಕನ್ನಡ-6': ಈ ಬಾರಿ 'ಕಿಚ್ಚ'ನ್ ಟೈಮ್ ಇರಲ್ಲ ಸ್ವಾಮಿ.!
'ಬಿಗ್ ಬಾಸ್' ಗೆಲ್ತಾರಾ ಆನಂದ ಮಾಲಗತ್ತಿ.?
ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು 'ಬಿಗ್ ಬಾಸ್' ಗೆಲ್ಲಬೇಕು ಅನ್ನೋದು ಆನಂದ ಮಾಲಗತ್ತಿ ಬಯಕೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಇವರು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. ಆನಂದ್ ಮಾಲಗತ್ತಿ ಅವರನ್ನ ಗೆಲ್ಲಿಸುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.