Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರಿಗಮಪ 14'ನಲ್ಲಿ ಮೆಡಲ್ ಪಡೆದ ಮಕ್ಕಳ ಹಿಂದಿನ ಕಷ್ಟ ಕೇಳಿ!
Recommended Video
ರಿಯಾಲಿಟಿ ಶೋ ಗಳನ್ನು ಜನರಿಗೆ ತುಂಬ ಹತ್ತಿರವಾಗುವಂತೆ ಮಾಡುವ ಕನ್ನಡದ ಪ್ರಮುಖ ವಾಹಿನಿ ಅಂದರೆ 'ಜೀ ಕನ್ನಡ'. ಈ ವಾಹಿನಿಯಲ್ಲಿ ಈಗ ಮತ್ತೆ 'ಸರಿಗಮಪ' ಕಾರ್ಯಕ್ರಮ ಶುರು ಆಗಿದೆ. ಕಳೆದ ಶನಿವಾರದಿಂದ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.
ಈ ಬಾರಿಯ 'ಸರಿಗಮಪ 14' ಕಾರ್ಯಕ್ರಮದ ದೊಡ್ಡ ಹೈಲೆಟ್ ಮಕ್ಕಳು. ಮೆಗಾ ಆಡಿಷನ್ ನಲ್ಲಿಯೇ ಈ ಮಕ್ಕಳು ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲಿಯೂ ಕೆಲವು ಮಕ್ಕಳು ಈ ವಯಸ್ಸಿನಲ್ಲಿಯೇ ಕಷ್ಟ ಪಟ್ಟು ವೇದಿಕೆ ಏರಿದ್ದಾರೆ. ಎಲ್ಲೋ ಹಳ್ಳಿಯಲ್ಲಿ ಬೆಳೆದು ಸಂಗೀತ ಕಲಿಯದೆ ಇದ್ದರು ಕೆಲ ಮಕ್ಕಳು ಕಾರ್ಯಕ್ರಮ ಮೂರು ತೀರ್ಪುಗಾರರ ಮನಸ್ಸು ಗೆದ್ದಿದ್ದಾರೆ.
ಅಂದಹಾಗೆ, ಜೀ ಕನ್ನಡ ವಾಹಿನಿಯ 'ಸರಿಗಮಪ 14' ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಮೆಡಲ್ ಪಡೆದ ಈ ಮಕ್ಕಳ ಬಗ್ಗೆ ಒಂದಷ್ಟು ವಿವರ ಮುಂದಿದೆ ಓದಿ...
ಆಯ್ಕೆ ಆದ ಮಕ್ಕಳು
ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಸದ್ಯ 9 ಮಕ್ಕಳು ಆಯ್ಕೆ ಆಗಿದ್ದಾರೆ. ವಿಶ್ವಪ್ರಸಾದ್, ಹರ್ಷಿತಾ, ಅಭಿಜಿತ್, ಕೀರ್ತನಾ, ತೇಜಸ್, ತನುಶ್ರೀ, ಸೃಜನ್, ಕ್ಷಿತಿ ಕೆ ರೈ, ಲಕ್ಷ್ಮಿ ಆಯ್ಕೆ ಆದ ಮಕ್ಕಳಾಗಿದ್ದಾರೆ.
15 ಮಕ್ಕಳು ಇರುತ್ತಾರೆ
ಕಾರ್ಯಕ್ರಮದಲ್ಲಿ ಒಟ್ಟು 15 ಮಕ್ಕಳು ಇರಲಿದ್ದು, ಅದರಲ್ಲಿ 9 ಮಕ್ಕಳು ಈ ಆಯ್ಕೆ ಆಗಿದ್ದಾರೆ. ಉಳಿದ 6 ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ.
ಮಂಡ್ಯದ ಹುಡುಗನ ಕಣ್ಣೀರ ಕಥೆ
ಆಯ್ಕೆ ಆದ ಮಕ್ಕಳ ಪೈಕಿ ಪ್ರಮುಖವಾಗಿ ಇಬ್ಬರು ಮಕ್ಕಳು ಅನೇಕರಿಗೆ ಇಷ್ಟ ಆದರು. ಅದರಲ್ಲಿ ಮಂಡ್ಯದ ಬಡ ಹುಡುಗ ಸೃಜನ್ ಕೂಡ ಒಬ್ಬ. ಈ ಹುಡುಗ ಕಾರ್ಯಕ್ರಮದಲ್ಲಿ ಹಾಡುವುದಕ್ಕಾಗಿ ತಾನು ಸಾಕಿದ ಕರುವನ್ನೇ ಮಾರಿದ್ದಾನೆ.
ಕರು ಮಾರಿ 'ಸರಿಗಮಪ' ಬಂದ
ಸೃಜನ್ ಅವರ ತಂದೆ ರೈತರಾಗಿದ್ದು, ಅವರ ಕುಟುಂಬ ದೊಡ್ಡ ಸಮಸ್ಯೆಯಲ್ಲಿ ಇದೆ. 'ಸರಿಗಪಮ 'ಕಾರ್ಯಕ್ರಮಕ್ಕೆ ಬರಲು ಸಹ ಸೃಜನ್ ತಂದೆಯ ಬಳಿ ದುಡ್ಡು ಇರಲಿಲ್ಲ. ಆಗ ಸೃಜನ್ ಸಾಕಿದ ಗೌರಿ ಎಂಬ ಕರು ವನ್ನು ಮಾರಿ ಅದರಿಂದ ಬಂದ ದುಡ್ಡಿನಿಂದ ಬಟ್ಟೆ, ಶೂ ಕೊಂಡು ಬೆಂಗಳೂರಿಗೆ 'ಸರಿಗಪಮ' ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ.
ಸಾಕಿದ ಕರು ಮಾರಿ 'ಸರಿಗಮಪ' ವೇದಿಕೆ ಏರಿದ ಮಂಡ್ಯದ ಬಡ ಹುಡುಗ!
ಕೂಲಿ ಕೆಲಸ ಮಾಡುವವರ ಮಗಳು ಲಕ್ಷ್ಮಿ
9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿ. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಹೆಜ್ಜೆ ಹಾಕಿದ ಹಂಸಲೇಖ
ಕಾರ್ಯಕ್ರಮದಲ್ಲಿ ಲಕ್ಷ್ಮಿ ಹಾಡು ಕೇಳಿ ಸ್ವತಃ ಹಂಸಲೇಖ ಎದ್ದು ಬಂದು ಹಾಡಿಗೆ ಹೆಜ್ಜೆ ಹಾಕಿದರು. ಜನಪದ ಗೀತೆಯ ಮೂಲಕ ಆಡಿಷನ್ ಕೊಟ್ಟ ಲಕ್ಷ್ಮಿ, ತ್ರಿವಳಿ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದರು.
ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ
ಬೆಳಗಾವಿಯ ವಿಶ್ವಪ್ರಸಾದ್
ಬೆಳಗಾವಿಯ ಎಂಬ ಹುಡುಗ ಕೂಡ ಮೆಗಾ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿದ್ದಾರೆ. ತಮ್ಮ ಊರಿನಲ್ಲಿ ಸಂಗೀತ ಶಾಲೆ ಇಲ್ಲದೆ ಈ ಹುಡುಗ 40 ಕಿಲೋ ಮೀಟರ್ ಪ್ರಯಾಣ ಮಾಡಿ ಸಂಗೀತ ಕಲಿಯುತ್ತಿದ್ದಾನೆ.