Amruthadhaare: ಸಂಕಟದಲ್ಲೂ ತಮ್ಮನ ನಿಶ್ಚಿತಾರ್ಥ ಮಾಡಿದ ಭೂಮಿಕಾ
ಗೌತಮ್ ದಿವಾನ್ ಎಲ್ಲರ ಎದುರಿಗೂ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತಾನೆ. ವಿಶ್ವಾಸ್ ಅವರ ತಂದೆ ತಾಯಿಗೂ ತನ್ನ ಮಗನ ಮದುವೆ ಆಗಿರುವುದು ಗೊತ್ತಿರುವುದಿಲ್ಲ. ಗೌತಮ್ ಹೇಳಿದ ಮೇಲೆಯೇ ಅವಗೂ ಸತ್ಯ ತಿಳಿಯುತ್ತದೆ. ವಿಶ್ವಾಸ್ ಅವರ ತಂದೆ ಮಗನ ಕೆನ್ನೆಗೆ ಹೊಡೆಯುತ್ತಾರೆ. ಬಳಿಕ ನಮ್ಮನ್ನು ಕ್ಷಮಿಸಿ. ಇದ್ಯಾವ ವಿಚಾರವೂ ನಮಗೆ ಗೊತ್ತಿರಲಿಲ್ಲ ಎನ್ನುತ್ತಾರೆ.
ನಮ್ಮನ್ನು ದಯವಿಟ್ಟು ಕ್ಷಮಿಸಿ ಬಿಡಿ ಎಂದು ಹೇಳಿ ಅವಮಾನದಿಂದ ಹೊರಟು ಬಿಡುತ್ತಾರೆ. ವಿಶ್ವಾಸ್ ಕೂಡ ಸೈಲೆಂಟ್ ಆಗಿ ಅಲ್ಲಿಂದ ಹೊರಡುತ್ತಾನೆ. ಬಳಿಕ ಸದಾಶಿವ ಪುನಃ ಗೌತಮ್ಗೆ ಬೈಯುತ್ತಾನೆ.

ಇಷ್ಟಾದ ಮೇಲೂ ಇನ್ನೂ ಯಾಕೆ ಇಲ್ಲಿದ್ದೀರಾ.? ದಯವಿಟ್ಟು ಹೊರಟು ಬಿಡಿ. ನಿಮ್ಮಿಂದ ಆದ ಸಹಾಯಕ್ಕೆ ಬಹಳ ಥ್ಯಾಂಕ್ಸ್. ನನ್ನ ಮಗಳು ಕಳೆದುಕೊಂಡ ಆತ್ಮವಿಶ್ವಾಸವನ್ನು ವಾಪಸ್ ಯಾರಿಂದಲೂ ತಂದು ಕೊಡಲು ಸಾಧ್ಯವಿಲ್ಲ. ಏನಾದರೂ ಮಾಡುವಾಗ ಸ್ವಲ್ಪ ಯೋಚಿಸಿ ಮಾಡಬೇಕು. ಕನಿಷ್ಠ ಪಕ್ಷ ಹೀಗೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನೀವು ಸ್ವಲ್ಪ ಗಮನ ಹರಿಸಿ ಎಂದು ಹೇಳಬೇಕಿತ್ತು. ಅದು ಬಿಟ್ಟು ಇಷ್ಟೆಲ್ಲಾ ಮಾಡಿ. ನನ್ನ ಮಗಳು ಜೀವನ ಪೂರ್ತಿ ಕೊರಗುವಂತೆ ಮಾಡಿದ್ದೀರಿ ಎಂದು ಸದಾಶಿವ ಒಂದೇ ಸಮನೆ ಗೌತಮ್ಗೆ ಬೈಯುತ್ತಾನೆ.
ಕ್ಲಾಸ್ ತೆಗೆದುಕೊಂಡ ಭೂಮಿಕಾ
ಗೌತಮ್ ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಆಗ ಭೂಮಿಕಾ ಆತನನ್ನು ತಡೆಯುತ್ತಾಳೆ. ಇದಕ್ಕೆಲ್ಲಾ ಕಾರಣ ಗೌತಮ್ ಅಲ್ಲ. ನಮ್ಮ ಮನೆಯವರು. ಭೂಮಿಕಾಗೆ ಬೇಗ ಮದುವೆ ಮಾಡಬೇಕು ಎಂದು ಆತುರ ಪಟ್ಟಿದ್ದ ನನ್ನಮ್ಮ. ಹೀಗೆ ಅವಸರದಲ್ಲಿ ಮಾಡಿದ್ದಕ್ಕೆ ಇವತ್ತು ಹೀಗಾಯ್ತು. ಈಗ ನಿನಗೆ ಖುಷಿ ಆಯ್ತಾ ಅಮ್ಮ ಎಂದು ಕೇಳುತ್ತಾಳೆ. ಭೂಮಿಕಾ ಕೇಳುವ ಪ್ರತಿಯೊಂದು ಪ್ರಶ್ನೆಗಳಿಗೂ ಮಂದಾಕಿನಿ ನೊಂದುಕೊಳ್ಳುತ್ತಾಳೆ.

