Amruthadhaare: ಭೂಮಿಕಾಳ ನಿಶ್ಚಿತಾರ್ಥ ನಿಲ್ಲಿಸಿದ ಗೌತಮ್ ದಿವಾನ್

By ಪ್ರಿಯಾ ದೊರೆ

ಮಹಿಮಾ ತನ್ನ ಎಂಗೇಜ್‌ಮೆಂಟ್‌ಗೆ ರೆಡಿ ಆಗುತ್ತಿರುತ್ತಾರೆ. ಈ ವೇಳೆ ಮಹಿಮಾ ರೂಮ್‌ಗೆ ಶಕುಂತಲಾ ಹಾಗೂ ಅಣ್ಣ ಬರುತ್ತಾರೆ. ಮಹಿಮಾಳನ್ನು ಗೌತಮ್ ವಿಚಾರಿಸಿಕೊಳ್ಳುತ್ತಾನೆ. ನಿಶ್ಚಿತಾರ್ಥಕ್ಕೆ ಸ್ನೇಹಿತರೆಲ್ಲಾ ಬರುತ್ತಿದ್ದಾರಾ ಎಂದು ಕೇಳುತ್ತಾನೆ. ಅದಕ್ಕೆ ಮಹಿಮಾ ಇಲ್ಲ ಅವರೆಲ್ಲಾ ಹೊರಗಡೆ ಹೋಗಿದ್ದಾರೆ. ಸ್ನೇಹಿತರಿಗೆಲ್ಲಾ ಪಾರ್ಟಿ ಕೊಡಿಸುತ್ತೇನೆ ಎಂದು ಹೇಳುತ್ತಾಳೆ. ಜೀವನ್‌ಗಾಗಿ ತಂದ ಉಂಗುರ ಕೊಟ್ಟು ಎಮೋಷನಲ್ ಆಗುತ್ತಾನೆ.

ಈ ಮನೆ ಬಿಟ್ಟು ಹೋಗುತ್ತೀಯಾ ಎನ್ನುತ್ತಾನೆ. ಈ ಮಾತಿಗೆ ಮಹಿಮಾ ನನಗೆ ಆ ಅಪಾರ್ಟ್‌ಮೆಂಟ್‌ನಲ್ಲಿ ಜಾಸ್ತಿ ದಿನ ಇರಲು ಆಗಲ್ಲ. ಬೋರ್ ಆದಾಗ ಇಲ್ಲಿಗೆ ಬಂದು ಬಿಡುತ್ತೇನೆ ಎಂದು ಹೇಳುತ್ತಾಳೆ. ಇದರಿಂದ ಮನೆಯವರಿಗೆ ಸ್ವಲ್ಪ ಗಾಬರಿಯಾಗುತ್ತದೆ.

Amruthadhaare Serial 22nd June episode written update

ಭೂಮಿಕಾ ಮನೆಯಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿರುತ್ತದೆ. ಈ ವೇಳೆ ಸದಾಶಿವ ಉಂಗುರಗಳನ್ನು ನೋಡುತ್ತಾನೆ. ಮಹಿಮಾಳಿಗಾಗಿ ಹೊಸ ಉಂಗುರವನ್ನು ತಂದಿರಲಾಗುತ್ತದೆ. ಅದೇ ವಿಶ್ವಾಸ್‌ಗೆ ಭೂಮಿಕಾ ಮೊದಲ ಎಂಗೇಜ್‌ಮೆಂಟ್‌ನ ಹಳೆಯ ಉಂಗುರವನ್ನೇ ಇಟ್ಟಿರಲಾಗುತ್ತದೆ. ಇದನ್ನು ನೋಡಿದ ಸದಾಶಿವ ಜಗಳ ಮಾಡುತ್ತಾನೆ.

ಮಂದಾಕಿನಿ ಕಣ್ಣೀರು

ನನ್ನ ಮಗಳನ್ನು ಯಾಕೆ ಯಾವಾಗಲೂ ನಿರ್ಲಕ್ಷ್ಯ ಮಾಡುತ್ತೀಯ. ನೀನೇನು ನನ್ನ ಮಗಳು ಭೂಮಿಕಾಳಿಗೆ ಮಲತಾಯಿನಾ ಎಂದು ಪ್ರಶ್ನೆ ಮಾಡುತ್ತಾನೆ. ಇದರಿಂದ ಮಂದಾಕಿನಿಗೆ ನೋವಾಗುತ್ತದೆ. ಭೂಮಿಕಾ ಮದುವೆಯಾಗಲಿ ಎಂದು ಎಷ್ಟೊಂದು ಹರಕೆಗಳನ್ನು ಹೊತ್ತುಕೊಂಡಿದ್ದೇನೆ. ತಾಯಿ ಚಾಮುಂಡೇಶ್ವರಿಗೆ ರೇಷ್ಮೆ ಸೀರೆ ತಂದಿದ್ದೇನೆ. ನನ್ನನ್ನು ನೀವು ಮಲತಾಯಿ ಎಂದು ದೂಷಿಸಬಾರದಿತ್ತು ಎಂದು ಕಣ್ಣೀರು ಹಾಕುತ್ತಾಳೆ. ಕೊನೆಗೆ ಮನೆಯವರೆಲ್ಲಾ ಒಂದಾಗುತ್ತಾರೆ.

