Don't Miss!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರಾವಣ ಸಂಭ್ರಮದಲ್ಲಿ 'ಮಾಂಗಲ್ಯಂ ತಂತು ನಾನೇನ'
ಶ್ರಾವಣ ಮಾಸ ಬಂತೆಂದರೆ ಹಬ್ಬ, ಸಂಭ್ರಮ - ಸಡಗರ, ಸಂತಸ... ಎಲ್ಲವೂ ಒಟ್ಟೊಟ್ಟಿಗೆ ಬರುತ್ತದೆ. ಹಾಗೆಯೇ ಕಂಕಣ ಭಾಗ್ಯಕ್ಕೆ ಇದು ಸಕಾಲ. ವಧು-ವರ ಹೊಸ ದಾಂಪತ್ಯಕ್ಕೆ ಅಡಿಯಿರಿಸುವ ಸುಸಮಯ. ಇವೆಲ್ಲವೂ ಶ್ರಾವಣಿ ಹಾಗೂ ತೇಜಸ್ವಿ ಬಾಳಿನಲ್ಲಿ ಆಕಸ್ಮಿಕವಾಗಿ ನಡೆದುಹೋಗಿದೆ.!
ಹೌದು... ಅವರಿಬ್ಬರ ಪಾಲಿಗಿದು ಬಯಸದೇ ಬಂದ ಭಾಗ್ಯವಾದರೂ, ಮನೆಯವರ ದೃಷ್ಟಿಯಲ್ಲಿ ಇದು ದೊಡ್ಡ ಅನಾಹುತ. ಯಾಕೆಂದರೆ, ಇದು ಮಧ್ಯಮವರ್ಗ ಹಾಗೂ ಶ್ರೀಮಂತನ ನಡುವಿನ ವಿವಾಹ ಬಂಧನ.
ಆಕಸ್ಮಿಕವಾಗಿ ನಡೆದುಹೋದ ಘಟನೆಗೆ ಎರಡೂ ಮನೆಯವರು ಮನಸ್ಸಿಲ್ಲದ ಮನಸ್ಸಿನಿಂದ ಕಲ್ಯಾಣ ಮಂಟಪದಲ್ಲಿ ಸೇರುತ್ತಿದ್ದಾರೆ. ಆದರೆ ಅಲ್ಲಿ ಮುಂದೆ ನಡೆಯುವ ಕಥೆಯೇ ಕುತೂಹಲ.
ಇದು ಕಲರ್ಸ್ ಸೂಪರ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯ ಸದ್ಯದ ಕಥೆ-ವ್ಯಥೆ. ಮುಂದೆ ಓದಿರಿ...
ಇದೇ ಮೊಟ್ಟ ಮೊದಲ ಬಾರಿಗೆ
ಕಿರುತೆರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ವಾಹಿನಿಯಲ್ಲಿ (ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್) ಪ್ರಸಾರವಾಗುತ್ತಿರುವ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಮಾಂಗಲ್ಯಂ ತಂತು ನಾನೇನ' ವೀಕ್ಷಕರ ಮನಸ್ಸನ್ನು ಗೆದ್ದು ಮುನ್ನುಗ್ಗುತ್ತಿದೆ.
ಅಯ್ಯಯ್ಯೋ... ರಶ್ಮಿಗೆ ಜಾನಕಿಯ ಸುಳಿವು ಸಿಕ್ಬಿಡ್ತು.!
ಶ್ರಾವಣಿ-ತೇಜಸ್ವಿ ಮದುವೆ
ರಾಜಶ್ರೀ ಕ್ಯಾಂಪಸ್ ನಿರ್ಮಾಣದಲ್ಲಿ ರಘುಚರಣ್ ಕಥೆ, ಪ್ರಧಾನ ನಿರ್ದೇಶನವಿರುವ ಈ ಧಾರಾವಾಹಿಗೆ ಯಶವಂತ್ (ಪಾಂಡು) ಸಂಚಿಕೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮದುವೆ ಘಟ್ಟ ತಲುಪಿರುವ ಈ ಸಂದರ್ಭದಲ್ಲಿ ಅದ್ಧೂರಿಯಾಗಿ ಮೂಡಿಬರಬೇಕೆಂಬ ನಿಟ್ಟಿನಲ್ಲಿ ಬೃಹತ್ ಕಲ್ಯಾಣ ಮಂಟಪದ ಸೆಟ್ ಹಾಕಿಸಲಾಗಿದೆ. ಮಾನ್ಯತಾ ಟೆಕ್ ಪಾರ್ಕ್ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಭವ್ಯ ಸೆಟ್ನಲ್ಲಿ ಶ್ರಾವಣಿ-ತೇಜಸ್ವಿ ಮದುವೆಯ ಮಂಗಳಕಾರ್ಯಗಳು ನೆರವೇರಲಿವೆ.