ನೋವಿನಿಂದ ಭೂಮಿಕಾ ಮಾತು
ಈ ಪ್ರಪಂಚದಲ್ಲಿ ಒಂದು ಹೆಣ್ಣಿನ ಮದುವೆ ಆಗಿಲ್ಲ ಅಂದರೆ ಅದು ದೊಡ್ಡ ತಪ್ಪು. ಅವಳಿಗೆ ಎಷ್ಟೇ ವಿದ್ಯಾಭ್ಯಾಸ ಕೊಡಿಸಿದರೂ ಕೂಡ ಅವಳಿಗೆ ಮದುವೆ ಮಾಡಿ ಕಳಿಸಬೇಕು. ಅಲ್ಲಿ ಅವಳು ಎಷ್ಟೇ ಕಷ್ಟ ಅನುಭವಿಸಿದರೂ ಪರವಾಗಿಲ್ಲ. ಮದುವೆಯಾದ ಮೇಲೂ ಹುಡುಗಿ ಯಾವುದೇ ಕಾರಣಕ್ಕೂ ತವರು ಮನೆಗೆ ಬರಲೇ ಬಾರದು. ಹೆಣ್ಣು ಮಕ್ಕಳಿಗೆ ಈ ಶಿಕ್ಷೆ ಯಾಕೆ ಎಂದು ಕಿರುಚಾಡುತ್ತಾಳೆ. ಬಳಿಕ ಗೌತಮ್ಗೆ ತನಗಾಗಿ ಇನ್ಯಾವ ಸಹಾಯವನ್ನೂ ಮಾಡಬೇಡಿ ಎಂದು ಹೇಳುತ್ತಾಳೆ.
ಜೀವನ್-ಮಹಿಮಾ ನಿಶ್ಚಿತಾರ್ಥ
ಇನ್ನು ನಿಮ್ಮ ತಂಗಿಯ ಮದುವೆ ನಿಲ್ಲುವುದಿಲ್ಲ. ನೀವು ತೀರ್ಮಾನಿಸಿದ ಮುಹೂರ್ತದಲ್ಲೇ ಅವರ ಮದುವೆ ಆಗುತ್ತದೆ ಎಂದು ಹೇಳುತ್ತಾಳೆ. ಆಗ ಜೀವನ್ ತಿರಸ್ಕರಿಸಲು ಯತ್ನಿಸುತ್ತಾನೆ. ಆದರೆ, ಭೂಮಿಕಾ ನನ್ನ ನಿರ್ಧಾರವೇ ಕೊನೆಯ ನಿರ್ಧಾರ. ನನ್ನ ಕಾರಣಕ್ಕೆ ಯಾರಿಗೂ ತೊಂದರೆ ಆಗುವುದು ಬೇಡ. ನೀನು ಈಗ ಮದುವೆ ಮಾಡಿಕೊಳ್ಳದಿದ್ದರೆ, ನಾನು ನಿನ್ನ ಅಕ್ಕ ಅಲ್ಲವೇ ಅಲ್ಲ ಎಂದು ಹೇಳುತ್ತಾಳೆ. ಜೀವನ್ ಹಾಗೂ ಮಹಿಮಾ ನಿಶ್ಚಿತಾರ್ಥವನ್ನು ನೆರವೇರಿಸುತ್ತಾಳೆ. ಇದರಿಂದ ಮಹಿಮಾಳಿಗೆ ಖುಷಿಯಾಗುತ್ತದೆ.
ಗೌತಮ್-ಭೂಮಿಕಾ ಮದುವೆ ಐಡಿಯಾ
ಇತ್ತ ಮನೆಗೆ ಬಂದ ಮೇಲೆ ಶಕುಂತಲಾ ಅವರ ಅಣ್ಣ, ಭೂಮಿಕಾಳನ್ನು ಗೌತಮ್ಗೆ ಕೊಟ್ಟು ಮದುವೆ ಮಾಡುವುದೇ ಸರಿ. ಆಗ ಜೀವನ್ ಮನೆಯವರೆಲ್ಲಾ ನಿನ್ನ ಕೈ ಹಿಡಿತದಲ್ಲಿರುತ್ತಾರೆ. ಭೂಮಿಕಾ ಕೂಡ ನಿನ್ನ ಅಡಿ ಆಳಾಗಿರುತ್ತಾಳೆ ಎಂದು ಹೇಳಿಕೊಡುತ್ತಾನೆ. ಶಕುಂತಲಾ ಕೂಡ ತನ್ನ ಅಣ್ಣನ ಪ್ಲಾನ್ ಸರಿಯಾಗಿದ್ದು, ಮುಂದುವರೆಯುತ್ತಾಳೆ.
ಇತ್ತ ಗೌತಮ್, ಭೂಮಿಕಾ ವಿಚಾರದಲ್ಲಿ ಬಹಳ ಬೇಸರ ಮಾಡಿಕೊಂಡಿರುತ್ತಾನೆ. ತನ್ನಿಂದ ಆದ ಈ ತಪ್ಪಿಗೆ ಪರಿಹಾರವನ್ನು ಹುಡುಕಲೇಬೇಕು ಎಂದು ಯೋಚಿಸುತ್ತಿರುತ್ತಾನೆ.


Click it and Unblock the Notifications