Amruthadhaare Serial 22nd June episode written update

ಭೂಮಿಕಾ ಎಂಗೇಜ್‌ಮೆಂಟ್

ಭೂಮಿಕಾ ಮನೆಗೆ ವಿಶ್ವಾಸ್ ಮನೆಯವರು ಹಾಗೂ ಗೌತಮ್ ದಿವಾನ್ ಮನೆಯವರು ಆಗಮಿಸುತ್ತಾರೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಾರೆ. ಸಂಭ್ರಮದಿಂದ ಭೂಮಿಕಾ ಹಾಗೂ ವಿಶ್ವಾಸ್ ನಿಶ್ಚಿತಾರ್ಥವನ್ನು ಮಾಡಲು ಮುಂದಾಗುತ್ತಾರೆ. ಭೂಮಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಇದೇ ವೇಳೆಗೆ ಆನಂದ್‌ಗೆ ವಿಶ್ವಾಸ್ ಬಗ್ಗೆ ಮಾಹಿತಿ ತಿಳಿಯುತ್ತದೆ. ಹೇಗಾದರೂ ಮಾಡಿ ಎಂಗೇಜ್‌ಮೆಂಟ್ ನಿಲ್ಲಿಸಬೇಕು ಎಂದು ಗೌತಮ್‌ಗೆ ಪದೇ ಪದೇ ಕಾಲ್ ಮಾಡುತ್ತಾನೆ. ಆದರೆ, ಗೌತಮ್ ಫೋನ್ ರಿಸೀವ್ ಮಾಡುವುದಿಲ್ಲ.

ವಿಶ್ವಾಸ್‌ಗೆ ಕಪಾಳಮೋಕ್ಷ

ಇನ್ನೇನು ನಿಶ್ಚಿತಾರ್ಥ ಸಂಪೂರ್ಣವಾಗಿ ಮುಗಿಯಬೇಕು ಅಷ್ಟೊತ್ತಿಗೆ ಆನಂದ್ ಓಡಿ ಬರುತ್ತಾನೆ. ಗೌತಮ್‌ನ ಪಕ್ಕಕ್ಕೆ ಕರೆದು, ವಿಶ್ವಾಸ್ ಈಗಾಗಲೇ ಮದುವೆಯಾಗಿರುವ ಫೋಟೋಗಳನ್ನು ತೋರಿಸುತ್ತಾನೆ. ಅವರ ಮದುವೆಯ ಸರ್ಟಿಫಿಕೆಟ್ ಅನ್ನು ಕೂಡ ತೋರಿಸುತ್ತಾನೆ. ಇದನ್ನು ನೋಡುತ್ತಿದ್ದಂತೆ ಶಾಕ್ ಆಗುವ ಗೌತಮ್ ಒಳಗೆ ಬಂದು ಭೂಮಿಕಾಳಿಗೆ ಉಂಗುರ ತೊಡಿಸುವ ವೇಳೆಗೆ ವಿಶ್ವಾಸ್‌ನನ್ನು ತಡೆಯುತ್ತಾನೆ. ಬಳಿಕ ಅವನ ಕೆನ್ನೆಗೆ ಬಾರಿಸುತ್ತಾನೆ. ಆತ ಮದುವೆಯಾಗಿರುವ ಫೋಟೋಗಳನ್ನು ತೋರಿಸಿ ಮೋಸ ಮಾಡಿದ್ದಾನೆ ಎಂದು ಕೂಗಾಡುತ್ತಾನೆ.

ಎಲ್ಲರ ಬಳಿ ಕ್ಷಮೆ ಕೇಳಿದ ಗೌತಮ್

ಯಾಕೆ ಮದುವೆಯಾಗಿದ್ದರೂ ಈಗ ಸುಳ್ಳು ಹೇಳಿ ಮೋಸ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ಆಗ ವಿಶ್ವಾಸ್ ಇದಕ್ಕೆಲ್ಲಾ ನೀವೇ ಕಾರಣ. ಭೂಮಿಕಾ ಅವರನ್ನು ಮದುವೆಯಾದವರಿಗೆ ಮನೆ, ಕಾರು, ಹಣ ಎಲ್ಲವನ್ನೂ ಕೊಡುತ್ತೇವೆ ಎಂದು ಹೇಳಿದ್ದು. ಇಷ್ಟು ವರ್ಷ ದುಡಿದರೂ ಸೆಟಲ್ ಆಗಲಿಲ್ಲ. ಇದು ಒಳ್ಳೆಯ ಅವಕಾಶ ಅಂತ ಮೋಸ ಮಾಡಬೇಕಾಯ್ತು ಎಂದು ಹೇಳುತ್ತಾನೆ.

ಆಗ ಗೌತಮ್ ನಾನು ಒಳ್ಳೆಯ ಉದ್ಧೇಶದಿಂದ ಹೇಳಿದ್ದು ಎಂದು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾನೆ. ಆದರೆ, ಎಲ್ಲರೂ ಗೌತಮ್ ಮೇಲೆ ಹರಿಹಾಯುತ್ತಾರೆ. ನಿಮ್ಮಿಂದ ನಮ್ಮ ಮಗಳ ಬದುಕು ಹೀಗಾಯ್ತು ಎಂದು ಸದಾಶಿವ ಹಾಗೂ ನನ್ನ ಅಕ್ಕನ ಜೀವನ ಹಾಳಾಯ್ತು ಎಂದು ಜೀವನ್ ಜಗಳ ಮಾಡುತ್ತಾರೆ. ಗೌತಮ್ ಆಗ ಎಲ್ಲರನ್ನು ಕ್ಷಮೆಯಾಚಿಸುತ್ತಾನೆ.

More from Filmibeat

English summary
Amruthadhaare Serial 22nd June episode written update. here is details about Gautham stops Bhoomika engagement. This created big problem at home. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X