Amruthadhaare: ಗೌತಮ್ ಜೊತೆಗೆ ಅಪೇಕ್ಷಾ ಮದುವೆ ಮಾಡಲು ಮುಂದಾದ ಮಂದಾಕಿನಿ
ಬೆಳಗೆದ್ದು ಭೂಮಿಕಾ ತನ್ನ ಬದುಕು ಹೀಗಾಯ್ತಲ್ಲ. ಒಪ್ಪಿಕೊಂಡ ಹುಡುಗನಿಂದಲೇ ಮೋಸವಾಯ್ತಲ್ಲ ಎಂದು ಕೊರಗುತ್ತಿರುತ್ತಾಳೆ. ಮುಂದೇನು ಮಾಡುವುದು ಎಂಬುದು ತಿಳಿಯದೇ ಕುಳಿತಲ್ಲೇ ಕುಳಿತಿರುತ್ತಾಳೆ. ಅಪೇಕ್ಷಾ ಭೂಮಿಕಾ ಬಳಿ ಬಂದು ಮಾತನಾಡಿಸಲು ಮುಂದಾಗುತ್ತಾಳೆ. ಆದರೆ ಭುಮಿಕಾ ಬಹಳ ಮೌನವಾಗಿಯೇ ಇರುತ್ತಾಳೆ. ಅಪೇಕ್ಷಾ ನನಗೆ ಗೊತ್ತು ನಿನ್ನೆ ನಡೆದ ಘಟನೆ ನಿನಗೆ ಬಹಳ ನೋವು ತಂದಿದೆ ಎಂದು.
ಇಷ್ಟೆಲ್ಲಾ ಆದರೂ ನಾನು ನಿನಗೊಂದು ವಿಚಾರವನ್ನು ಹೇಳಲೇಬೇಕು ಎಂದು ಹೇಳುತ್ತಾಳೆ. ನಿನ್ನೆ ನೀನು ಮಾತನಾಡಿದ್ದು ಬಹಳ ಚೆನ್ನಾಗಿತ್ತು. ಘಾಸಿ ಆಗಿದ್ದರೂ ಸಂದರ್ಭವನ್ನು ಬಹಳ ಉತ್ತಮವಾಗಿ ನಿಭಾಯಿಸಿದೆ ಎಂದು ಹೇಳುತ್ತಾಳೆ. ಬಳಿಕ ನೀನು ಹೀಗೆ ಇರಬೇಡ. ನೋಡಲು ಬೇಸರವಾಗುತ್ತೆ. ಎಲ್ಲಾ ಒಳ್ಳೆಯದೇ ಆಗುತ್ತೆ. ನೀನು ಆರಾಮವಾಗಿರು ಎಂದು ಹೇಳುತ್ತಾಳೆ.

ಭೂಮಿಕಾ ನನಗೆ ಸ್ವಲ್ಪ ಸಮಯ ಕೊಡು ನಾನೇ ಸರಿ ಹೋಗುತ್ತೇನೆ ಎನ್ನುತ್ತಾಳೆ. ಅಷ್ಟರಲ್ಲಿ ಮಂದಾಕಿನಿ ಬಂದು ಕಾಫಿ ತಣ್ಣಗಾಯ್ತು. ಇನ್ನು ಕುಡಿದಿಲ್ಲ ಎನ್ನುತ್ತಾಳೆ. ಭೂಮಿಕಾ ಕಾಫಿ ಕುಡಿಯುವುದರೊಳಗಡೆ, ಮನೆಯ ಕಾಲಿಂಗ್ ಬೆಲ್ ರಿಂಗ್ ಆಗುತ್ತದೆ. ಮಂದಾಕಿನಿ ಇಷ್ಟೊತ್ತಿನಲ್ಲಿ ಯಾರು ಎಂದು ಬಾಗಿಲು ತೆರೆದು ನೋಡುತ್ತಾಳೆ. ಶಕುಂತಲಾ ಮನೆಗೆ ಬಂದಿರುತ್ತಾಳೆ.
ಮದುವೆಯ ಪ್ರಪೋಸಲ್ ಕೊಟ್ಟ ಶಕುಂತಲಾ
ಮಂದಾಕಿನಿ, ಶಕುಂತಲಾಳನ್ನು ಮನೆಗೆ ಕರೆದು ಮಾತನಾಡಿಸುತ್ತಾಳೆ. ಶಕುಂತಲಾ ಭೂಮಿಕಾಳನ್ನು ನೋಡಿ, ಈ ಪುಣ್ಯಕೋಟಿನ ನಮ್ಮ ಗೌತಮ್ಗೆ ಕೊಟ್ಟು ಮದುವೆ ಮಾಡಿದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ಆಗುತ್ತದೆ. ಆಗ ಮಹಿಮಾ ಹಾಗೂ ಗೌತಮ್ ಇಬ್ಬರೂ ಕೂಡ ನನ್ನ ಕಂಟ್ರೋಲ್ನಲ್ಲಿ ಇರುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.
