Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಂಜಲಿ' ಧಾರಾವಾಹಿಯ ಮುದ್ದು ಗುಮ್ಮ ಈಗೇನು ಮಾಡ್ತಿದ್ದಾರೆ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿ ಪ್ರಧಾನ ಧಾರಾವಾಹಿ 'ಮಹಾದೇವಿ ಯಲ್ಲಿ ಹಿರಣ್ಮಯಿ ಆಗಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಮನ ಸೆಳೆದಿದ್ದ ಬಾಲನಟಿ ಶ್ರಿತ ಮಧುಸೂದನ್ ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಮೂರು ನಾಲ್ಕು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ಶ್ರಿತ ಮಧುಸೂದನ್ ಈಗ ಬಣ್ಣದ ಲೋಕದಿಂದ ವಿರಾಮ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಮಹಿಳಾ ಸೇವಾ ಸಮಾಜ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಶ್ರಿತ ಸದ್ಯ ಓದಿನತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಅದೇ ಕಾರಣದಿಂದ ನಟನೆಯಿಂದ ಆಕೆ ದೂರವಿದ್ದಾಳೆ. ಮಗಳ ನಟನಾ ಪಯಣದ ಕುರಿತು ಮಾತನಾಡುವ ಶಿಲ್ಪ ಮಧುಸೂದನ್ " ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ನಾಯಕಿ ಅನು ಆಗಿ ಮಗಳು ಶ್ರಿತ ನಟಿಸಿದ್ದರು. ಆ ಧಾರಾವಾಹಿಯು ತೆಲುಗು ಹಾಗೂ ತಮಿಳು ಭಾಷೆಗೆ ರಿಮೇಕ್ ಕೂಡಾ ಆಗಿದ್ದು ಅದರಲ್ಲಿಯೂ ಶ್ರಿತಗೆ ನಟಿಸುವ ಅವಕಾಶ ದೊರಕಿತ್ತು. ಆದರೆ ಸದ್ಯ ಶ್ರಿತ ಗಮನವೆಲ್ಲಾ ಓದಿನತ್ತ ಇರುವುದರಿಂದ ಯಾವುದೇ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿಲ್ಲ" ಎಂದು ಹೇಳುತ್ತಾರೆ.
ಪ್ರೀತಿಯ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜಿನಿ
ಶ್ರಿತಗೆ ಆಗ ಕೇವಲ ಎರಡು ವರ್ಷ. ಆಗಲೇ ಆಕೆಗೆ ತಾನು ನಟಿಯಾಗಬೇಕು ಎಂಬ ಆಸೆಯಿತ್ತು. ನಟನಾ ಕ್ಷೇತ್ರದಲ್ಲಿ ಕಾಣಿಸಬೇಕು ಎಂಬ ಬಯಕೆ ಹೊಂದಿದ್ದ ಶ್ರಿತ ಕನ್ನಡಿಯ ಮುಂದೆ ನಿಂತು ನಟಿಸುತ್ತಿದ್ದಳು. ಮಾತ್ರವಲ್ಲ ಆಕೆಯನ್ನು ಯಾರಾದರೂ ದೊಡ್ಡವಳಾದ ಮೇಲೆ ಏನಾಗುತ್ತೀಯಾ ಎಂದು ಕೇಳಿದರಂತೂ ಆಕೆ ನಟಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಳು.
ಅಮೂಲ್ಯ ಆಗಿ ನಟನೆಗೆ ಪಾದಾರ್ಪಣೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ "ಅಮೃತವರ್ಷಿಣಿ" ಯ ಮೂಲಕ ಮುದ್ದು ಪೋರಿ ಶ್ರಿತ ನಟನಾ ಪಯಣ ಶುರುವಾಯಿತು. "ಅಮೃತ ವರ್ಷಿಣಿ" ಧಾರಾವಾಹಿಯಲ್ಲಿ ನಾಯಕಿ ಅಮೃತಾ ಮಗಳು ಅಮೂಲ್ಯ ಪಾತ್ರಕ್ಕೆ ಜೀವ ತುಂಬಿದ್ದ ಶ್ರಿತ ಬಾಲನಟಿಯಾಗಿ ಕಣ್ಮನ ಸೆಳೆದರು.
ಮುದ್ದು ಗುಮ್ಮನಾಗಿ ಶ್ರಿತ ಮೋಡಿ
'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಮಗಳಾಗಿ ನಟಿಸಿದ್ದ ಈಕೆ ಮುಂದೆ ಕಾಣಿಸಿಕೊಂಡಿದ್ದು 'ಅಂಜಲಿ' ಧಾರಾವಾಹಿಯಲ್ಲಿ. ಅದು ಪ್ರಧಾನ ಪಾತ್ರದಲ್ಲಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಂಜಲಿ' ಧಾರಾವಾಹಿಯಲ್ಲಿ ಮುದ್ದು ಗುಮ್ಮ ಆಗಿ ಶ್ರಿತ ಕಾಣಿಸಿಕೊಂಡಿದ್ದರು. ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಈ ಮುದ್ದು ಗುಮ್ಮನ ನಟನೆಗೆ ಫಿದಾ ಆಗಿದ್ದರು.
ಹಿರಣ್ಮಯಿ ಆಗಿ ಫೇಮಸ್ಸು!
ಶ್ರುತಿ ನಾಯ್ಡು ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿ ಪ್ರಧಾನ ಧಾರಾವಾಹಿ "ಮಹಾದೇವಿ"ಯಲ್ಲಿ ಹಿರಣ್ಮಯಿ ಆಗಿ ನಟಿಸಿದ್ದರು. ತನ್ನ ನಟನೆಯಿಂದ ಸೈ ಎನಿಸಿಕೊಂಡಿರುವ ಪೋರಿ ಮನೆ ಮಾತಾಗಿದ್ದಾರೆ. ತದ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ನಾನು ನನ್ನ ಕನಸು" ಧಾರಾವಾಹಿಯಲ್ಲಿ ಅನು ಆಗಿ ಕಾಣಿಸಿಕೊಂಡಿದ್ದ ಶ್ರಿತ ಮತ್ತೆ ಬೇರೆ ಯಾವುದೋ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಓದಿಗಾಗಿ ನಟನೆಯಿಂದ ದೂರವಿರುವ ಶ್ರಿತ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರಾ ಎಂದು ಕಾದುನೋಡಬೇಕಾಗಿದೆ.