Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕ ವಯಸ್ಸಿನಲ್ಲಿ ಮದುವೆ, ಸಾಲು, ಸಾಲು ಕಷ್ಟಗಳು : ಜಯಶ್ರೀ ಮನದಾಳ
'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಲ್ಲ ವರ್ಗದಿಂದ ಸ್ಪರ್ಧಿಗಳು ಬರುತ್ತಾರೆ. ಧಾರಾವಾಹಿ ಕ್ಷೇತ್ರದಿಂದ ಪ್ರತಿ ಬಾರಿಯೂ ಯಾರಾದರೂ ಸ್ಪರ್ಧಿಗಳು ಇದ್ದೇ ಇರುತ್ತಾರೆ. ಅದೇ ರೀತಿ ಈ ಬಾರಿ ಇಬ್ಬರು ಸೀರಿಯಲ್ ನಟಿಯರು ಬಿಗ್ ಬಾಸ್ ಗೆ ಹೋಗಿದ್ದಾರೆ.
ಈ ಬಾರಿ ಇಬ್ಬರು ಸೀರಿಯಲ್ ಸ್ಪರ್ಧಿಗಳಲ್ಲಿ ಒಬ್ಬರು ಕವಿತಾ ಗೌಡ ಆದ್ರೆ, ಇನ್ನೊಬ್ಬರು ಜಯಶ್ರೀ. ಕನ್ನಡದ ಪ್ರತಿಭಾವಂತ ಕಿರುತೆರೆ ನಟಿಯಲ್ಲಿ ಜಯಶ್ರೀ ಕೂಡ ಪ್ರಮುಖರು. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿರುವ ಇವರು ಈಗ ಬಿಗ್ ಬಾಸ್ ಆಟ ಆಡಲು ಬಂದಿದ್ದಾರೆ.
ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ
ಅಂದಹಾಗೆ, ಸದ್ಯ ಜಯಶ್ರೀ ಅವರೇ ತಾವು 'ಬಿಗ್ ಬಾಸ್' ಗೆ ಬಂದ ಕಾರಣ ಹಾಗೂ ಅವರ ಬಣ್ಣದ ಬದುಕಿನ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...
8 ಕ್ಲಾಸ್ ನಲ್ಲಿ ನಟನೆ ಶುರು ಮಾಡಿದರು
ಕೇವಲ 8 ಕ್ಲಾಸ್ ಓದುವಾಗಲೇ ಜಯಶ್ರೀ ನಟನೆ ಮಾಡಲು ಶುರು ಮಾಡಿದರು. ಮೊದಲು ನಿರ್ದೇಶಕ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. 'ಮಾಯಾಮೃಗ' ಧಾರಾವಾಹಿಯ ಮೂಲಕ ತಮ್ಮ ಪಯಣ ಪ್ರಾರಂಭ ಮಾಡಿದರು. ಆ ಕಾಲಕ್ಕೆ ಈ ಧಾರಾವಾಹಿ ದೊಡ್ಡ ಮಟ್ಟದ ಜನ ಮನ್ನಣೆಗಳಿಸಿತ್ತು.
'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?
21 ವರ್ಷಗಳ ಅನುಭವ
ಕಳೆದ 21 ವರ್ಷಗಳಿಂದ ಜಯಶ್ರೀ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಿದ್ದಾರೆ. ಸೀರಿಯಲ್ ಗಳ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ನಟನೆಯಲ್ಲಿ ತೊಡಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮದುವೆ
ಜಯಶ್ರೀ ಅವರೇ ಹೇಳಿಕೊಂಡಿರುವ ಹಾಗೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದರಂತೆ. ನಟನೆ ಬಿಟ್ಟು ಅಮೇರಿಕಾಕ್ಕೆ ಹೋದರಂತೆ. ಆದರೆ, ಮತ್ತೆ ಭಾರತಕ್ಕೆ ಬಂದು, ಮತ್ತೆ ಹೊಸ ಜೀವನ ಶುರು ಮಾಡಿದ್ದಾರೆ. ಛಲದಿಂದ ಇಂದು ಅವರು ಒಂದು ಸ್ಥಾನಕ್ಕೆ ಬಂದಿದ್ದಾರೆ.
ಶುಭ ಕೋರಿದ ಸೀತಾರಾಮ್
ಜಯಶ್ರೀ ಅವರ ಬಗ್ಗೆ ಮಾತನಾಡಿದ ನಿರ್ದೇಶಕ ಸೀತಾರಾಮ್ ''ಎಲ್ಲರ ಫೇವರೇಟ್ ಜಾಗಕ್ಕೆ ನೀವು ಹೋಗಿದ್ದೀರಿ. ಶುಭವಾಗಲಿ. ನೀನು ಧೈರ್ಯವಂತ ಹುಡುಗಿ. ನೀನು ಎಲ್ಲವನ್ನು ಗೆಲ್ಲುವ ಹುಡುಗಿ. ನೀನು ಒಬ್ಬ ಫೈಟರ್, ಕೊನೆಯವರೆಗೂ ಫೈಟ್ ಮಾಡು.'' ಎಂದು ಶುಭ ಹಾರೈಸಿದರು.
ಯಾಕೆ 'ಬಿಗ್ ಬಾಸ್' ?
ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಜಯಶ್ರೀ ''ಜಯಶ್ರೀ ಯಾರು?, ಆಕೆಯ ವ್ಯಕ್ತಿತ್ವ ಏನು?, ಒಬ್ಬ ಕಲಾವಿದ ಎನ್ನುವುದನ್ನು ಬಿಟ್ಟು ಈಗ ನಾನು ಏನು? ಎಲ್ಲವನ್ನು ತಿಳಿದುಕೊಳ್ಳಲು 'ಬಿಗ್ ಬಾಸ್' ಗೆ ಹೋಗುತ್ತಿದ್ದೇನೆ. 6 ನನ್ನ ಲಕ್ಕಿ ನಂಬರ್, ಅದೇ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯ ಒಳಗೆ ಹೋಗುತ್ತಿದ್ದೇನೆ.'' ಎಂದು ಹೇಳಿದರು.