Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾದ ಕರಾಳ ಮುಖ ಬಿಚ್ಚಿಟ್ಟ ನಟ ಅನಿರುದ್ಧ
ಕೊರೊನಾದ ಎರಡನೇ ಅಲೆ ಮೊದಲನೇಯದ್ದಕ್ಕಿಂತಲೂ ಭೀಕರವಾಗಿ ಎರಗಿದಂತಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗುತ್ತಿಲ್ಲ, ಆಮ್ಲಜನಕ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಹೆಣಗಳ ಅಂತ್ಯಸಂಸ್ಕಾರಕ್ಕೆ ಹೊಸ ಸ್ಮಶಾನಗಳನ್ನೇ ತೆರೆಯಲಾಗುತ್ತಿದೆ.
Recommended Video
ಎರಡನೇ ಅಲೆಯಲ್ಲಿ ಹಲವು ಸೆಲೆಬ್ರಿಟಿಗಳು ಕೋವಿಡ್ಗೆ ತುತ್ತಾಗಿದ್ದಾರೆ ಜೊತೆಗೆ ಕೊರೊನಾದ ತಮ್ಮ ಕರಾಳ ಮುಖವನ್ನು ಹತ್ತಿರದಿಂದ ನೋಡಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಗಾಯಕಿ ಕಸ್ತೂರಿ ಶಂಖರ್, ನಟಿ ಶಾಲಿನಿ, ಅನು ಪ್ರಭಾಕರ್, ನಟ ಪವನ್ ಆದ ಬಳಿಕ ಈಗ ನಟ ಅನಿರುದ್ಧ ಅವರು ತಮಗಾದ ಕೊರೊನಾದ ಕೆಟ್ಟ ಅನುಭವದ ಬಗ್ಗೆ ಮಾತಾಡಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಪ್ರಕಟಿಸಿರುವ ಅನಿರುದ್ಧ ಕೊರೊನಾದ ಕರಾಳ ಮುಖ ತೆರೆದಿಟ್ಟಿದ್ದಾರೆ.
ನಟ ಅನಿರುದ್ಧ ಅವರ ಗೆಳೆಯರೊಬ್ಬರು ಕೊರೊನಾಕ್ಕೆ ತುತ್ತಾಗಿದ್ದರಂತೆ. ಅವರಿಗೆ ಆಸ್ಪತ್ರೆ ಬೆಡ್ ಹಾಗೂ ಆಮ್ಲಜನಕ ಒದಗಿಸಲು ಬಹಳ ಪ್ರಯಾಸ ಪಟ್ಟಿದ್ದಾಗಿ ಅನಿರುದ್ಧ ವಿಡಿಯೋದಲ್ಲಿ ಹೇಳಿದ್ದಾರೆ. ಸಾಕಷ್ಟು ಪ್ರಭಾವ ಬಳಸಿದ ಬಳಿಕ ಬೆಡ್ ಹಾಗೂ ಆಮ್ಲಜನಕ ಸಿಕ್ಕಿತಾದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಅನಿರುದ್ಧ.
ಸ್ಮಶಾನದ ಮುಂದೆ ಆಂಬುಲೆನ್ಸ್ ವಾಹಗಳು ಸಾಲುಗಟ್ಟಿ ನಿಂತಿವೆ. ಸುಮಾರು 40ಕ್ಕೂ ಹೆಚ್ಚು ಆಂಬುಲೆನ್ಸ್ಗಳು ಹೆಣಗಳನ್ನು ಪ್ರತಿದಿನ ಕರೆತರುತ್ತಿವೆ. ಸರದಿ ಸಾಲಿನಲ್ಲಿ ನಿಂತು ಅಂತ್ಯಸಂಸ್ಕಾರ ಮಾಡಲಾಯಿತು. ಅದನ್ನೆಲ್ಲಾ ನೋಡಿ ಆತಂಕವಾಯಿತು ಎಂದಿದ್ದಾರೆ ಅನಿರುದ್ಧ.
ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಬೆಡ್ ಸಿಕ್ಕರೆ ಐಸಿಯು ಇರುವುದಿಲ್ಲ. ಆಮ್ಲಜನಕ ಇರುವುದಿಲ್ಲ. ರೆಮ್ಡಿಸಿವರ್ ಸಿಗುತ್ತಿಲ್ಲ ಎಲ್ಲದಕ್ಕೂ ಬಹಳ ಕಷ್ಟವಿದೆ. ಆಹಾಕಾರವೆದ್ದಿದೆ, ದಯವಿಟ್ಟು ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ ಅನಿರುದ್ಧ.