ಶಕುಂತಲಾ, ಮಂದಾಕಿನಿ ಬಳಿ ನಿನ್ನೆ ನಾವು ಅಂದುಕೊಂಡ ಹಾಗೆ ನಡೆದಿದ್ದರೆ, ಎರಡು ಎಂಗೇಜ್ಮೆಂಟ್ ಆಗಬೇಕಿತ್ತು. ಆದರೆ ಅದು ಆಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಮಗಳನ್ನು ಗೌತಮ್ಗೆ ಕೊಟ್ಟು ಮದುವೆ ಮಾಡಲು ಒಪ್ಪಿದರೆ, ಒಂದೇ ಸಲ ಇಬ್ಬರ ಮದುವೆಯನ್ನು ಮಾಡಬಹುದು. ಈ ಬಗ್ಗೆ ಆದಷ್ಟು ಬೇಗ ಮನೆಯಲ್ಲಿ ಮಾತನಾಡಿ ವಿಷಯ ತಿಳಿಸಿ. ನಮ್ಮ ಗೌತಮ್ ಗೆ ನಿಮ್ಮ ಮಗಳು ಬಹಳ ಇಷ್ಟವಾಗಿದ್ದಾಳೆ. ರಾತ್ರಿಯೂ ನಿಮ್ಮ ಮಗಳ ಬಗ್ಗೆಯೇ ಯೋಚಿಸುತ್ತಿದ್ದನು ಎಂದು ಹೇಳುತ್ತಾಳೆ. ಶಕುಂತಲಾ ಮಾತು ಕೇಳಿದ ಮಂದಾಕಿನಿ, ಅಪೇಕ್ಷಾ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಳ್ಳುತ್ತಾಳೆ.

ಗೌತಮ್, ಭೂಮಿಕಾ ಜೊತೆ ಮದುವೆಗೆ ಒಪ್ತಾನಾ?
ಇತ್ತ ಮನೆಗೆ ಬರುವ ಶಕುಂತಲಾ, ಗೌತಮ್ ಬಳಿ ಆತನ ಮದುವೆಯ ಬಗ್ಗೆ ಮಾತನಾಡುತ್ತಾಳೆ. ಭೂಮಿಕಾ ನಿನ್ನ ಆಲೋಚನೆಗಳಿಗೆ ಸೂಟ್ ಆಗುತ್ತಾಳೆ. ಅವಳನ್ನು ಒಪ್ಪಿಕೊಂಡರೆ, ಒಟ್ಟಿಗೆ ನಿನ್ನ ಹಾಗೂ ಮಹಿಮಾ ಮದುವೆ ಮಾಡಬಹುದು ಎಂದು ಹೇಳುತ್ತಾಳೆ. ಆದರೆ, ಗೌತಮ್ ಒಪ್ಪುವುದಿಲ್ಲ. ಆ ಜಗಳಗಂಟಿಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳುತ್ತಾನೆ. ಆಗ ಮಹಿಮಾ ತಾನೂ ಕೂಡ ಜೀವನ್ನನ್ನು ಮದುವೆಯಾಗಲ್ಲ ಎಂದು ಸಿಟ್ಟು ಮಾಡಿಕೊಂಡು ಹೋಗುತ್ತಾಳೆ. ಗೆಳೆಯ ಆನಂದ್ ಕೂಡ ನಿನಗೆ ಭೂಮಿಕಾ ಸೂಟ್ ಆಗುತ್ತಾಳೆ. ಅವಳನ್ನು ಒಪ್ಪಿಕೋ ಎಂದು ಗೌತಮ್ಗೆ ಬಲವಂತ ಮಾಡುತ್ತಾನೆ. ಗೌತಮ್ ಯೋಚಿಸಲು ಶುರು ಮಾಡುತ್ತಾನೆ.
ಗೌತಮ್ ಜೊತೆಗೆ ಅಪೇಕ್ಷಾ ಮದುವೆ
ಇನ್ನು ಮಂದಾಕಿನಿ ಮನೆಯಲ್ಲಿ ಅಪೇಕ್ಷಾ ಹಾಗೂ ಗೌತಮ್ ಮದುವೆ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಜೀವನ್, ಭೂಮಿಕಾ ಹಾಗೂ ಸದಾಶಿವ ಈ ಮದುವೆ ಬೇಡ ಎಂದು ಹೇಳುತ್ತಿರುತ್ತಾರೆ. ಆದರೆ ಭೂಮಿಕಾಳಿಗೆ ಮಂದಾಕಿನಿ ಬೈಯುತ್ತಾಳೆ. ಅಪೇಕ್ಷಾ ಜೀವನದ ಬಗ್ಗೆ ನನಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎನ್ನುತ್ತಾಳೆ. ಭೂಮಿಕಾ ಹಣಕ್ಕೆ ಆಸೆ ಪಟ್ಟು ಅಪೇಕ್ಷಾ ಜೀವನ ಹಾಳು ಮಾಡುವುದು ಬೇಡ ಎನ್ನುತ್ತಾಳೆ.
ಇದ್ದಕ್ಕಿದ್ದಂತೆ ಅಪೇಕ್ಷಾ ತನಗೆ ಗೌತಮ್ನನ್ನು ಮದುವೆಯಾಗಲು ಇಷ್ಟವಿದೆ ಎಂದಾಗ ಭೂಮಿಕಾ ಅಳಲು ಶುರು ಮಾಡುತ್ತಾಳೆ. ಭೂಮಿಕಾಳಿಗೆ ತನ್ನ ಜೀವನದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಹೇಳುತ್ತಾಳೆ. ಈ ಅಪಾರ್ಥ ಹೇಗೆ ಸರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











