Amruthadhaare ; ಭೂಮಿಕಾ ಹೊಸ ಆಟಕ್ಕೆ ಶರಣಾಗದ ಶಕುಂತಲಾ, ಜಲಜಾ ಗೊತ್ತು, ವನಜಾ ಗೊತ್ತು ಆದರೆ !
ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾ ಬೆನ್ನ ಹಿಂದೆ ಭೂಮಿಕಾ ಬಿದ್ದಿದ್ದಾಳೆ. ತನ್ನ ಬುದ್ದಿ ಉಪಯೋಗಿಸಿ ಶಕುಂತಲಾ ಹುಟ್ಟುಹಬ್ಬದ ನೆಪದಲ್ಲಿ ಆಟ ಆಡಿಸಿದ್ದಾಳೆ. ನಿಮ್ಮ ನಿಮ್ಮ ಹೆಸರು ಬಂದಾಗ ನಿಮ್ಮೂರಿನ ನೆನಪುಗಳನ್ನು ಹಂಚಿಕೊಳ್ಳಬೇಕು ಎನ್ನುತ್ತಾಳೆ. ಇದರಿಂದ ಶಕುಂತಲಾ ಗಲಿಬಿಲಿಯಾದರೂ ಕೂಡ ಭೂಮಿಕಾಗೆ ಅದರ ಅರಿವು ಆಗುವುದಿಲ್ಲ. ಹೀಗಿರುವಾಗ ಶಕುಂತಲಾ ಹೆಸರು ಬರುತ್ತೆ.
ಆಗ ಶಕುಂತಲಾ ನಾನು ವಿಜಯನಗರದ ರಾಜಮನೆತನದವಳು ಎನ್ನುತ್ತಾಳೆ. ಆಗ ಅಲ್ಲಿಯೇ ಇದ್ದ ಸ್ನೇಹಿತೆ ನನ್ನ ಸ್ನೇಹಿತೆ ಕೂಡ ರಾಜಮನೆತನದವಳು ಅವಳು ನಿಮಗೆ ಪರಿಚಯನಾ ಎನ್ನುತ್ತಾಳೆ.ಇದಕ್ಕೆ ಶಕುಂತಲಾ ಯಾವುದೋ ಸಾಮಂತರ ವಂಶದವಳು ಇರಬಹುದು ಎನ್ನುತ್ತಾಳೆ.

ಭೂಮಿಕಾ ಬುದ್ಧಿಯನ್ನು ಚೆನ್ನಾಗಿ ಬಲ್ಲ ಶಕುಂತಲಾ ಆ ನಂತರ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಲಕ್ಷ್ಮೀಕಾಂತ್ ಗೆ ಹೇಳುತ್ತಾಳೆ. ಇದರ ನಡುವೆ ಜೀವನ್ ಕುರಿತು ಮಂದಾಕಿನಿ ಬಳಿ ಅಪೇಕ್ಷಾ ಚರ್ಚೆ ಮಾಡುತ್ತಾಳೆ.
More from Filmibeat
English summary
Amruthadhaare Serial 17th may episode written update


Click it and Unblock the Notifications











