Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೀರಿಯಲ್ ಚಿನ್ನು 'ಬಿಗ್ ಬಾಸ್'ಗೆ ಬಂದಿದ್ದು ಯಾಕೆ?
ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇರುವ ಸ್ಪರ್ಧಿಗಳಲ್ಲಿ ಕೆಲವರು ಈ ಹಿಂದೆಯೇ ಕನ್ನಡ ಪ್ರೇಕ್ಷಕರಿಗೆ ಚಿರ ಪರಿಚಿತರಾಗಿದ್ದಾರೆ. ಅದರಲ್ಲಿಯೂ ನಟಿ ಕವಿತಾ ಗೌಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ ನಟಿ ಆಗಿದ್ದಾರೆ.
ಸೀರಿಯಲ್ ಹಾಗೂ ಸಿನಿಮಾ ಅಂತ ಬ್ಯುಸಿ ಇದ್ದ ಕವಿತಾ ಗೌಡ ಈ ಬಾರಿಯ 'ಬಿಗ್ ಬಾಸ್' ವೇದಿಕೆ ಏರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಆದರೆ, ಕವಿತಾ 'ಬಿಗ್ ಬಾಸ್ ಕನ್ನಡ 6' ಸ್ಪರ್ಧಿಯಾಗಿ ಮತ್ತೆ ವೀಕ್ಷಕರ ಮುಂದೆ ಒಂದಿದ್ದಾರೆ.
'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್
ಅಂದಹಾಗೆ, ಸದ್ಯ ಕವಿತಾ ಗೌಡ 'ಬಿಗ್ ಬಾಸ್' ಯಾಕೆ ಬಂದರು? ಅಂತ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ...
'ಲಕ್ಷ್ಮಿ ಬಾರಮ್ಮ' ಧಾರಾವಾಹಿ
ನಟಿ ಕವಿತಾ ಗೌಡ ಎಂದ ತಕ್ಷಣ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನೆನಪಾಗುತ್ತದೆ. ಈ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕವಿತಾ ಮನೆ ಮಾತಾಗಿದ್ದರು. ಸತತ ಮೂರು ವರ್ಷ ಈ ಸೀರಿಯಲ್ ನಲ್ಲಿ ನಟಿಸಿದ್ದ ಇವರು ನಂತರ ತೆಲುಗು, ತಮಿಳು ಸೀರಿಯಲ್ ನಲ್ಲಿ ಬಣ್ಣ ಹಾಚಿದ್ದಾರೆ.
ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ
'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಟನೆ
ಸೀರಿಯಲ್ ನಿಂದ ಸಿನಿಮಾ ಜರ್ನಿ ಶುರು ಮಾಡಿರುವ ಕವಿತಾ ಸದ್ಯ ಮೂರು ಸಿನಿಮಾ ಮಾಡಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಅವರ ಮೊದಲ ಸಿನಿಮಾ ಆಗಿತ್ತು. ಸದ್ಯ ಅದೇ ತಂಡದ ಜೊತೆಗೆ 'ಬೀರ್ ಬಲ್' ಚಿತ್ರದಲ್ಲಿ ಸಹ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.
'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?
ಮಲ್ಲೇಶ್ವರಂ ಹುಡುಗಿ
ಕವಿತಾ ಗೌಡ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಇವರ ಅಡ್ಡ. ಹಾಗೆ ಹೇಳಬೇಕು ಅಂದರೆ, ಇವರು 'ಮಲ್ಲೇಶ್ವರಂ ಹುಡುಗಿ'. ಕವಿತಾ ಪಾಲಿಗೆ ಮಲ್ಲೇಶ್ವರಂ ಎನ್ನುವುದು ಪುಟ್ಟ ಜಗತ್ತು.
ಭರತನಾಟ್ಯ ಬರುತ್ತೆ
ಡ್ಯಾನ್ಸ್ ಅಂದರೆ ಕವಿತಾ ಅವರಿಗೆ ಬಹಳ ಇಷ್ಟವಂತೆ. ಸದ್ಯಕ್ಕೆ ಅವರು ಭರತನಾಟ್ಯ ಪ್ರವೀಣೆ ಆಗಿದ್ದಾರೆ. ಮುಂದೆ ಬೇರೆ ಬೇರೆ ಶೈಲಿಯ ಡ್ಯಾನ್ಸ್ ಕಲಿಯಬೇಕು ಎನ್ನುವುದು ಅವರ ಆಸೆಯಾಗಿದೆಯಂತೆ.
'ಬಿಗ್ ಬಾಸ್'ಗೆ ಬಂದ ಉದ್ದೇಶ
'ಬಿಗ್ ಬಾಸ್' ಬಂದ ಕಾರಣದ ಬಗ್ಗೆ ಮಾತನಾಡಿದ ಕವಿತಾ ''ಕೋಟಿ ಕೊಟ್ಟರು 'ಬಿಗ್ ಬಾಸ್'ಗೆ ಹೋಗಲ್ಲ ಅಂತ ಹೇಳುತ್ತಿದೆ. ಆದರೆ, ಇದು ಒಮ್ಮೆ ಆಗುವ ಅನುಭವ. ನಾನು ನನ್ನ ಬಗ್ಗೆ ತಿಳಿದುಕೊಳ್ಳಲು ಇದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಸಿಗುವುದಿಲ್ಲ ಎನಿಸಿತು. ನನಗೆ ಅಂತ ಸಮಯ ಸಿಗುತ್ತದೆ ಅಂತ 'ಬಿಗ್ ಬಾಸ್'ಗೆ ಬಂದೆ.'' ಎಂದು ಹೇಳಿದ್ದಾರೆ.