ಫ್ಲಾಪ್ ಆಯ್ತು ಸಿತಾರ ದೇವಿ ಪ್ಲಾನ್: ಪೊಲೀಸ್ ಸ್ಟೇಷನ್ ನಲ್ಲಿ ರಮಣ್.!
ವೀಕ್ಷಕರ ಕಣ್ಣಿಗೆ ಹಬ್ಬ
ಎರಡು ವಾರಗಳ ಕಾಲ ಈ ವಿಶೇಷ ಸಂಚಿಕೆಗಳು ಪ್ರಸಾರವಾಗಲಿದ್ದು, ಕಣ್ಣಿಗೆ ಹಬ್ಬವಂತೂ ಗ್ಯಾರೆಂಟಿ ಅನ್ನೋದು ನಿರ್ಮಾಪಕ ಸೋಮಶೇಖರ್.ಪಿ.ಎಲ್ ಅವರ ಅನಿಸಿಕೆ.
'ಬಿಗ್ ಬಾಸ್'ನಲ್ಲಿ ನೀವೂ ಸ್ಪರ್ಧಿಸಬೇಕಾ.? ಹಾಗಿದ್ರೆ, ಕೂಡಲೆ ಈ ಕೆಲಸ ಮಾಡಿ..
ಅದೃಷ್ಟದ ಹುಡುಗಿ ಶ್ರಾವಣಿ ಕಥೆ
ಮಧ್ಯಮ ಹಾಗೂ ಮೇಲ್ವರ್ಗದ ಕುಟುಂಬದ ನಡುವಿನ ಕಥಾಹಂದರವೇ 'ಮಾಂಗಲ್ಯಂ ತಂತು ನಾನೇನ'. ಅದೃಷ್ಟದ ಹುಡುಗಿ ಶ್ರಾವಣಿ, ನತದೃಷ್ಟ ಹುಡುಗ ತೇಜಸ್ವಿ ನಡುವಿನ ಕುತೂಹಲಕಾರಿ ಘಟನೆಗಳೇ ಈ ಧಾರಾವಾಹಿಯ ಕೇಂದ್ರಬಿಂದು.
ಪ್ರತಿಭೆಗಳ ದಂಡು
ರಾಜಾರಾಂ, ಹನುಮಂತೇಗೌಡ್ರು, ಸಂಗೀತಾ, ವೀಣಾಸುಂದರ್, ಸ್ಪಂದನ, ಅರುಣ್ ಮೂರ್ತಿ ಮುಂತಾದ ಅನುಭವಿ ಕಲಾವಿದರ ಜೊತೆಗೆ ಆರ್.ಕೆ.ಚಂದನ್, ದಿವ್ಯಾ, ಪವಿತ್ರಾ, ಪ್ರಜ್ಞಾ ಭಟ್, ಚಂದನ್ ಹಾಗೂ ಯಶವಂತ್ ಸೇರಿದಂತೆ ಯುವಪ್ರತಿಭೆಗಳ ದಂಡೇ ಈ ಧಾರಾವಾಹಿಯಲ್ಲಿದೆ.
ಪ್ರಸಾರ ಯಾವಾಗ.?
ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಕಲರ್ಸ್ ಸೂಪರ್ ಹಾಗೂ ರಾತ್ರಿ 10.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಾಂಗಲ್ಯಂ ತಂತು ನಾನೇನ' ಪ್ರಸಾರವಾಗುತ್ತಿದೆ.